Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು ಯಾರು?
Share:
Poems December 8, 2021 Bayalu

ನಾನು ಯಾರು?

ಕನ್ನಡಿ ಪ್ರತಿಬಿಂಬದಲ್ಲಿ ಕಂಡ
ಕರಿಮೈಯ ಕವಚ ನೋಡಿ
ಊಹಿಸಿಕೊಂಡದ್ದು
ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ
ಹೋದವರನು ಕಂಡು
ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಿನ್ನ ನೀ ತಿಳಿಯೆಂದು ಹೊರಟು
ಗೀತೆ-ಭಾಷ್ಯಗಳಲಿ, ಗಾಹೆ-ದೋಹೆಗಳಲಿ
ಅಹಂಬ್ರಹ್ಮನೆಂದು ಏಕಾತ್ಮವಾಗಿ
ಅನಾತ್ಮವ ನೋಡಿ
ಪಾಂಡಿತ್ಯದ ಸೊಕ್ಕಿನಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಾನೆಂಬುದೇ ಅಹಂಕಾರ
ನೀನೆಂಬುದೇ ಮಾಯೆ!
ಮನಸಿಜನ ಮಾಯೆ ವಿಧಿ ವಿಳಸನದಲ್ಲಿ ನೆರಂಬಡೆ
ಕೊಂದು ಕೂಗದೇ ನರರುಂ!
ಮನಸಿಜನ ಮೋಸವನರಿತ ಅಮನಸ್ಕ ಕೇಳಿದ ನಾನು ಯಾರು?

ಮೇಲೆ ಮಂಟಪದಾ ವಸ್ತು
ಬ್ರಹ್ಮಾಂಡ ಪಿಂಡಾಂಡವಾಗಿರಲು
ಪಿಂಡವನಳಿಸಿ ಬ್ರಹ್ಮಾಂಡ ಬಯಲಾಗಿ
ಧಮ್ಮ ಪವತ್ತನವ ಹಿಡಿದಾತ ಕೇಳಿದ ನಾನು ಯಾರು?

ನಾನು ಯಾರು ಕೊಟ್ಟ ಕುದುರೆಯನು ಏರಲರಿಯದವನ
ಪ್ರಶ್ನೆ ಮತ್ತು ಉತ್ತರ
ನಾನು ಇಲ್ಲವೆಂದು ಹೊರಟ ವೆಂಕಟಗಿರಿಯಪ್ಪ
ಬುಟ್ಟಪ್ಪ ಹುಟ್ಲಪ್ಪ
ಕಾಯಕ ಕೇವಲಿಗಳು, ನಿಜಯೋಗಿಗಳು…

-ಕೇಶವಮೂರ್ತಿ ಹೆಚ್.ಎನ್
(‘ನಾನು ಯಾರು? ಎಂಬ ಆಳ-ನಿರಾಳ’ ಪುಸ್ತಕದ ಪ್ರೇರಣೆ)

Previous post ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
Next post ಬೆಳಕಲಿ ದೀಪ
ಬೆಳಕಲಿ ದೀಪ

Related Posts

ಹಣತೆಯ ಹಂಗು
Share:
Poems

ಹಣತೆಯ ಹಂಗು

October 19, 2025 ಕೆ.ಆರ್ ಮಂಗಳಾ
ನಾನೆಂಬ ಕತ್ತಲೆಗೆ ನೀನೆಂಬ ಜ್ಯೋತಿ ನಾನಿದ್ದಾಗ ನೀ ಇರಲೇ ಬೇಕೆನುವ ತರ್ಕ ನಾನು ಕರಗದೆ ನೀನಾಗಲಾರೆ ನೀನು ಸರಿಯದೇ ಬೆಳಕ ಕಾಣಲಾರೆ… ಕತ್ತಲೆಗಲ್ಲವೆ ಬೆಳಕಿನ ಮೋಹ? ಕೈಯ ಹಣತೆಯಲಿ...
ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...

Comments 3

  1. K.S. Shivashankar
    Dec 14, 2021 Reply

    ನಾನು ಯಾರು? ಪುಸ್ತಕವನ್ನು ನಾನೂ ಓದಿದೆ. ಇಲ್ಲಿನ ಕವಿಗಳು ಪುಸ್ತಕದ ಸದಾಶಯವನ್ನು ಕಾವ್ಯದಲ್ಲಿ ಸೊಗಸಾಗಿ ಮೂಡಿಸಿದ್ದಾರೆ.

  2. ಅಹ್ಮದ್
    Jul 21, 2022 Reply

    ಚೆನ್ನಾಗಿದೆ

  3. ವೀರೇಶ್
    Sep 15, 2024 Reply

    ನಾನೆಂಬುದೇ ಅಹಂಕಾರ ನೀನೆಂಬುದೇ ಮಾಯೆ! ✍🏻👌🏻

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಶಿವಯೋಗ
ಶಿವಯೋಗ
July 4, 2021
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
Copyright © 2026 Bayalu