Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯೋ ಗುರುವೇ…
Share:
Poems February 11, 2022 ಕೆ.ಆರ್ ಮಂಗಳಾ

ಕಾಯೋ ಗುರುವೇ…

ನಾನು:

ಗಾಳಿಯೇ ಆಡದ, ಕತ್ತಲ ಕೋಣ್ಯಾಗ
ಕಳೆದು ಹೋಗಿನಿ ನನ ಗುರುವೆ
ಚಿಲಕವ ಸರಿಸಿ, ಬಾಗಿಲು ತೆಗೆದು
ಬೆಳಕಾ ತೋರಿಸು ನನ ಗುರುವೆ

ತಡವುತ ಎಡವುತ, ಅಲ್ಲಲ್ಲೇ ಸುತ್ತುತ
ಹೈರಾಣಾಗಿಹೆ ನನ ಗುರುವೆ
ರಾಗವೂ ಬೇಡ, ಮೋಹವೂ ಬೇಡ
ಆಗಸ ತೋರಿಸು ನನ ಗುರುವೆ

ಕನಸಲಿ ಕರಗುತ, ಭವದಲಿ ಬೇಯುತ
ಬಸವಳಿದಿರುವೆ ನನ ಗುರುವೆ
ಅಂಟನು ಬಿಡಿಸಿ, ವಿಷಯವ ಹರಿಸಿ
ಮುಕ್ತಿಯ ತೋರೊ ನನ ಗುರುವೆ

ಗುರು:

ಕೋಣೆಯೂ ಇಲ್ಲ, ಕತ್ತಲೂ ಇಲ್ಲ
ಬಾಗಿಲು ಎಲ್ಲಿದೆ ಹೇಳಮ್ಮಾ
ಇಲ್ಲದ ಕೋಣೆಗೆ ಚಿಲಕವ ಜಡಿದು
ಒಳಗೆ ಅಡಗಿದೆ ಯಾಕಮ್ಮಾ?

ಕಣ್ಣನು ತೆರೆದು ಕಸವನು ತೆಗೆದು
ನಿಜವನು ತಿಳಿದು ನೋಡಮ್ಮ
ಭ್ರಮೆಯನು ಜಾಡಿಸಿ, ಮನಸನು ಕೊಡವಲು
ಅಲ್ಲೇ ಬಯಲಿದೆ ಕಾಣಮ್ಮ

ನೀನೇ ಬೆಳಗು, ನೀನೇ ಆಗಸ
ನೀನೇ ಲಿಂಗವು ಅರಿಯಮ್ಮಾ.

Previous post ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
Next post ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...

Comments 5

  1. nynitha
    Feb 12, 2022 Reply

    ಕಾಯೋ ಗುರುವೆ ಕವನ ಬಹಳ ಸೊಗಸಾಗಿದೆ!

  2. Manohara acharya
    Feb 12, 2022 Reply

    Very nice

  3. Padmalaya
    Feb 17, 2022 Reply

    ವಾವ್…ಸೂಪರ್

  4. Perooru Jaru
    Feb 17, 2022 Reply

    ಬಾಗಿಲು ನೀವು ಹಾಕಿಕೊಂಡಿಲ್ಲ, ಈ ಸಮಾಜ ಹಾಕಿದೆ. ಯಾವ ಗುರುವೂ ಈ ಸಮಾಜದ ಸೆರೆಮನೆಯಿಂದ ನಿಮ್ಮನ್ನು ಸಾವಿನ ತನಕ ಬಿಡಿಸಲಾರ.

  5. Suma
    Feb 17, 2022 Reply

    Amazing ..eloquently written

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಾಸೋಹ ತತ್ವ
ದಾಸೋಹ ತತ್ವ
January 10, 2021
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
April 5, 2026
ಇದ್ದಷ್ಟೇ…
ಇದ್ದಷ್ಟೇ…
January 10, 2021
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಹಣತೆ ಸಾಕು
ಹಣತೆ ಸಾಕು
September 14, 2024
Copyright © 2026 Bayalu