Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು ಯಾರು?
Share:
Poems December 8, 2021 Bayalu

ನಾನು ಯಾರು?

ಕನ್ನಡಿ ಪ್ರತಿಬಿಂಬದಲ್ಲಿ ಕಂಡ
ಕರಿಮೈಯ ಕವಚ ನೋಡಿ
ಊಹಿಸಿಕೊಂಡದ್ದು
ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ
ಹೋದವರನು ಕಂಡು
ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಿನ್ನ ನೀ ತಿಳಿಯೆಂದು ಹೊರಟು
ಗೀತೆ-ಭಾಷ್ಯಗಳಲಿ, ಗಾಹೆ-ದೋಹೆಗಳಲಿ
ಅಹಂಬ್ರಹ್ಮನೆಂದು ಏಕಾತ್ಮವಾಗಿ
ಅನಾತ್ಮವ ನೋಡಿ
ಪಾಂಡಿತ್ಯದ ಸೊಕ್ಕಿನಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಾನೆಂಬುದೇ ಅಹಂಕಾರ
ನೀನೆಂಬುದೇ ಮಾಯೆ!
ಮನಸಿಜನ ಮಾಯೆ ವಿಧಿ ವಿಳಸನದಲ್ಲಿ ನೆರಂಬಡೆ
ಕೊಂದು ಕೂಗದೇ ನರರುಂ!
ಮನಸಿಜನ ಮೋಸವನರಿತ ಅಮನಸ್ಕ ಕೇಳಿದ ನಾನು ಯಾರು?

ಮೇಲೆ ಮಂಟಪದಾ ವಸ್ತು
ಬ್ರಹ್ಮಾಂಡ ಪಿಂಡಾಂಡವಾಗಿರಲು
ಪಿಂಡವನಳಿಸಿ ಬ್ರಹ್ಮಾಂಡ ಬಯಲಾಗಿ
ಧಮ್ಮ ಪವತ್ತನವ ಹಿಡಿದಾತ ಕೇಳಿದ ನಾನು ಯಾರು?

ನಾನು ಯಾರು ಕೊಟ್ಟ ಕುದುರೆಯನು ಏರಲರಿಯದವನ
ಪ್ರಶ್ನೆ ಮತ್ತು ಉತ್ತರ
ನಾನು ಇಲ್ಲವೆಂದು ಹೊರಟ ವೆಂಕಟಗಿರಿಯಪ್ಪ
ಬುಟ್ಟಪ್ಪ ಹುಟ್ಲಪ್ಪ
ಕಾಯಕ ಕೇವಲಿಗಳು, ನಿಜಯೋಗಿಗಳು…

-ಕೇಶವಮೂರ್ತಿ ಹೆಚ್.ಎನ್
(‘ನಾನು ಯಾರು? ಎಂಬ ಆಳ-ನಿರಾಳ’ ಪುಸ್ತಕದ ಪ್ರೇರಣೆ)

Previous post ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
Next post ಬೆಳಕಲಿ ದೀಪ
ಬೆಳಕಲಿ ದೀಪ

Related Posts

ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 3

  1. K.S. Shivashankar
    Dec 14, 2021 Reply

    ನಾನು ಯಾರು? ಪುಸ್ತಕವನ್ನು ನಾನೂ ಓದಿದೆ. ಇಲ್ಲಿನ ಕವಿಗಳು ಪುಸ್ತಕದ ಸದಾಶಯವನ್ನು ಕಾವ್ಯದಲ್ಲಿ ಸೊಗಸಾಗಿ ಮೂಡಿಸಿದ್ದಾರೆ.

  2. ಅಹ್ಮದ್
    Jul 21, 2022 Reply

    ಚೆನ್ನಾಗಿದೆ

  3. ವೀರೇಶ್
    Sep 15, 2024 Reply

    ನಾನೆಂಬುದೇ ಅಹಂಕಾರ ನೀನೆಂಬುದೇ ಮಾಯೆ! ✍🏻👌🏻

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಕೇಳಿಸಿತೇ?
ಕೇಳಿಸಿತೇ?
April 6, 2024
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ವೀರ
ವೀರ
April 29, 2018
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ವಚನ – ಚಿಂತನ
ವಚನ – ಚಿಂತನ
October 10, 2023
Copyright © 2025 Bayalu