Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುತ್ತೂರಿ…
Share:
Poems June 10, 2023 ಕೆ.ಆರ್ ಮಂಗಳಾ

ತುತ್ತೂರಿ…

ತುತ್ತೂರಿ ತುತ್ತೂರಿ
ಯಾಕೆ ಇಂತಹ ಪಿತೂರಿ?

ಯಾವುದೇ ಮಾತಲೂ ನಿನ್ನದೇ ರಾಗ
ಯಾವುದೇ ಭಾವಕೂ ನಿನ್ನದೇ ತಾಳ
ಬಾಯಿಬಿಟ್ಟರೂ ನಿನ್ನದೇ ಗಾನ
ಮೌನದಲಿದ್ದರೂ ನಿನ್ನದೇ ಧ್ಯಾನ
ಮಾತುಮಾತಿನಲೂ ನಿನ್ನದೇ ಹೊಳಪು
ಸ್ವಗತದ ಸರಿಗಮ ನಿನ್ನದೇ ಛಾಪು!

ತುತ್ತೂರಿ ತುತ್ತೂರಿ…

ಹಿಂದಕೆ ಹೋದರೂ ಕಾಲಿಗೆ ಸಿಗುವೆ
ಮುಂದಕೆ ಬಂದರೂ ಕಣ್ಮುಂದೇ ಇರುವೆ
ಕಡೆಗಣಿಸಿದರೂ ಕಾಯುತ ನಿಲ್ಲುವೆ
ತಳ್ಳುತಲಿದ್ದರೂ ನುಸುನುಸುಳಿ ಬರುವೆ
ಸರಿಸುತಲಿದ್ದರೂ ಹೇಗೋ ನುಗ್ಗುವೆ
ಎಲ್ಲಿದೆಯೊ ಅರಿಯೆ ನೀನಿಲ್ಲದ ತಾಣ

ತುತ್ತೂರಿ ತುತ್ತೂರಿ…

ನೆನಪಿನ ಕನವರಿಕೆಗಳೆಲ್ಲ ನೀನೇ
ನಾಳಿನ ಕನಸುಗಳೆಲ್ಲವೂ ನೀನೇ
ಭಾವಗಳುದ್ದಕೂ ಮೈಚಾಚಿರುವೆ
ತಲೆಯೊಳಗೆ ಅಡಗಿ ಕುಳಿತಿರುವೆ
ನಿನ್ನೆ-ನಾಳೆಗಳ ಜೀಕುವ ಮನದಲಿ
ನೀನಲ್ಲದೆ ಬೇರೇನಿದೆ ಅಲ್ಲಿ?

ತುತ್ತೂರಿ ತುತ್ತೂರಿ…

ಬಗೆಬಗೆಯ ರೂಪದೊಳಿರುವೆ
ಗುರುತಿಸದಂತೆ ವೇಷವ ತೊಡುವೆ
ಕೈಗೆ ಸಿಗದಂತೆ ಬಣ್ಣ ಬದಲಿಸುವೆ
ಸಮಯಕೆ ತಕ್ಕ ರಾಗ ಹಾಕುವೆ
ನೀನರಿಯದ ತಂತ್ರಗಳಿವೆಯೇ?
ನೀನರಿಯದ ಕಪಟಗಳಿವೆಯೇ?

ತುತ್ತೂರಿ ತುತ್ತೂರಿ…

ಮೈಯನಪ್ಪಿದ ಮಾಯೆಯು ನೀನು
ಬುದ್ಧಿಗೆ ಬಡಿದ ಭೂತವು ನೀನು
ಕಾಣದೆ ಅಂಟಿದ ಸೂತಕ ನೀನು
ನಾನೆ ನೀನೆಂದು ಸಾಧಿಸಿ ಗೆದ್ದೆI
ನಿನ್ನನ್ನೇ ನಾನೆಂದು ನಂಬಿದೆ
ನಿನ್ನದೆ ಗದ್ದುಗೆ ನಿನ್ನದೆ ಶಾಸನ

ತುತ್ತೂರಿ ತುತ್ತೂರಿ…

ಇಂತು
ಸ್ವಯದ ಮೇಲೆ ಸಾಗಿತ್ತು
ಪರದ ಮೆರವಣಿಗೆ
ಗುರು ಬರುವ ತನಕ ನಡೆದಿತ್ತು
ಸೆಂಗೋಲಿನ ಉರವಣಿಗೆ…

Previous post ಮೀನಿನ ಬಯಕೆ
ಮೀನಿನ ಬಯಕೆ
Next post ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…

Related Posts

ಮನಸ್ಸು
Share:
Poems

ಮನಸ್ಸು

September 7, 2020 ಕೆ.ಆರ್ ಮಂಗಳಾ
ಏನ ಹೇಳಲಿ ಗುರುವೇ ಮನಸಿನ ಬಗೆಗೆ? ಹಿಂದಕ್ಕೆ ಜಾರುತ್ತಾ ಮುಂದಕ್ಕೆ ತುಯ್ಯುತ್ತಾ ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ ಇದಾವ ಮರದ ಕೊಂಬೆಗೆ ನೇತು ಹಾಕಿಕೊಂಡಿದೆ… ಎಂದು ಕಟ್ಟಿದೆನೋ...
ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಳಗಣ ಮರ
ಒಳಗಣ ಮರ
March 12, 2022
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
Copyright © 2026 Bayalu