Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುತ್ತೂರಿ…
Share:
Poems June 10, 2023 ಕೆ.ಆರ್ ಮಂಗಳಾ

ತುತ್ತೂರಿ…

ತುತ್ತೂರಿ ತುತ್ತೂರಿ
ಯಾಕೆ ಇಂತಹ ಪಿತೂರಿ?

ಯಾವುದೇ ಮಾತಲೂ ನಿನ್ನದೇ ರಾಗ
ಯಾವುದೇ ಭಾವಕೂ ನಿನ್ನದೇ ತಾಳ
ಬಾಯಿಬಿಟ್ಟರೂ ನಿನ್ನದೇ ಗಾನ
ಮೌನದಲಿದ್ದರೂ ನಿನ್ನದೇ ಧ್ಯಾನ
ಮಾತುಮಾತಿನಲೂ ನಿನ್ನದೇ ಹೊಳಪು
ಸ್ವಗತದ ಸರಿಗಮ ನಿನ್ನದೇ ಛಾಪು!

ತುತ್ತೂರಿ ತುತ್ತೂರಿ…

ಹಿಂದಕೆ ಹೋದರೂ ಕಾಲಿಗೆ ಸಿಗುವೆ
ಮುಂದಕೆ ಬಂದರೂ ಕಣ್ಮುಂದೇ ಇರುವೆ
ಕಡೆಗಣಿಸಿದರೂ ಕಾಯುತ ನಿಲ್ಲುವೆ
ತಳ್ಳುತಲಿದ್ದರೂ ನುಸುನುಸುಳಿ ಬರುವೆ
ಸರಿಸುತಲಿದ್ದರೂ ಹೇಗೋ ನುಗ್ಗುವೆ
ಎಲ್ಲಿದೆಯೊ ಅರಿಯೆ ನೀನಿಲ್ಲದ ತಾಣ

ತುತ್ತೂರಿ ತುತ್ತೂರಿ…

ನೆನಪಿನ ಕನವರಿಕೆಗಳೆಲ್ಲ ನೀನೇ
ನಾಳಿನ ಕನಸುಗಳೆಲ್ಲವೂ ನೀನೇ
ಭಾವಗಳುದ್ದಕೂ ಮೈಚಾಚಿರುವೆ
ತಲೆಯೊಳಗೆ ಅಡಗಿ ಕುಳಿತಿರುವೆ
ನಿನ್ನೆ-ನಾಳೆಗಳ ಜೀಕುವ ಮನದಲಿ
ನೀನಲ್ಲದೆ ಬೇರೇನಿದೆ ಅಲ್ಲಿ?

ತುತ್ತೂರಿ ತುತ್ತೂರಿ…

ಬಗೆಬಗೆಯ ರೂಪದೊಳಿರುವೆ
ಗುರುತಿಸದಂತೆ ವೇಷವ ತೊಡುವೆ
ಕೈಗೆ ಸಿಗದಂತೆ ಬಣ್ಣ ಬದಲಿಸುವೆ
ಸಮಯಕೆ ತಕ್ಕ ರಾಗ ಹಾಕುವೆ
ನೀನರಿಯದ ತಂತ್ರಗಳಿವೆಯೇ?
ನೀನರಿಯದ ಕಪಟಗಳಿವೆಯೇ?

ತುತ್ತೂರಿ ತುತ್ತೂರಿ…

ಮೈಯನಪ್ಪಿದ ಮಾಯೆಯು ನೀನು
ಬುದ್ಧಿಗೆ ಬಡಿದ ಭೂತವು ನೀನು
ಕಾಣದೆ ಅಂಟಿದ ಸೂತಕ ನೀನು
ನಾನೆ ನೀನೆಂದು ಸಾಧಿಸಿ ಗೆದ್ದೆI
ನಿನ್ನನ್ನೇ ನಾನೆಂದು ನಂಬಿದೆ
ನಿನ್ನದೆ ಗದ್ದುಗೆ ನಿನ್ನದೆ ಶಾಸನ

ತುತ್ತೂರಿ ತುತ್ತೂರಿ…

ಇಂತು
ಸ್ವಯದ ಮೇಲೆ ಸಾಗಿತ್ತು
ಪರದ ಮೆರವಣಿಗೆ
ಗುರು ಬರುವ ತನಕ ನಡೆದಿತ್ತು
ಸೆಂಗೋಲಿನ ಉರವಣಿಗೆ…

Previous post ಮೀನಿನ ಬಯಕೆ
ಮೀನಿನ ಬಯಕೆ
Next post ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…

Related Posts

ನಡೆಯ ಎಡೆ…
Share:
Poems

ನಡೆಯ ಎಡೆ…

April 5, 2026 ಕೆ.ಆರ್ ಮಂಗಳಾ
ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...
ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಶಿವಾಚಾರ
ಶಿವಾಚಾರ
April 9, 2021
ಗುರುಪಥ
ಗುರುಪಥ
January 4, 2020
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಗಂಟಿನ ನಂಟು
ಗಂಟಿನ ನಂಟು
November 7, 2020
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
Copyright © 2026 Bayalu