Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಂಕಿಯೊಳಗಣ ಬೆಳಕು
Share:
Poems June 12, 2025 ಜ್ಯೋತಿಲಿಂಗಪ್ಪ

ಬೆಂಕಿಯೊಳಗಣ ಬೆಳಕು

ನಿಜದ ಮುಖವ ಬಲ್ಲೆಯಾ
ಅವರ ಮುಖವ ಇವರು ನೋಡುವುದು
ಇವರ ಮುಖವ ಅವರು ನೋಡುವುದು
ಅವರವರ ಮುಖವ ಅವರರಿಯರು

ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ

ಹನಿ ಹನಿ ಹರಿದು ಹಳ್ಳ
ಹಳ್ಳ ಹಳ್ಳ ಹರಿದು ಕೊಳ್ಳ
ಕೊಳ್ಳ ಕೊಳ್ಳ ಹರಿದು ಅಬ್ಧಿ

ಹಿರಿದು ಕಿರಿದುಂಟೇ ನೀರಿಗೆ

ಬೆಳಕು ಕಾಣುವ ಕಣ್ಣು
ನೆಲ ಮುಟ್ಟುವ ಪಾದ ಸಯವೇ

ಬೆಂಕಿ ಒಳಗಣ ಬೆಳಕು ಕಣ್ಣ ಸುಟ್ಟಿತ್ತು
ಇದೇನು ಮರೆವೆಯೋ

ಸಾವಿಲ್ಲದೆ ಹುಟ್ಟು ಹೇಗಾದೀತು
ಹುಟ್ಟಿದವುಗಳನೆಲ್ಲಾ ಕೊಲ್ಲುವ ವೇದಿಕೆ ಈ ಜಗತ್ತು

ನೋಡದೆಯೇ ಕಾಣ ಬಂದುದೇ ಜ್ಞಾನ
ನೋಡಿಯೂ ಕಾಣದುದೇ ಅಜ್ಞಾನ

ಕತ್ತಲ ಸುಡುವ ಬೆಂಕಿ ತಮಂಧ
ಘನ ಅರಿಯದೇ….

ಈ ನುಡಿಗಳೆಲ್ಲಾ ನಿನ್ನೆಯದು
ನಾಳೆ ಎಂಬುದು ಏನು…

Previous post ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
Next post ಹಾದಿಯ ಹಣತೆ…
ಹಾದಿಯ ಹಣತೆ…

Related Posts

ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...
ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...

Comments 2

  1. Dr. K.s.Mallesh, Mysuru
    Jun 12, 2025 Reply

    ಬೆಂಕಿಯೊಳಗನ ಬೆಳಕು ಕವನ ಗತಿ ಚೆಂದ ಆದರೆ ಇಲ್ಲಿನ ಸಾಲುಗಳ ಭಾವಾರ್ಥ ತಿಳಿಯಲಿಲ್ಲ.

  2. ಸುಮತಿ ರವೀಂದ್ರ
    Jun 22, 2025 Reply

    ಅನಂತದ ಹುಡುಕಾಟದಲ್ಲಿ ನಾಳೆ ಎಂಬುದು ಏನು- ಅನುಭಾವಿಯ ಪ್ರಶ್ನೆ.

Leave a Reply to ಸುಮತಿ ರವೀಂದ್ರ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಎರವಲು ಮನೆ…
ಎರವಲು ಮನೆ…
August 10, 2023
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಗಂಟಿನ ನಂಟು
ಗಂಟಿನ ನಂಟು
November 7, 2020
Copyright © 2025 Bayalu