Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಸರೆ
Share:
Poems August 6, 2022 ಜ್ಯೋತಿಲಿಂಗಪ್ಪ

ಆಸರೆ

ಅರಿವಿನ
ಮನೆಯ ಮುಂದೆ ನಿಂತು
ಭಿಕ್ಷೆ
ಬೇಡುತಿರುವೆ ನಿಂತು ನೀಡುವರು
ಯಾರು
ಮನೆ ಖಾಲಿ

ಅರಿಯದೆ ಅರಿವು ನಿಲ್ಲದು

ಊರ
ಹೊರಗೆ ನಿಂತು
ಒಳಗೆ
ಹೋಗುವ ದಾರಿ ಕೇಳುತಿರುವೆ
ಹೇಳರು.

ಗಾಳಿಯ ಸದ್ದು
ಮಣ್ಣಿನ ವಾಸನೆ
ನೀರ ನಿನಾದ
ಬಯಲ ಮೋಹ

ಅರಿವಿನ ಕನ್ನಡಿಯಲಿ ಬಿಂಬ

ಊರ ಒಳ ಹೊರಗು

ಬಯಲಿನಲಿ ಏನುಂಟು
ಏನಿಲ್ಲ ಎಲ್ಲವೂ ಖಾಲಿ

ಅಂಗಣ
ಒಳಗೊಂದು ನೀರ ಹೆಜ್ಜೆ.

*** ***

ಈ
ನೆಲದ ಹಾಸಿಗೆ ನನದಲ್ಲ
ಆಗಸದ ಹೊದಿಕೆ ನನದಲ್ಲ
ಹಸಿದು ಉಣ್ಣುವ ಉಣ್ಣೂ ನನದಲ್ಲ

ನನ್ನದೆನ್ನುವುದೇನಿದೆ ನಾನು
‘ನಾನೂ’ ನನದಲ್ಲ
ಈ ‘ಅರಿವು’ ಬಾರದೇ ಇರದು

ಆಸರೆಗೆ ಗೋಡೆ ಮಾಡುಗಳಿಲ್ಲದ
ಬಯಲು ಧರ್ಮ ಇದೆ

ಇರು ಇನ್ನೆರಡು ದಿನ
ತೊಗಲರಿದು ಇಲ್ಲವಾಗುವೆ
ನಾನೇನೆಂದರಿಯುವೆ ಕೊಡಹು ಜೋಳಿಗೆ

ಈಗಷ್ಟೇ ದಾರಿ ಬದಿಯ ಮರಗಳಲಿ
ಚೆರ್ರೀ ಹೂಗಳು ಅರಳಿವೆ
ನೋಡು

ಯಾವ ದಾರಿಯೂ ತೆರೆಯದು.

Previous post ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
Next post ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು

Related Posts

ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...
ಸಾವಿನ ಅರಿವೆ ಕಳಚಿ!
Share:
Poems

ಸಾವಿನ ಅರಿವೆ ಕಳಚಿ!

September 14, 2024 ಜಬೀವುಲ್ಲಾ ಎಂ.ಅಸದ್
ತೆರೆದ ಬೆಂಕಿಯ ಕಣ್ಣಲಿ ತಾವರೆಯ ಪ್ರತಿಬಿಂಬ ಕತ್ತಲೆ ಬೆಳಕಿನ ನಡುವಿನ ಯುದ್ಧ ಮುಗುಳ್ನಕ್ಕ ಬುದ್ಧ! ಕಟ್ಟಿದ ಸೇತುವೆ ಬಳಸಿದ ಲತೆ ಚಿಗುರಿದ ಎಲೆಎಲೆಯ ತುಂಬಾ ಇಬ್ಬನಿಯ ಕಲರವ...

Comments 1

  1. Vinayak Narasapura
    Aug 8, 2022 Reply

    ಅರಿವಿನ ಭಿಕ್ಷೆಯ ಕವನ ಮನಮುಟ್ಟುವಂತಿದೆ. ಕವಿತೆಯ ಹಲವಾರು ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು.

Leave a Reply to Vinayak Narasapura Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ವೀರ
ವೀರ
April 29, 2018
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
Copyright © 2025 Bayalu