Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಸರೆ
Share:
Poems August 6, 2022 ಜ್ಯೋತಿಲಿಂಗಪ್ಪ

ಆಸರೆ

ಅರಿವಿನ
ಮನೆಯ ಮುಂದೆ ನಿಂತು
ಭಿಕ್ಷೆ
ಬೇಡುತಿರುವೆ ನಿಂತು ನೀಡುವರು
ಯಾರು
ಮನೆ ಖಾಲಿ

ಅರಿಯದೆ ಅರಿವು ನಿಲ್ಲದು

ಊರ
ಹೊರಗೆ ನಿಂತು
ಒಳಗೆ
ಹೋಗುವ ದಾರಿ ಕೇಳುತಿರುವೆ
ಹೇಳರು.

ಗಾಳಿಯ ಸದ್ದು
ಮಣ್ಣಿನ ವಾಸನೆ
ನೀರ ನಿನಾದ
ಬಯಲ ಮೋಹ

ಅರಿವಿನ ಕನ್ನಡಿಯಲಿ ಬಿಂಬ

ಊರ ಒಳ ಹೊರಗು

ಬಯಲಿನಲಿ ಏನುಂಟು
ಏನಿಲ್ಲ ಎಲ್ಲವೂ ಖಾಲಿ

ಅಂಗಣ
ಒಳಗೊಂದು ನೀರ ಹೆಜ್ಜೆ.

*** ***

ಈ
ನೆಲದ ಹಾಸಿಗೆ ನನದಲ್ಲ
ಆಗಸದ ಹೊದಿಕೆ ನನದಲ್ಲ
ಹಸಿದು ಉಣ್ಣುವ ಉಣ್ಣೂ ನನದಲ್ಲ

ನನ್ನದೆನ್ನುವುದೇನಿದೆ ನಾನು
‘ನಾನೂ’ ನನದಲ್ಲ
ಈ ‘ಅರಿವು’ ಬಾರದೇ ಇರದು

ಆಸರೆಗೆ ಗೋಡೆ ಮಾಡುಗಳಿಲ್ಲದ
ಬಯಲು ಧರ್ಮ ಇದೆ

ಇರು ಇನ್ನೆರಡು ದಿನ
ತೊಗಲರಿದು ಇಲ್ಲವಾಗುವೆ
ನಾನೇನೆಂದರಿಯುವೆ ಕೊಡಹು ಜೋಳಿಗೆ

ಈಗಷ್ಟೇ ದಾರಿ ಬದಿಯ ಮರಗಳಲಿ
ಚೆರ್ರೀ ಹೂಗಳು ಅರಳಿವೆ
ನೋಡು

ಯಾವ ದಾರಿಯೂ ತೆರೆಯದು.

Previous post ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
Next post ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು

Related Posts

ದಡ ಸೋಂಕದ ಅಲೆಗಳು
Share:
Poems

ದಡ ಸೋಂಕದ ಅಲೆಗಳು

July 10, 2025 ಜ್ಯೋತಿಲಿಂಗಪ್ಪ
ನದಿ ಕೂಡುವ ಕಡಲ ಅಂಚು ನಿಂತು ಸಂಬಂಧ ಹುಡುಕುತಿರುವೆ ಕಡಲ ಸೇರುವ ನೀರು ನದಿ ಯಾವುದು ಕಡಲು ಯಾವುದು ಸಂಬಂಧ ಅಸಂಬಂಧ ಎರಡೆಂಬ ಭಿನ್ನ ಅಳಿಯದೇ.. ದಾರಿ ತೋರುವ ಕೈಯ ಹಿಡಿದಿರುವೆ...
ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...

Comments 1

  1. Vinayak Narasapura
    Aug 8, 2022 Reply

    ಅರಿವಿನ ಭಿಕ್ಷೆಯ ಕವನ ಮನಮುಟ್ಟುವಂತಿದೆ. ಕವಿತೆಯ ಹಲವಾರು ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಣಾಚಾರ
ಗಣಾಚಾರ
August 8, 2021
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಬಯಲಾಟ
ಬಯಲಾಟ
March 17, 2021
ತಮ್ಮೊಳಗಿರ್ದ ಮಹಾಘನವನರಿಯರು
ತಮ್ಮೊಳಗಿರ್ದ ಮಹಾಘನವನರಿಯರು
May 8, 2024
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
Copyright © 2025 Bayalu