Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮೊಟ್ಟೆ- ಗೂಡು
Share:
Poems April 11, 2025 ಜ್ಯೋತಿಲಿಂಗಪ್ಪ

ಮೊಟ್ಟೆ- ಗೂಡು

ಮರೆವೆಯ ಗೂಡಲಿ
ಒಂದು ಮರಿ ಆಸೆಯ ಮೊಟ್ಟೆ
ಗೂಡು ಸಣ್ಣದು ಮೊಟ್ಟೆ ದೊಡ್ಡದು
ಮೊಟ್ಟೆ ಬಿರಿದರೆ ಗೂಡು ಸಾಯುವುದು
ಗೂಡು ಸಾಯದಿರೆ ಮೊಟ್ಟೆ ಸಾಯುವುದು
ಏನು ಮರೆವೆಯೋ ಸೀಸೆಯು ಒಡೆಯದೆ
ಹಕ್ಕಿ ಉಸಿರುಗಟ್ಟಿದೆ
ಅಳಿಯಲುಂಟೇ ಮರೆವೆಯೊಳಗಣ ಹಿಂದಣ ಹೆಜ್ಜೆ

ತೋರುವುದೆಲ್ಲವೂ ಸುಳ್ಳು
ಕಂಡುದೆಲ್ಲವೂ ಸುಳ್ಳು
ನಿಜವೇನು ಅರಿವೆಯೇ ಮರೆವೆಯೇ
ಬರಿದೆ ಬಯಲಾಗಲಾಗದು.

*** *** ***
ಈ
ಜ್ಞಾನಕ್ಕೆ ಏನು ಕೇಡೋ
ಮಣಿಯದು ಮಣಿಸದು
ಅಂಗೈಯಲ್ಲಿ ಉರಿಯದ ದೀಪ
ದಾರಿ ತೋರುವುದೇ…

ಖಾಲೀ
ಕುಂಭ ಬಯಲು ತುಂಬಲಹುದು

ಬಯಲು ತುಂಬಿಹ ಕುಂಭಕೆ
ಜಲವ ತುಂಬಿ ಬಯಲು ಬರಿದು

ಸುಳ್ಳು ನಿಜ
ಸತ್ಯ ಅಸತ್ಯ
ಆಚಾರ ಅನಾಚಾರ
ಇವೆಲ್ಲವೂ ಏನು ಏನು
ಗೊಂಬೆಗೊಂದು ಕನ್ನಡಿ ಹಿಡಿದು
ಗೊಂಬೆಯ ನಗಿಸಲಾಗದು
ನೀರ ನೆಳಲುಗಳು

ಅಯ್ಯೋ
ಕತ್ತಲೆಯನ್ನೆಲ್ಲಾ ಬೆಳಕು
ಮಾಡುವ ಕೇಡು ಈ ಬುದ್ಧಿಗೆ..

ಏನಯ್ಯಾ ನಿನ ಮೊಂಡಾಟ
ನಿರಹಂಕಾರ ಸಾಲದೇ.,
ಕೇಡೆಲ್ಲವೂ ನನದು

ಈ
ಸಾವಿಗೇನು
ಬಾಲ್ಯ ತಾರುಣ್ಯ ವೃದ್ಧಾಪ್ಯ ಉಂಟೇ…

ಆಸೆ ಕೊಲ್ಲುವ ಸಾವಿಗೆ
ಹೇಸಿ ಕೊಂಡರೆ ಸೈ…

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ದೇಹ ದೇವಾಲಯ
ದೇಹ ದೇವಾಲಯ

Related Posts

ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...
ಬಿಂಬ-ಪ್ರತಿಬಿಂಬ
Share:
Poems

ಬಿಂಬ-ಪ್ರತಿಬಿಂಬ

February 5, 2020 ಜ್ಯೋತಿಲಿಂಗಪ್ಪ
ನೀನು ಅಲ್ಲಿ ಉಂಟೆಂದು ನಾನು ಇಲ್ಲಿ ತೆವಳಿ ತೆವಳಿ ಬಳಲಿದೆ ನೀನು ಎಲ್ಲಿರುವೆ ಎಂಬುದು ನನ್ನ ಕಣ್ಣರಿವು ಎಂಬುದ ನಾನಲ್ಲದೆ ನೀನರಿದೆಯಾ ಹೇಳೇ ಅಕ್ಕಾ ಬೆಳಕ ತಿಂದಲ್ಲದೆ ಕನ್ನಡಿಯಲಿ...

Comments 1

  1. Rajendra
    Apr 13, 2025 Reply

    Nice

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಭವ ರಾಟಾಳ
ಭವ ರಾಟಾಳ
September 10, 2022
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
Copyright © 2026 Bayalu