Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯಾಕೀ ಗೊಡವೆ?
Share:
Poems August 10, 2023 ಜ್ಯೋತಿಲಿಂಗಪ್ಪ

ಯಾಕೀ ಗೊಡವೆ?

ಸಾಯುವುದು
ಒಂದು ದಿನ ಇದ್ದೇ ಇದೆ
ಬಿಡು
ದಿನಾ ಏಕೆ ಸಾಯುವುದು

ದಿನಕೆ ಸಾವಿಲ್ಲವೇ
ಹುಟ್ಟುವ ಭರವಸೆ ಖಂಡಿತಾ

ಹುಟ್ಟೇ ಒಂದು ಮದ
ಸಾವರಿತರೆ ಮದ ಸಾವುದು
ನಿತ್ಯ ಸತ್ಯದ ಗೊಡವೆ ಬೇಕೇ

ಅಲುಗಿಗೆ ಸವರಿದ ತುಪ್ಪ
ಮೂಗಿಗೆ ರುಚಿ ನಾಲಿಗೆಗೆ ಅರುಚಿ

ಕಡಲಾಳ ಅಳೆಯಲು ಮುಳುಗಿರುವೆ
ಮೇಲೇಳದೆ ಅಳೆಯೆ ಆಳ
ಆಳ ಅಳೆದರೆ ಮೇಲೇರಲಾರೆ

ಹೀಗೆ ಬಂದು ಹಾಗೆ ಹೋಗುವುದೇ ಈ ಜೀವ
ಯಾವುದಕ್ಕೂ ಯಾವ ಉದ್ದೇಶವೂ ಇಲ್ಲ

ಸಾಯುವುದು ಇಂದು
ಅಳುವುದು ನಾಳೆಯೇ

ತಳ ಕಾಣದ ಬಾವಿಯಲಿ
ಸೇದಿದಷ್ಟೂ ನೀರು

ಊರ ಬೀದಿಯಲಿ ಆಡುತ್ತಾ
ಹಾಡುತ್ತಾ ಅಲೆದಾಡುವ
ತಥಾಗತ ನಾನಲ್ಲವೇ?

ನನಗೇಕೆ ಈ ಗೊಡವೆ
ನಾನುಂಟು ನನ್ನ ಬದುಕುಂಟು.

Previous post ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
Next post ಎರವಲು ಮನೆ…
ಎರವಲು ಮನೆ…

Related Posts

ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...
ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...

Comments 2

  1. Jayaraj Unakal
    Aug 16, 2023 Reply

    ಸಾವರಿತರೆ ಹುಟ್ಟಿನ ಮದ ಸಾಯುವುದು… ಬ್ಯೂಟಿಫುಲ್ ಸಾಲುಗಳು.

  2. Gangadhara Koppal
    Aug 25, 2023 Reply

    ತಳ ಕಾಣದ ಬಾವಿಯಲಿ
    ಸೇದಿದಷ್ಟೂ ನೀರು- wonderful.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಾರ
ಭಾರ
October 6, 2020
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
Copyright © 2025 Bayalu