Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸೋತ ಅಂಗೈಗಳಿಗಂಟಿ…
Share:
Poems October 19, 2025 ಜಬೀವುಲ್ಲಾ ಎಂ.ಅಸದ್

ಸೋತ ಅಂಗೈಗಳಿಗಂಟಿ…

ನನ್ನಲ್ಲಿ ನೀನು ತುಂಬಿರಲು
ನಿನ್ನಲ್ಲಿಲ್ಲ ನಾನು
ಇಲ್ಲವೆಂಬ ಅರಿವು ನನ್ನಲ್ಲಿರಲು
ಇನ್ನೂ ಹೇಳಲಿ ಏನು?

ಒಡೆದ ಗಾಜಿನ ಲೋಟ
ಚೂರಾದ ಹೃದಯದ ನೋಟ
ಎರಡೂ ಒಂದೇ ಆಗಿರುವಾಗ ಈಗ

ಮುರಿದ ರೆಕ್ಕೆಯ ಹಕ್ಕಿಯ ಶೋಕ
ಮನ ಅನುಭವಿಸುತ್ತಿರುವಾಗ
ಮಾತು ಹುಟ್ಟಿತು ಹೇಗೆ ಈ ಸಮಯ
ಮೌನವೇ ಎಲ್ಲವನ್ನು ಸಂಹರಿಸುವಾಗ

ದಿಕ್ಕಿಲ್ಲದ ದಾರಿಯ ಒಂಟಿ ಪಯಣಿಗ
ನಡೆದಷ್ಟು ದೂರ
ತಲುಪುವುದಾದರೂ ಎಲ್ಲಿಗೆ?
ಕೊನೆ ಮುಟ್ಟುವುದಾದರೂ ಹೇಗೆ?
ಕಾಣದ ಗಮ್ಯ, ಅನಾಥ ಭಾವ
ಹುಟ್ಟು ಅರಸುತ್ತಿದೆ ಸಾವಿನ ಮನೆಯಂಗಳವ
ಸೋತ ಅಂಗೈಗಳಿಗಂಟಿ ನಗುತಿದೆ ಶೂನ್ಯ

ಅದೇ ಎಲ್ಲಾ… ಎಲ್ಲಾ…

Previous post ಮಾಯದ ಗಾಯ
ಮಾಯದ ಗಾಯ
Next post ಹಣತೆಯ ಹಂಗು
ಹಣತೆಯ ಹಂಗು

Related Posts

ಕಾಯದೊಳಗಣ ಬಯಲು
Share:
Poems

ಕಾಯದೊಳಗಣ ಬಯಲು

November 7, 2020 ಜ್ಯೋತಿಲಿಂಗಪ್ಪ
ಈ ಬಯಲು ಗುರುತಿಸಲಾರೆ ನನ್ನ ಕಣ್ಣ ಎದುರು ನಾನು ಬಯಸುವ ರೂಹು ಇಲ್ಲ ಕಣ್ಣು ಹೇಳಿದುದು ಸುಳ್ಳೇ ನೀ ಬಿಟ್ಟ ಉಸಿರಲೊಂದು ದನಿ ಇದೆ ನಾ ಕೇಳಲಾರೆ ಉಸಿರು ಒಳಗಣ ದನಿ ಉಸಿರು ನುಂಗಿತು...
ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...

Comments 2

  1. ಗಿರೀಶ್ ವಿ
    Oct 27, 2025 Reply

    ಕಾಣದ ಗಮ್ಯ, ಕಾಣುವ ಶೂನ್ಯ… ಗಹನವಾದ ಪರಿಕಲ್ಪನೆಗಳು ಸರ್.

  2. ಜಾಹ್ನವಿ ಬೆಂಗಳೂರು
    Nov 7, 2025 Reply

    ಸೋಲು- ಗೆಲುವು ಎರಡೂ ನಮ್ಮ ನಮ್ಮ perceptions….. ಜಗದ ದುಃಖಕ್ಕೇಲ್ಲಾ ಸೋಲೇ ಕಾರಣವಲ್ಲಾ.

Leave a Reply to ಗಿರೀಶ್ ವಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಸೂರ್ಯ
ಸೂರ್ಯ
January 8, 2023
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಗಜಲ್…
ಗಜಲ್…
February 16, 2026
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
Copyright © 2026 Bayalu