Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾತು ಮಾಯೆ
Share:
Poems July 4, 2021 ಕೆ.ಆರ್ ಮಂಗಳಾ

ಮಾತು ಮಾಯೆ

ಶಬ್ದಗಳ ಅರಣ್ಯದಲಿ
ಕಳೆದು ಹೋಗಿದ್ದೀ
ನಾನಿನ್ನು ಮಾತನಾಡಲಾರೆ
ನಿನ್ನ ನೀನೇ ಹುಡುಕಿಕೋ-
ಅಂದ ಗುರು
ಹೀಗೊಂದು ದಿನ ಮೌನವಾಗಿಬಿಟ್ಟ!

ಸುಳ್ಳಲ್ಲ ನಿಜ,
ಅವರ ಒಂದೊಂದು
ನುಡಿಗಳೂ ಹೊಸದಾಗಿದ್ದವು
ಎಲ್ಲಿಯೂ ಯಾರಿಂದಲೂ ಕೇಳಿರದವು
ಯಾವ ಹೊತ್ತಿಗೆಯಲೂ ಓದದವು
ತಲೆ ಒಪ್ಪುವಂತೆ
ಹೃದಯ ಅರಳುವಂತೆ
ಕೈಮರದ ತಂಗಾಳಿಯಂತೆ…

ಮರುಳಾಯಿತೆ ಮನ ಶಬ್ದಸುಖಕೆ?
ಎಲ್ಲಿದ್ದೇನೆ ಈಗ?
ಮಾತುಗಳ ಕಟ್ಟುವ ಮನಸ್ಸಲ್ಲೋ
ಪೇರಿಸಿಟ್ಟುಕೊಂಡ ಜ್ಞಾನದಲ್ಲೋ
ಅವು ತೋರಲೆತ್ನಿಸುತಿಹ ಹಾದಿಯಲ್ಲೋ…

Previous post ನಾನು… ನನ್ನದು
ನಾನು… ನನ್ನದು
Next post ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು

Related Posts

ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...
ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...

Comments 2

  1. ಡಾ.ಬಸವರಾಜ ಸಬರದ
    Jul 5, 2021 Reply

    ಮಂಗಳಾ ಅವರ ಕವಿತೆ ಅರ್ಥಪೂರ್ಣವಾಗಿದೆ.ಒಂದೊಂದು ಸಾಲೂ ಚಿಂತನೆಗೆ ಹಚ್ಚುತ್ತದೆ.

  2. Padmalaya
    Jul 9, 2021 Reply

    ಬದುಕಿನ ಸಮಸ್ಯೆಗಳೊಂದಿಗೆ ಇದ್ದದ್ದು ಇದ್ದಂಗೆ ಬರೆಯಮ್ಮ….ಒಳ್ಳೆಯ ಕಾವ್ಯ ಮೂಡಬಹುದು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಮೀನಿನ ಬಯಕೆ
ಮೀನಿನ ಬಯಕೆ
June 10, 2023
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ದಾಸೋಹ ತತ್ವ
ದಾಸೋಹ ತತ್ವ
January 10, 2021
ಮರೆತೆ…
ಮರೆತೆ…
July 4, 2022
ಅನುಭವ ಮಂಟಪ
ಅನುಭವ ಮಂಟಪ
April 11, 2025
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
Copyright © 2026 Bayalu