Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ…
Share:
Poems August 8, 2021 ಜ್ಯೋತಿಲಿಂಗಪ್ಪ

ಹುಡುಕಾಟ…

ಈ
ಮರವೆ
ಯಾವಾಗ ಬರುತ್ತೋ
ಕಾಯುತಾ ಕುಳಿತಿರುವೆ

ಅಲೆದಾಡಿ ಕಾಲು ಸೋತಿವೆ
ಹುಡುಕಾಡಿ ಕಣ್ಣು ಸೋತಿವೆ

ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ
ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ

ಕೊಟ್ಟಿಗೆಯಲಿ ಕಟ್ಟಿ ಹಾಕಿರುವ
ಎತ್ತಿನ ಹೆಗಲೊಳಗೆ ಸುಕ್ಕುಸುಕ್ಕು
ಪಕ್ಕದ ಹೆಂಡದಂಗಡಿಯ ಹುಳಿ
ವಾಸನೆ ಮರೆಯದೆ ಕಟ್ಟಿದೆ

ಕಾಣುತಿದೆ
ನೀರ ಒಳಗಣ ಚಂದಿರನ ಬಿರುಕು
ಈಗಲೂ…

ಹೋದವರು ಹೋದ ದಾರಿ
ತಿರುಗಿ ಬಾರದ ದಾರಿಯಲಿ
ಕುಳಿತಿರುವೆ

ಹೆಜ್ಜೆ ಗುರುತು ಮರೆಯುವ ಮೊದಲು
ಕೊಟ್ಟಿಗೆಯಿಂದ ತಪ್ಪಿಸಿಕೊಂಡ ಹೋರಿ
ಹುಡುಕಬೇಕು ಮರೆಯದೆ.

Previous post ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
Next post ಅರಿವು-ಮರೆವಿನಾಟ
ಅರಿವು-ಮರೆವಿನಾಟ

Related Posts

ಗೆರೆ ಎಳೆಯದೆ…
Share:
Poems

ಗೆರೆ ಎಳೆಯದೆ…

October 13, 2022 ಜ್ಯೋತಿಲಿಂಗಪ್ಪ
ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 3

  1. Kavyashree
    Aug 9, 2021 Reply

    ಹೌದು ಸರ್, ನಮ್ಮ ಪಂಚೇಂದ್ರಿಯಗಳೆಲ್ಲಾ ಅರಗಿಸಿಕೊಳ್ಳಲಾಗದ ರುಚಿಯ ಕಂಡಿವೆ- ಕವನ ಬಹಳ ಸೊಗಸಾಗಿದೆ.

  2. Shambhulingaiah
    Aug 14, 2021 Reply

    ತಿರುಗಿ ಬಾರದ ದಾರಿಯಲಿ
    ಕುಳಿತಿರುವೆ- ಮತ್ತೇ ಬಾರದ ದಾರಿಯನ್ನು ಸವೆಸುತ್ತಿದ್ದೇವೆ- ಸುಂದರ, ಅರ್ಥಗರ್ಭಿತ ಕವನ.

  3. Padmalaya
    Aug 21, 2021 Reply

    ಜೋತಿಲಿಂಗಪ್ಪನವರ ಕಾವ್ಯ ಸಂಚಿಕೆಯಲ್ಲಿ ಈ ಕವನ ನನಗೆ ಆಕರ್ಷಣೀಯವಾದದ್ದು.ಏಕೆಂದರೆ..ಅವರ ಕವನ ವಿಧಾನದಲ್ಲಿ ರೂಪಕಗಳು ಕರುಳು ಕೊಯ್ಸಿಕೊಳ್ಳುತ್ತವೆ.ಈ ಕವನದಲ್ಲಿ ತುಂಬಾ ಫಲವತ್ತಾಗಿ ರೂಪಕದ ಬೆಳೆ ತೆಗಯುತ್ತಾರೆ.”ಪಕ್ಕದ ಹೆಂಡದಂಗಡಿಯ ಹುಳಿ ವಾಸನೆ.” “ಅರಗಿಸಲಾರದ ರುಚಿ ಕಂಡಿದೆ ನಾಲಿಗೆ”…ಇಂತಹ ರೂಪಕಗಳು ಅಂತರಂಗದ ಆಳದಲ್ಲಿ ಮಡುಗಟ್ಟಿರುವ ಗಬ್ಬು ಗಲೀಜನ್ನ ಹಂಗಿಲ್ಲದೇ ಪ್ರಶ್ನಿಸುತ್ತವೆ…ಅವರ ಕಾವ್ಯ ಝರಿಗಾಗಿ ಅವರಿಗೊಂದು ಸಲಾಂ…..!!!!!!!!!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುವಂದನೆ
ಗುರುವಂದನೆ
October 13, 2022
ಗೇಣು ದಾರಿ
ಗೇಣು ದಾರಿ
July 10, 2023
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
April 6, 2023
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಮರೆತೆ…
ಮರೆತೆ…
July 4, 2022
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
Copyright © 2026 Bayalu