Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಂಕಿಯೊಳಗಣ ಬೆಳಕು
Share:
Poems June 12, 2025 ಜ್ಯೋತಿಲಿಂಗಪ್ಪ

ಬೆಂಕಿಯೊಳಗಣ ಬೆಳಕು

ನಿಜದ ಮುಖವ ಬಲ್ಲೆಯಾ
ಅವರ ಮುಖವ ಇವರು ನೋಡುವುದು
ಇವರ ಮುಖವ ಅವರು ನೋಡುವುದು
ಅವರವರ ಮುಖವ ಅವರರಿಯರು

ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ

ಹನಿ ಹನಿ ಹರಿದು ಹಳ್ಳ
ಹಳ್ಳ ಹಳ್ಳ ಹರಿದು ಕೊಳ್ಳ
ಕೊಳ್ಳ ಕೊಳ್ಳ ಹರಿದು ಅಬ್ಧಿ

ಹಿರಿದು ಕಿರಿದುಂಟೇ ನೀರಿಗೆ

ಬೆಳಕು ಕಾಣುವ ಕಣ್ಣು
ನೆಲ ಮುಟ್ಟುವ ಪಾದ ಸಯವೇ

ಬೆಂಕಿ ಒಳಗಣ ಬೆಳಕು ಕಣ್ಣ ಸುಟ್ಟಿತ್ತು
ಇದೇನು ಮರೆವೆಯೋ

ಸಾವಿಲ್ಲದೆ ಹುಟ್ಟು ಹೇಗಾದೀತು
ಹುಟ್ಟಿದವುಗಳನೆಲ್ಲಾ ಕೊಲ್ಲುವ ವೇದಿಕೆ ಈ ಜಗತ್ತು

ನೋಡದೆಯೇ ಕಾಣ ಬಂದುದೇ ಜ್ಞಾನ
ನೋಡಿಯೂ ಕಾಣದುದೇ ಅಜ್ಞಾನ

ಕತ್ತಲ ಸುಡುವ ಬೆಂಕಿ ತಮಂಧ
ಘನ ಅರಿಯದೇ….

ಈ ನುಡಿಗಳೆಲ್ಲಾ ನಿನ್ನೆಯದು
ನಾಳೆ ಎಂಬುದು ಏನು…

Previous post ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
Next post ಹಾದಿಯ ಹಣತೆ…
ಹಾದಿಯ ಹಣತೆ…

Related Posts

ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...
ದಡ ಸೋಂಕದ ಅಲೆಗಳು
Share:
Poems

ದಡ ಸೋಂಕದ ಅಲೆಗಳು

July 10, 2025 ಜ್ಯೋತಿಲಿಂಗಪ್ಪ
ನದಿ ಕೂಡುವ ಕಡಲ ಅಂಚು ನಿಂತು ಸಂಬಂಧ ಹುಡುಕುತಿರುವೆ ಕಡಲ ಸೇರುವ ನೀರು ನದಿ ಯಾವುದು ಕಡಲು ಯಾವುದು ಸಂಬಂಧ ಅಸಂಬಂಧ ಎರಡೆಂಬ ಭಿನ್ನ ಅಳಿಯದೇ.. ದಾರಿ ತೋರುವ ಕೈಯ ಹಿಡಿದಿರುವೆ...

Comments 2

  1. Dr. K.s.Mallesh, Mysuru
    Jun 12, 2025 Reply

    ಬೆಂಕಿಯೊಳಗನ ಬೆಳಕು ಕವನ ಗತಿ ಚೆಂದ ಆದರೆ ಇಲ್ಲಿನ ಸಾಲುಗಳ ಭಾವಾರ್ಥ ತಿಳಿಯಲಿಲ್ಲ.

  2. ಸುಮತಿ ರವೀಂದ್ರ
    Jun 22, 2025 Reply

    ಅನಂತದ ಹುಡುಕಾಟದಲ್ಲಿ ನಾಳೆ ಎಂಬುದು ಏನು- ಅನುಭಾವಿಯ ಪ್ರಶ್ನೆ.

Leave a Reply to Dr. K.s.Mallesh, Mysuru Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
April 6, 2023
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಈ ಬಳ್ಳಿ…
ಈ ಬಳ್ಳಿ…
October 21, 2024
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಹಣತೆ ಸಾಕು
ಹಣತೆ ಸಾಕು
September 14, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
Copyright © 2025 Bayalu