Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದಷ್ಟೇ…
Share:
Poems January 10, 2021 ಜ್ಯೋತಿಲಿಂಗಪ್ಪ

ಇದ್ದಷ್ಟೇ…

ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ
ಇರುವಷ್ಟು ಇರುವುದು ಇದ್ದ ಹಾಗೆ ಇರು

ಕನಸು ಇದ್ದಾಗಷ್ಟೇ ಕನಸು ಇರುವುದು
ಎಚ್ಚರಾದರೆ ಕನಸು ಕನವರಿಸುವುದು

ಎಚ್ಚರಾಗು ಉದಯದ ಮೊದಲ ಕಿರಣ ಕಣ್ಣ ತುಂಬಲಿ
ಈಗಷ್ಟೇ ಮುಂಝಾವದ ಕನಸು ಕಳೆದಿದೆ

ಕಳೆದಿರುಳಿನ ನಿರ್ಮೌನ ನಿನ್ನೆ ಕಳೆದಿದೆ
ನೆನಹುಗಳು ಒಂದೊಂದು ತೂರಿ ಬರುವದರಲಿ ತೂರಿ ಬಿಡು
ತೋರುವ ದಾರಿಯಲಿ ಕತ್ತಲೂ ಇದೆ ಬೆಳಕೂ ಇದೆ

ಮೆಟ್ಟಲುಗಳಿಲ್ಲದ ಬಾವಿ ಬಿಂಬ ಕಾಣದು
ಅಪ್ಪುವಿನಿಂದೆದ್ದ ಕೆಂಡದಲಿ ಜ್ಯೊತಿ ಇದೆ

ಬಯಲು ನುಡಿಯಲಾಗದು ಎಂದೇನಲ್ಲ
ಇದೇ ಎಂದು ನುಡಿಯಬಾರದು

ಅಳತೆ ಇಲ್ಲದೆ ಅಳೆಯುವ ಕಣ್ಣು ನನದಲ್ಲ.

Previous post ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
Next post ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ

Related Posts

ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...
ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...

Comments 1

  1. Karthik Mannur
    Jan 14, 2021 Reply

    ಯಾವುದು ಕನಸು, ಯಾವುದು ಎಚ್ಚರ? ಎರಡರಲ್ಲೂ ಜೀವ ಬಳಲುತ್ತದೆ! ಸುಂದರ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭೃತ್ಯಾಚಾರ
ಭೃತ್ಯಾಚಾರ
June 5, 2021
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ನಡೆಯ ಎಡೆ…
ನಡೆಯ ಎಡೆ…
April 5, 2026
ನಾನು  ಬಿಂಬ
ನಾನು ಬಿಂಬ
September 13, 2025
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಕೇಳಿಸಿತೇ?
ಕೇಳಿಸಿತೇ?
April 6, 2024
Copyright © 2026 Bayalu