Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯಾಕೀ ಗೊಡವೆ?
Share:
Poems August 10, 2023 ಜ್ಯೋತಿಲಿಂಗಪ್ಪ

ಯಾಕೀ ಗೊಡವೆ?

ಸಾಯುವುದು
ಒಂದು ದಿನ ಇದ್ದೇ ಇದೆ
ಬಿಡು
ದಿನಾ ಏಕೆ ಸಾಯುವುದು

ದಿನಕೆ ಸಾವಿಲ್ಲವೇ
ಹುಟ್ಟುವ ಭರವಸೆ ಖಂಡಿತಾ

ಹುಟ್ಟೇ ಒಂದು ಮದ
ಸಾವರಿತರೆ ಮದ ಸಾವುದು
ನಿತ್ಯ ಸತ್ಯದ ಗೊಡವೆ ಬೇಕೇ

ಅಲುಗಿಗೆ ಸವರಿದ ತುಪ್ಪ
ಮೂಗಿಗೆ ರುಚಿ ನಾಲಿಗೆಗೆ ಅರುಚಿ

ಕಡಲಾಳ ಅಳೆಯಲು ಮುಳುಗಿರುವೆ
ಮೇಲೇಳದೆ ಅಳೆಯೆ ಆಳ
ಆಳ ಅಳೆದರೆ ಮೇಲೇರಲಾರೆ

ಹೀಗೆ ಬಂದು ಹಾಗೆ ಹೋಗುವುದೇ ಈ ಜೀವ
ಯಾವುದಕ್ಕೂ ಯಾವ ಉದ್ದೇಶವೂ ಇಲ್ಲ

ಸಾಯುವುದು ಇಂದು
ಅಳುವುದು ನಾಳೆಯೇ

ತಳ ಕಾಣದ ಬಾವಿಯಲಿ
ಸೇದಿದಷ್ಟೂ ನೀರು

ಊರ ಬೀದಿಯಲಿ ಆಡುತ್ತಾ
ಹಾಡುತ್ತಾ ಅಲೆದಾಡುವ
ತಥಾಗತ ನಾನಲ್ಲವೇ?

ನನಗೇಕೆ ಈ ಗೊಡವೆ
ನಾನುಂಟು ನನ್ನ ಬದುಕುಂಟು.

Previous post ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
Next post ಎರವಲು ಮನೆ…
ಎರವಲು ಮನೆ…

Related Posts

ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...
ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...

Comments 2

  1. Jayaraj Unakal
    Aug 16, 2023 Reply

    ಸಾವರಿತರೆ ಹುಟ್ಟಿನ ಮದ ಸಾಯುವುದು… ಬ್ಯೂಟಿಫುಲ್ ಸಾಲುಗಳು.

  2. Gangadhara Koppal
    Aug 25, 2023 Reply

    ತಳ ಕಾಣದ ಬಾವಿಯಲಿ
    ಸೇದಿದಷ್ಟೂ ನೀರು- wonderful.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ನೆಲದ ನಿಧಾನ
ನೆಲದ ನಿಧಾನ
April 29, 2018
ಶಿವನ ಕುದುರೆ…
ಶಿವನ ಕುದುರೆ…
May 1, 2019
Copyright © 2025 Bayalu