Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಣ್ಣ ದೀಪ
Share:
Poems September 7, 2021 ಜ್ಯೋತಿಲಿಂಗಪ್ಪ

ಕಣ್ಣ ದೀಪ

ನನ್ನ
ಮನೆಯ ಅಂಗಳದಲ್ಲಿ
ಒಬ್ಬ ಬುದ್ಧನಿದ್ದಾನೆ

ಶೋ ಕೇಸಿನಲ್ಲಿ
ಒಬ್ಬ ಬುದ್ಧನಿದ್ದಾನೆ

ಗೋಡೆಯ ಮೇಲೆ
ಒಬ್ಬ ಬುದ್ಧನಿದ್ದಾನೆ

ಎಲ್ಲೆಲ್ಲೂ ಬುದ್ಧ ಬುದ್ಧ
ಒಳಗೆ ಖಾಲಿ

ಗೋಡೆಯ
ಹಿಂದೆ ದೀಪ ಇಟ್ಟು ಹೋದ

ಊರು
ತುಂಬಾ ಬಿಕ್ಕುಗಳೇ

ಬೇಡುವ
ಕೈ ಕೊಡುವ ಕೈಯ ಕಾಯುತಿದೆ

ಬಯಲ
ಹುಡುಕಿ ಹೊರಟಿದ್ದು ನಿಜ
ಬಯಲಾಗಲಿಲ್ಲ

ನಿಜದ
ದಾರಿಯಲಿ ಸಿಕ್ಕಿದ್ದು
ಬಯಲು

ಕಣ್ಣ
ದೀಪ ಆರಿಸುವ ಗಾಳಿ
ಕತ್ತಲು

ಈಗ
ಊರ ತುಂಬಾ ಬಸವಗಳೇ
ಲಿಂಗವಿಲ್ಲ

ಆ
ಪ್ರಾಣಿಗೆ ಹೊಟ್ಟೆ
ತುಂಬಿತೋ ಸಿಟ್ಟೆಲ್ಲಾ ಇಳಿಯಿತು

ಈ
ಪ್ರಾಣಕೆ ಹೊಟ್ಟೆಯೇ ಇಲ್ಲಾ
ಸಿಟ್ಟೇ ಎಲ್ಲಾ.

Previous post ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
Next post ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…

Related Posts

ಒಂದು ತೊಟ್ಟು ಬೆಳಕು
Share:
Poems

ಒಂದು ತೊಟ್ಟು ಬೆಳಕು

February 7, 2021 ಜ್ಯೋತಿಲಿಂಗಪ್ಪ
ಈ ಕತ್ತಲು ಒಂದು ತೊಟ್ಟು ಬೆಳಕು ಕುಡಿಯಿತು ಅಮಲೇರಿದೆ ಗಾಳಿ ಪಾಲು ಮುಂದಣ ಗೆರೆ ಹಿಂದಕೂ ತಾಗಿದೆ ಪರಿಧಿಯ ಬಿಂದು ತನ್ನ ಇಚ್ಛೆಯನರಿಯದು ಸುತ್ತುವುದು ಬಯಲು ಎಂಬುದೇನು ಬಯಲು ಏನೂ...
ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...

Comments 2

  1. Rajesh Bhadravathi
    Sep 9, 2021 Reply

    ನನ್ನ ಮನೆಯಲ್ಲೂ ಬುದ್ಧನ ಮೂರ್ತಿಗಳು ತುಂಬಿಕೊಂಡಿವೆ. ನಿಮ್ಮ ಕವನದ ಆಶಯ ನೇರ ನನ್ನ ಮನಸ್ಸನ್ನೇ ಕೆಣಕುವಂತೆ ತೋರಿತು.

  2. Shrinivasa
    Sep 23, 2021 Reply

    I absolutely love your blog, content and layout are amazing. I find many of your posts to be exactly what I am looking for. Thank you.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನಸ್ಸು
ಮನಸ್ಸು
September 7, 2020
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…
October 19, 2025
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
Copyright © 2025 Bayalu