Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೆದುರು ನಾ…
Share:
Poems March 6, 2024 ಕೆ.ಆರ್ ಮಂಗಳಾ

ನನ್ನೆದುರು ನಾ…

ಅದೇಕೋ ಮೊನ್ನೆ ಮೊನ್ನೆ
ಸಂತೆ ತೋರುವೆ, ಜಾತ್ರೆ ನೋಡುವೆ
ನಡಿ ನನ್ನೊಡನೆ ಎಂದ ಗುರು
ಹಿಗ್ಗಿನಲಿ, ಗೆಲುವಿನಲಿ
ಚೆಂದದ ಸಿಂಗಾರದಲಿ
ಹೊರಟಿತ್ತು ನನ್ನ ಮೆರವಣಿಗೆ
ಸಂಭ್ರಮವೇನು, ಕುತೂಹಲಗಳೇನು
ಪ್ರಶ್ನೆಗಳ ಸುರಿಮಳೆಯೇನು…

ಆತನ ದಾಪುಗಾಲಿಗೆ ಸಮವೇ
ನನ್ನ ಪುಟ್ಟ ಹೆಜ್ಜೆ
ಸೋಲುತಿದ್ದವು… ಎಷ್ಟುದ್ದದ ದಾರಿ…
ಸಾಕೆನಿಸಿ ದಣಿವಾಗಿ ಅಲ್ಲಲ್ಲಿ ನಿಂತಾಗ
ಕತೆಯ ನೇಯುತ ನಡೆಸುತಿದ್ದ
ದಣಿವ ಮರೆಸುತ್ತಾ…

ಯಾರ ಮಾತೂ ಯಾರಿಗೂ ಕೇಳದ
ಜನಜಂಗುಳಿಯ ಮುಂದೆ…
ಬಂದು ನಿಂತದ್ದೇ ತಿಳಿಯಲಿಲ್ಲ
ಗೌಜಿನಲಿ ಕಳೆದೀಯ,
ತಪ್ಪಿಸಿಕೊಂಡು ಅಲೆದೀಯ
ಜೋಪಾನವೆನುತಾ ಕೈಯ ಬಿಟ್ಟಿದ್ದಾ…

ಯಾರಿವರು ನೆರೆದವರು
ನಂಟರು, ಗುರುತಿನವರು
ಯಾರಾದರೂ ಇದ್ದಾರೆಯೇ
ಕತ್ತು ಹೊರಳಿಸಿದಲೆಲ್ಲಾ
ಕಣ್ಣಿಟ್ಟು ದಿಟ್ಟಿಸಿದಡಲೆಲ್ಲಾ
ಅರೆ, ನನ್ನದೇ ನೋಟ!!

ಮೈಯು ಬೆವತಿತ್ತು, ಎದೆಯು ನಡುಗಿತ್ತು
ಎಲ್ಲ ಮುಖಗಳಲೂ ನನ್ನದೇ ಬಿಂಬ
ಮರೆವೋ… ಅರಿವೋ…
ಭ್ರಮೆಯ ಹಿಂದಿತ್ತು
ನಾನು, ನಾನು, ನಾನು…
ಕನ್ನಡಿಯ ಕೋಣೆಯಲಿ
ಸಿಕ್ಕಿ ಬಿದ್ದಿಹ ಸತ್ಯ ಕಣ್ಣೆದುರೆ ತೆರೆದಿತ್ತು…
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಯದೋ?

Previous post ಈ ಕನ್ನಡಿ
ಈ ಕನ್ನಡಿ
Next post ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ

Related Posts

ಸುತ್ತಿ ಸುಳಿವ ಆಟ
Share:
Poems

ಸುತ್ತಿ ಸುಳಿವ ಆಟ

May 6, 2021 ಕೆ.ಆರ್ ಮಂಗಳಾ
ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ ಜೇನಿನಂಥ ಮಾತುಗಳ ನಂಬಿಬಿಟ್ಟೆ ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ ಗಿರಿಗಿಟ್ಲೆ ಆಟದಲ್ಲಿ...
ಕಾಲ ಎಲ್ಲಿದೆ?
Share:
Poems

ಕಾಲ ಎಲ್ಲಿದೆ?

January 7, 2022 ಕೆ.ಆರ್ ಮಂಗಳಾ
ಎಲ್ಲವನೂ… ಎಲ್ಲರನೂ… ಮಣಿಸುತಾ, ಬಾಗಿಸುತಾ ಕಾಣಿಸುತಾ, ಕಣ್ಮರೆಯಾಗಿಸುತಾ ತಾನೇ ಅಂತಿಮವೆನುವ ಮಾಯಾವಿ ಕಾಲಕ್ಕೆ ಇದೆಯೇ ಅಸ್ತಿತ್ವ? ಉರುಳುರುಳಿ ಹೊರಳುತಿಹ ಭುವಿಯ ಚಲನೆಯಲಿ ನಮ್ಮ...

Comments 1

  1. ಮುಗದ
    Mar 20, 2024 Reply

    ಹುಡುಕುವದು ನನ್ನೊಳಗೆ ಇದೆ ಎಂಬುದು ತಿಳಿಯದೆ ಕಾಡು ಮೇಡುಗಳನ್ನೆಲ್ಲ ಸುತ್ತಿ ಅಲೆದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಸೂರ್ಯ
ಸೂರ್ಯ
January 8, 2023
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
Copyright © 2026 Bayalu