Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೆರೆ ಎಳೆಯದೆ…
Share:
Poems October 13, 2022 ಜ್ಯೋತಿಲಿಂಗಪ್ಪ

ಗೆರೆ ಎಳೆಯದೆ…

ನೀನು
ಕೂಗುವ ತನಕ
ನನ್ನ
ಕಿವಿಯಲಿ ಸದ್ದಿರಲಿಲ್ಲ

ನನ್ನ
ಸದ್ದಲಿ ನಿನ್ನ ಕಿವಿಯು
ತೆರೆಯಲಿಲ್ಲ

ನನ್ನ ನಿನ್ನ ಪ್ರತಿಷ್ಠೆ
ಕಣ್ಣಲಿ ಬೆಳಕಾಗಲಿಲ್ಲ

ಈ
ಗಾಯಕೆ ಮುಲಾಮು
ನಿನ್ನಿಂದ ದೂರವಾಗುವುದು

ಬಿಸಿಲಿಗೆ ಮೋಡವೂ ಬೆವರುವುದು

ಕಣ್ಣಲಿ ನೋಡಿದು ಕಣ್ಣಲಿ ಕಾಣಲಿಲ್ಲ
ಕಣ್ಣಲಿ ಕಂಡುದು ಕಣ್ಣು ನೋಡಲಿಲ್ಲ

ಪರಿಚಿತ ಬೆಳಕಿಗೆ ಅಪರಿಚಿತ ನೆರಳು
ನೆರಳೂ ಅದೇ ಬೆಳಕೂ ಅದೇ

ಕೇಳಿದಷ್ಟು ಶಬ್ದದ ಉಲಿ
ನೋಡಿದಷ್ಟೂ ಕಣ್ಣ ಸುಳಿ

ಕಣ್ಣು ತುಂಬಿದೆ ನೋಡೆ
ಕಿವಿ ತುಂಬಿದೆ ಕೇಳೆ

ನಾನು ಓಡಿದಷ್ಟೂ ನೀನೂ ಓಡುವೆಯಾ…

ಗೆರೆ ಎಳೆಯದೆ ಆಚೆ ಈಚೆ ಎಂಬುದಿಲ್ಲ.

Previous post ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
Next post ಅರಿವಿನ ಬಾಗಿಲು…
ಅರಿವಿನ ಬಾಗಿಲು…

Related Posts

ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...
ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...

Comments 2

  1. L.S. Patil
    Oct 18, 2022 Reply

    ಪರಿಚಿತ ಬೆಳಕಿಗೆ ಅಪರಿಚಿತ ನೆರಳು
    ನೆರಳೂ ಅದೇ ಬೆಳಕೂ ಅದೇ…
    ಜೋಡು ಸಾಲುಗಳ ಕವನದ ಆಂತರ್ಯ ಗೆರೆ ಎಳೆಯುತ್ತಿರುವ ಮನುಷ್ಯನ ಪ್ರವೃತ್ತಿಯನ್ನು ಅಣಕಿಸುವಂತಿದೆ.

  2. Chaitanya Indudhar
    Oct 18, 2022 Reply

    ಗೆರೆ ಎಳೆದು ವೈವಿಧ್ಯತೆಗೆ ತೆರೆದುಕೊಳ್ಳಬೇಕೋ, ಗೆರೆ ಅಳಿಸಿ ಸಾಮರಸ್ಯ ಸಾಧಿಸಬೇಕೋ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಸೂರ್ಯ
ಸೂರ್ಯ
January 8, 2023
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
Copyright © 2025 Bayalu