Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯಾಕೀ ಗೊಡವೆ?
Share:
Poems August 10, 2023 ಜ್ಯೋತಿಲಿಂಗಪ್ಪ

ಯಾಕೀ ಗೊಡವೆ?

ಸಾಯುವುದು
ಒಂದು ದಿನ ಇದ್ದೇ ಇದೆ
ಬಿಡು
ದಿನಾ ಏಕೆ ಸಾಯುವುದು

ದಿನಕೆ ಸಾವಿಲ್ಲವೇ
ಹುಟ್ಟುವ ಭರವಸೆ ಖಂಡಿತಾ

ಹುಟ್ಟೇ ಒಂದು ಮದ
ಸಾವರಿತರೆ ಮದ ಸಾವುದು
ನಿತ್ಯ ಸತ್ಯದ ಗೊಡವೆ ಬೇಕೇ

ಅಲುಗಿಗೆ ಸವರಿದ ತುಪ್ಪ
ಮೂಗಿಗೆ ರುಚಿ ನಾಲಿಗೆಗೆ ಅರುಚಿ

ಕಡಲಾಳ ಅಳೆಯಲು ಮುಳುಗಿರುವೆ
ಮೇಲೇಳದೆ ಅಳೆಯೆ ಆಳ
ಆಳ ಅಳೆದರೆ ಮೇಲೇರಲಾರೆ

ಹೀಗೆ ಬಂದು ಹಾಗೆ ಹೋಗುವುದೇ ಈ ಜೀವ
ಯಾವುದಕ್ಕೂ ಯಾವ ಉದ್ದೇಶವೂ ಇಲ್ಲ

ಸಾಯುವುದು ಇಂದು
ಅಳುವುದು ನಾಳೆಯೇ

ತಳ ಕಾಣದ ಬಾವಿಯಲಿ
ಸೇದಿದಷ್ಟೂ ನೀರು

ಊರ ಬೀದಿಯಲಿ ಆಡುತ್ತಾ
ಹಾಡುತ್ತಾ ಅಲೆದಾಡುವ
ತಥಾಗತ ನಾನಲ್ಲವೇ?

ನನಗೇಕೆ ಈ ಗೊಡವೆ
ನಾನುಂಟು ನನ್ನ ಬದುಕುಂಟು.

Previous post ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
Next post ಎರವಲು ಮನೆ…
ಎರವಲು ಮನೆ…

Related Posts

ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Comments 2

  1. Jayaraj Unakal
    Aug 16, 2023 Reply

    ಸಾವರಿತರೆ ಹುಟ್ಟಿನ ಮದ ಸಾಯುವುದು… ಬ್ಯೂಟಿಫುಲ್ ಸಾಲುಗಳು.

  2. Gangadhara Koppal
    Aug 25, 2023 Reply

    ತಳ ಕಾಣದ ಬಾವಿಯಲಿ
    ಸೇದಿದಷ್ಟೂ ನೀರು- wonderful.

Leave a Reply to Jayaraj Unakal Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
Copyright © 2026 Bayalu