Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯೋ ಗುರುವೇ…
Share:
Poems February 11, 2022 ಕೆ.ಆರ್ ಮಂಗಳಾ

ಕಾಯೋ ಗುರುವೇ…

ನಾನು:

ಗಾಳಿಯೇ ಆಡದ, ಕತ್ತಲ ಕೋಣ್ಯಾಗ
ಕಳೆದು ಹೋಗಿನಿ ನನ ಗುರುವೆ
ಚಿಲಕವ ಸರಿಸಿ, ಬಾಗಿಲು ತೆಗೆದು
ಬೆಳಕಾ ತೋರಿಸು ನನ ಗುರುವೆ

ತಡವುತ ಎಡವುತ, ಅಲ್ಲಲ್ಲೇ ಸುತ್ತುತ
ಹೈರಾಣಾಗಿಹೆ ನನ ಗುರುವೆ
ರಾಗವೂ ಬೇಡ, ಮೋಹವೂ ಬೇಡ
ಆಗಸ ತೋರಿಸು ನನ ಗುರುವೆ

ಕನಸಲಿ ಕರಗುತ, ಭವದಲಿ ಬೇಯುತ
ಬಸವಳಿದಿರುವೆ ನನ ಗುರುವೆ
ಅಂಟನು ಬಿಡಿಸಿ, ವಿಷಯವ ಹರಿಸಿ
ಮುಕ್ತಿಯ ತೋರೊ ನನ ಗುರುವೆ

ಗುರು:

ಕೋಣೆಯೂ ಇಲ್ಲ, ಕತ್ತಲೂ ಇಲ್ಲ
ಬಾಗಿಲು ಎಲ್ಲಿದೆ ಹೇಳಮ್ಮಾ
ಇಲ್ಲದ ಕೋಣೆಗೆ ಚಿಲಕವ ಜಡಿದು
ಒಳಗೆ ಅಡಗಿದೆ ಯಾಕಮ್ಮಾ?

ಕಣ್ಣನು ತೆರೆದು ಕಸವನು ತೆಗೆದು
ನಿಜವನು ತಿಳಿದು ನೋಡಮ್ಮ
ಭ್ರಮೆಯನು ಜಾಡಿಸಿ, ಮನಸನು ಕೊಡವಲು
ಅಲ್ಲೇ ಬಯಲಿದೆ ಕಾಣಮ್ಮ

ನೀನೇ ಬೆಳಗು, ನೀನೇ ಆಗಸ
ನೀನೇ ಲಿಂಗವು ಅರಿಯಮ್ಮಾ.

Previous post ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
Next post ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

April 11, 2025 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 5

  1. nynitha
    Feb 12, 2022 Reply

    ಕಾಯೋ ಗುರುವೆ ಕವನ ಬಹಳ ಸೊಗಸಾಗಿದೆ!

  2. Manohara acharya
    Feb 12, 2022 Reply

    Very nice

  3. Padmalaya
    Feb 17, 2022 Reply

    ವಾವ್…ಸೂಪರ್

  4. Perooru Jaru
    Feb 17, 2022 Reply

    ಬಾಗಿಲು ನೀವು ಹಾಕಿಕೊಂಡಿಲ್ಲ, ಈ ಸಮಾಜ ಹಾಕಿದೆ. ಯಾವ ಗುರುವೂ ಈ ಸಮಾಜದ ಸೆರೆಮನೆಯಿಂದ ನಿಮ್ಮನ್ನು ಸಾವಿನ ತನಕ ಬಿಡಿಸಲಾರ.

  5. Suma
    Feb 17, 2022 Reply

    Amazing ..eloquently written

Leave a Reply to Padmalaya Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ನೆಲದ ನಿಧಾನ
ನೆಲದ ನಿಧಾನ
April 29, 2018
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
Copyright © 2025 Bayalu