Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸನ್ಯಾಸ ದೀಕ್ಷೆ
Share:
Poems June 12, 2025 ಜಬೀವುಲ್ಲಾ ಎಂ.ಅಸದ್

ಸನ್ಯಾಸ ದೀಕ್ಷೆ

ತುಂಬಿದ ಅಹಂ- ಸ್ವಾರ್ಥದ ಚೀಲವನು
ಬಯಲಿಗೊಯ್ದು ಸುರಿದು
ಸ್ವತಃ ಖಾಲಿಯಾಗಿ
ಸಂಭ್ರಮಿಸುವುದು – ಸನ್ಯಾಸ

ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ
ಬೇರು ಬಿಟ್ಟು ಬಿಸಿಲು ಗಾಳಿಗೆ ತೂಗಿ
ನೆರಳು, ಫಲ ನೀಡಿ
ಜೀವ ಸಂಕುಲಕೆ ನೆರವಾಗುವುದು – ಸನ್ಯಾಸ

ಇರುವುದನ್ನೆಲ್ಲ ಕಳೆದುಕೊಂಡು
ಪಡೆದದ್ದೆಲ್ಲವ ಹಂಚಿ ಬರಡಾಗಿ
ಬರಿಗೈಗಳ ಕಂಡು
ತಾನೇ ಧನ್ಯಗೊಳ್ಳುವುದು – ಸನ್ಯಾಸ

ಹಸಿವನ್ನು ನುಂಗಿ, ತೃಷೆಯನ್ನು ಮೀರಿ
ಧ್ಯಾನದಿ ಮುಗುಳ್ನಕ್ಕು,
ಕೈಗೆ ಸಿಕ್ಕ ಅರಿವೆ ಸುತ್ತಿ
ಬಯಲಾಗುವುದು – ಸನ್ಯಾಸ

ಸೂರ್ಯನೊಂದಿಗೆ ಎದ್ದು
ಚಂದಿರನೊಟ್ಟಿಗೆ ಆಕಳಿಸಿ
ಕಾಲದೊಂದಿಗೆ ಕೂಡಿ
ಲೋಕದ ಹೊಲಸು ಗುಡಿಸುವುದು – ಸನ್ಯಾಸ

ಹಕ್ಕಿಯ ರೆಕ್ಕೆ ಸವರಿ, ಚಿಗುರುವ ಎಲೆಗೆ ನಮಿಸಿ
ಅರಳುವ ಹೂವಿಗೆ ಮುತ್ತಿಟ್ಟು
ಮಗುವಂತೆ ಮಕ್ಕಳೊಟ್ಟಿಗೆ
ಆಡಿ ದಣಿಯುವುದು – ಸನ್ಯಾಸ!

ಬಿದಿರ ಮೆಳೆಯ ನಡುವೆ ಕೂತು
ಜಗದ ಸಂತೆಯ ಮರೆತು
ಕೊಳಲ ದೇಹಕೆ ಉಸಿರ ಸುರಿದು
ಪ್ರಕೃತಿಗೆ ಕೃತಜ್ಞನಾಗುವುದು – ಸನ್ಯಾಸ!

Previous post ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
Next post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು

Related Posts

ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...
ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...

Comments 2

  1. Pro. Mallesh K.S, Mysuru
    Jun 12, 2025 Reply

    ಸನ್ಯಾಸ ಕವನದ ಹೂರಣ ಚೆನ್ನಾಗಿದೆ. ಆದರೆ ಗದ್ಯ ಪದ್ಯದ ಮಿಶ್ರಣದಂತಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಜಬೀವುಲ್ಲಾ ಎಂ ಅಸದರವರ ಸನ್ಯಾಸ ದೀಕ್ಷೆ ಕವನ 👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
Copyright © 2025 Bayalu