Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮರೆತೆ…
Share:
Poems July 4, 2022 ಜ್ಯೋತಿಲಿಂಗಪ್ಪ

ಮರೆತೆ…

ಮಗುವಾಗಬೇಕು ನಿಜ
ಮರಳದು ಚೈತನ್ಯ ಮರೆತೆ

ಹೂಳಲಾಗದು ನೆಳಲು ನಿಜ
ನೆಳಲು ಹಿಂಬಾಲಿಸುವುದು ಮರೆತೆ

ನೆರಳು ಯಾವಾಗಲೂ ಇರದು ನಿಜ
ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ

ಸಮಯ ಕಳೆಯುವುದು ನಿಜ
ಕಳೆದ ಸಮಯ ಕಳೆದುದು ಮರೆತೆ

ಸಮಯಕೆ ಸಾವಿಲ್ಲ ನಿಜ
ಸಾಯುವ ಸಮಯ ಬರುವುದು ಮರೆತೆ

ಸುಖವೇನೂ ಸುಮ್ಮನೆ ಬರುವುದಿಲ್ಲ ನಿಜ
ದುಃಖವೂ ಜೊತೆಗೆ ಇರುವುದು ಮರೆತೆ

ಖಾಲೀ ಮಡಿಕೆ ಶಬ್ದ ಮಾಡುವುದು ನಿಜ
ಖಾಲಿಯಲಿ ಬಯಲು ತುಂಬುವುದು ಮರೆತೆ

ಏಕಾಂತ ಒಂಟಿತನವಲ್ಲ ನಿಜ
ಒಂಟಿತನವ ಏಕಾಂತವಾಗಿಸುವುದು ಮರೆತೆ

ಸತ್ಯದ ಮುಖವ ಕಾಣಿಸದು ಕತ್ತಲು ನಿಜ
ಕತ್ತಲೊಳಗೂ ಸತ್ಯ ಇರುವುದು ಮರೆತೆ

ಧ್ಯಾನವೇ ಸಾಧನೆಯಲ್ಲ ನಿಜ
ಸಾಧಿಸಿದುದೆಲ್ಲವೂ ಧ್ಯಾನ ಮರೆತೆ

ಬಯಲು ಓದಲು ಬಯಲಿಗಿಳಿದೆ ನಿಜ
ಬಯಲು ಬೆತ್ತಲಾಗಿಸಿ ಬಟ್ಟೆ ತೊಟ್ಟುದ ಮರೆತೆ.

ಬೇರಿಲ್ಲದೆ ಎಲೆಗಳಿರವು ನಿಜ
ಎಲೆಗಳಿರದೆ ಬೇರೂ ನಿಲ್ಲದು ಮರೆತೆ.

ಬೇರು ನೆಲದೊಳಗಿಳೀಯುವಾಗ ಎಲೆಗಳು ನಗುವವು ನಿಜ
ಎಲೆಗಳು ಒಣಗಿ ನೆಲಕುದುರುವಾಗ ಬೇರು ನಗುವುದು ಮರೆತೆ.

Previous post ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
Next post ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…

Related Posts

ಚಿತ್ತ ಸತ್ಯ…
Share:
Poems

ಚಿತ್ತ ಸತ್ಯ…

June 14, 2024 ಕೆ.ಆರ್ ಮಂಗಳಾ
ಚಿತ್ತದೊಳಿವೆ ಎರಡು ಕವಲು ಒಂದು ರಂಗುರಂಗಿನ ದಾರಿ ಅದು ಮಹಾ ಹೆದ್ದಾರಿ ಪ್ರಪಂಚದರಿವು ಬಂದಾಗಿನಿಂದ ಅತ್ತಲೇ ನಡೆದು ರೂಢಿ ಅನಾದಿ ಕಾಲದ ದಾಸ್ತಾನುಗಳೆಲ್ಲ ಅಲ್ಲಿ...
ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...

Comments 2

  1. Praveen Kammar
    Jul 5, 2022 Reply

    ಮರೆತದ್ದೇನು, ಅರಿತದ್ದೇನು? ದ್ವಂದ್ವಗಳಲ್ಲಿ ಸಿಕ್ಕಿದ್ದೇನು? ಸುಂದರ ಕವನ.

  2. Channabasappa B
    Jul 7, 2022 Reply

    ಮರೆಯಬೇಕಾದವುಗಳನ್ನು ಮರೆತಾಗಲೇ ಅರಿವು ಕಣ್ಣುತೆರೆಯುವುದು, ಬಯಲು ಸಾಕ್ಷಾತ್ಕಾರವಾಗುವುದು!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಸಂತೆಯ ಸಂತ
ಸಂತೆಯ ಸಂತ
September 7, 2020
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
Copyright © 2025 Bayalu