Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾತು ಮಾಯೆ
Share:
Poems July 4, 2021 ಕೆ.ಆರ್ ಮಂಗಳಾ

ಮಾತು ಮಾಯೆ

ಶಬ್ದಗಳ ಅರಣ್ಯದಲಿ
ಕಳೆದು ಹೋಗಿದ್ದೀ
ನಾನಿನ್ನು ಮಾತನಾಡಲಾರೆ
ನಿನ್ನ ನೀನೇ ಹುಡುಕಿಕೋ-
ಅಂದ ಗುರು
ಹೀಗೊಂದು ದಿನ ಮೌನವಾಗಿಬಿಟ್ಟ!

ಸುಳ್ಳಲ್ಲ ನಿಜ,
ಅವರ ಒಂದೊಂದು
ನುಡಿಗಳೂ ಹೊಸದಾಗಿದ್ದವು
ಎಲ್ಲಿಯೂ ಯಾರಿಂದಲೂ ಕೇಳಿರದವು
ಯಾವ ಹೊತ್ತಿಗೆಯಲೂ ಓದದವು
ತಲೆ ಒಪ್ಪುವಂತೆ
ಹೃದಯ ಅರಳುವಂತೆ
ಕೈಮರದ ತಂಗಾಳಿಯಂತೆ…

ಮರುಳಾಯಿತೆ ಮನ ಶಬ್ದಸುಖಕೆ?
ಎಲ್ಲಿದ್ದೇನೆ ಈಗ?
ಮಾತುಗಳ ಕಟ್ಟುವ ಮನಸ್ಸಲ್ಲೋ
ಪೇರಿಸಿಟ್ಟುಕೊಂಡ ಜ್ಞಾನದಲ್ಲೋ
ಅವು ತೋರಲೆತ್ನಿಸುತಿಹ ಹಾದಿಯಲ್ಲೋ…

Previous post ನಾನು… ನನ್ನದು
ನಾನು… ನನ್ನದು
Next post ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು

Related Posts

ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...
ಸುಮ್ಮನೆ ಇರು
Share:
Poems

ಸುಮ್ಮನೆ ಇರು

December 6, 2020 ಜ್ಯೋತಿಲಿಂಗಪ್ಪ
ನಾನು ನೋಡಿದ್ದೇನು ಕೇಳಿದ್ದೇನು ಬಿಡು ನಾನಿರುವುದೇ ಹೀಗೆ ನೋಡೆ ಕೇಳೆ ಕಣ್ಣ ಕೊಳೆ ಕಿವಿಯ ಕಸ ತೊಳೆ ಇರುವೆ ಇರುವ ಹಾಗೆ ನಿನ್ನ ಬೆಳಕಲಿ ನನ್ನ ನೆಳಲ ತುಂಬದಿರು ಕೇಡು ನನದಲ್ಲ...

Comments 2

  1. ಡಾ.ಬಸವರಾಜ ಸಬರದ
    Jul 5, 2021 Reply

    ಮಂಗಳಾ ಅವರ ಕವಿತೆ ಅರ್ಥಪೂರ್ಣವಾಗಿದೆ.ಒಂದೊಂದು ಸಾಲೂ ಚಿಂತನೆಗೆ ಹಚ್ಚುತ್ತದೆ.

  2. Padmalaya
    Jul 9, 2021 Reply

    ಬದುಕಿನ ಸಮಸ್ಯೆಗಳೊಂದಿಗೆ ಇದ್ದದ್ದು ಇದ್ದಂಗೆ ಬರೆಯಮ್ಮ….ಒಳ್ಳೆಯ ಕಾವ್ಯ ಮೂಡಬಹುದು

Leave a Reply to ಡಾ.ಬಸವರಾಜ ಸಬರದ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದೇಹ ದೇವಾಲಯ
ದೇಹ ದೇವಾಲಯ
June 12, 2025
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
Copyright © 2025 Bayalu