Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಣ್ಣ ದೀಪ
Share:
Poems September 7, 2021 ಜ್ಯೋತಿಲಿಂಗಪ್ಪ

ಕಣ್ಣ ದೀಪ

ನನ್ನ
ಮನೆಯ ಅಂಗಳದಲ್ಲಿ
ಒಬ್ಬ ಬುದ್ಧನಿದ್ದಾನೆ

ಶೋ ಕೇಸಿನಲ್ಲಿ
ಒಬ್ಬ ಬುದ್ಧನಿದ್ದಾನೆ

ಗೋಡೆಯ ಮೇಲೆ
ಒಬ್ಬ ಬುದ್ಧನಿದ್ದಾನೆ

ಎಲ್ಲೆಲ್ಲೂ ಬುದ್ಧ ಬುದ್ಧ
ಒಳಗೆ ಖಾಲಿ

ಗೋಡೆಯ
ಹಿಂದೆ ದೀಪ ಇಟ್ಟು ಹೋದ

ಊರು
ತುಂಬಾ ಬಿಕ್ಕುಗಳೇ

ಬೇಡುವ
ಕೈ ಕೊಡುವ ಕೈಯ ಕಾಯುತಿದೆ

ಬಯಲ
ಹುಡುಕಿ ಹೊರಟಿದ್ದು ನಿಜ
ಬಯಲಾಗಲಿಲ್ಲ

ನಿಜದ
ದಾರಿಯಲಿ ಸಿಕ್ಕಿದ್ದು
ಬಯಲು

ಕಣ್ಣ
ದೀಪ ಆರಿಸುವ ಗಾಳಿ
ಕತ್ತಲು

ಈಗ
ಊರ ತುಂಬಾ ಬಸವಗಳೇ
ಲಿಂಗವಿಲ್ಲ

ಆ
ಪ್ರಾಣಿಗೆ ಹೊಟ್ಟೆ
ತುಂಬಿತೋ ಸಿಟ್ಟೆಲ್ಲಾ ಇಳಿಯಿತು

ಈ
ಪ್ರಾಣಕೆ ಹೊಟ್ಟೆಯೇ ಇಲ್ಲಾ
ಸಿಟ್ಟೇ ಎಲ್ಲಾ.

Previous post ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
Next post ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...

Comments 2

  1. Rajesh Bhadravathi
    Sep 9, 2021 Reply

    ನನ್ನ ಮನೆಯಲ್ಲೂ ಬುದ್ಧನ ಮೂರ್ತಿಗಳು ತುಂಬಿಕೊಂಡಿವೆ. ನಿಮ್ಮ ಕವನದ ಆಶಯ ನೇರ ನನ್ನ ಮನಸ್ಸನ್ನೇ ಕೆಣಕುವಂತೆ ತೋರಿತು.

  2. Shrinivasa
    Sep 23, 2021 Reply

    I absolutely love your blog, content and layout are amazing. I find many of your posts to be exactly what I am looking for. Thank you.

Leave a Reply to Shrinivasa Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ನೆಲದ ನಿಧಾನ
ನೆಲದ ನಿಧಾನ
April 29, 2018
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
Copyright © 2026 Bayalu