Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆ ಸುಜ್ಞಾನವೇ…
Share:
Poems September 7, 2021 ಕೆ.ಆರ್ ಮಂಗಳಾ

ಗುರುವೆ ಸುಜ್ಞಾನವೇ…

ಇದೆ ಎಂದೊಲಿದದ್ದು ಇಲ್ಲ
ಹಾಗೇನೂ ಅಲ್ಲ
ಎಂದು ಬಲವಾಗಿ ನಂಬಿದ್ದೂ
ಇಲ್ಲವೇ ಇಲ್ಲ…

ಹಂಬಲಿಸಿ ಹಿಡಿದಿದ್ದೆ
ಹಟ ತೊಟ್ಟು ಪಡೆದಿದ್ದೆ
ಹಬ್ಬಿಸಿಕೊಂಡಿದ್ದೇ
ಕುಸುರಿ ಭಾವಗಳ,
ಮನದ ಕವಾಟಗಳಲ್ಲಿ
ಮಧುರ ಮಾತುಗಳಲ್ಲಿ…

ಬಣ್ಣಗೆಟ್ಟವು
ದಿಕ್ಕು ಬದಲಿಸಿದವು
ನಾನೆಂಬ ದಿಬ್ಬವನು
ಒದ್ದು ಓಡಿದವು
ಕಾಲಸರಿದಂತೆಲ್ಲ
ಎಲ್ಲೋ ಮಾಯವಾದವು.
ಆದರೂ…
ಹಳಹಳಿಸಿದ ಮನ
ಮರೆವ ಕೊಡವಲಿಲ್ಲ
ಕಣ್ಣಲ್ಲಿ ಕಣ್ಣಿಟ್ಟು
ನಿಜವ ಹುಡುಕಲಿಲ್ಲ
ನಿಶೆ ಇಳಿದ ಮೇಲಾದರೂ
ಹಗಲಾಗ ಬೇಕಿತ್ತು…

ಪೊರೆಗಟ್ಟಿದ ಕಣ್ಣಲಿ
ಬೆಳಕಿನೆಳೆಗಳು
ತೂರುವುದು ಉಂಟೆ?
ಕಂಬಳಿ ಹೊದ್ದ ಎದೆಗೆ
ತಿಳಿಗಾಳಿಯಲೆ
ನುಸುಳ ಬಲ್ಲುದೆ?
ಉಸಿರಿಗೆ ತಡೆಯಾದ
ಹೊದಿಕೆಯ ಸರಿಸಲು
ಗಮನಕೆ ಅಡ್ಡಿಯಾದ
ಪೊರೆಯ ಕತ್ತರಿಸಲು
ನಿಂತ ಕಾಲುಗಳಿಗೆ
ನಡೆಯ ತೋರಿಸಲು
ಓ ಗುರುವೇ…
ನೀನೇ ಬರಬೇಕಾಯಿತು
ಕೈಹಿಡಿದು
ಭಾವ ಕಂದಕವನು
ದಾಟುವುದ ಕಲಿಸಲು.

Previous post ಕಣ್ಣ ದೀಪ
ಕಣ್ಣ ದೀಪ
Next post ವಚನಗಳ ಮಹತ್ವ
ವಚನಗಳ ಮಹತ್ವ

Related Posts

ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...
ಪ್ರೇಮ ಮತ್ತು ದ್ವೇಷ
Share:
Poems

ಪ್ರೇಮ ಮತ್ತು ದ್ವೇಷ

July 10, 2025 ಜಬೀವುಲ್ಲಾ ಎಂ.ಅಸದ್
ಹಾರುವುದಾದರೂ ಎಲ್ಲಿಗೆ? ರೆಕ್ಕೆ ಇಲ್ಲದ ಹಕ್ಕಿಗಳು ಹೇಗೆ? ಗಾಳಿ ಹಾರಿಸುವುದಿಲ್ಲ ನೆಲ ನಡೆಸುವುದಿಲ್ಲ ಜಲ ಈಜಿಸುವುದಿಲ್ಲ ಕಲಿಯಬೇಕು ತಂತಾನೆ ಎಲ್ಲಾ ಹಾಗೂ ಪ್ರೀತಿಸುವುದನ್ನು...

Comments 3

  1. Chandrika
    Sep 11, 2021 Reply

    ಭಾವದ ಭವವನ್ನು ದಾಟಲು ಗುರುವಿನ ಕೈಹಿಡಿದು ನಡೆವ ಬಗೆ ಸುಂದರವಾಗಿ ಅಭಿವ್ಯಕ್ತವಾಗಿದೆ.

  2. ಕೆ. ಎಸ್. ಮಲ್ಲೇಶ್
    Oct 8, 2021 Reply

    ಸರಳ ಹಾಗೂ ನೇರ ಪದಗಳಲ್ಲಿ ಅನುಪಮ ರೂಪಕಗಳ ಮೂಲಕ ಗುರುವಿನ ಮಹತ್ವವನ್ನು ಮನಮುಟ್ಟುವಂತೆ ತಿಳಿಸುವ ಕವನ. ಐಹಿಕ ಬದುಕಿನ ತೋರಿಕೆಯ ಆವರಣದೊಳಗೆ ಸಿಲುಕಿದ ಜೀವಕ್ಕೆ ಕೊನೆಗೂ ಗುರು ನಿಲುಕಿದ್ದು -ಇದೇ ಭವಕ್ಕೆ ಅನುಭಾವದ ಸಿಂಚನ

  3. SHARAN swami
    Oct 14, 2021 Reply

    ಗುರು ಶಿಷ್ಯರ ಸಂಬಂಧದ ಮಹತ್ವ ಮಧುರ ರೀತಿಯಲ್ಲಿ ಭಾವಗಳ ಮೂಲಕ ವ್ಯಕ್ತಪಡಿಸಿದ್ಧಿರಿ. ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಶರಣ- ಎಂದರೆ…
ಶರಣ- ಎಂದರೆ…
March 6, 2020
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
Copyright © 2025 Bayalu