Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನಸ್ಸು
Share:
Poems September 7, 2020 ಕೆ.ಆರ್ ಮಂಗಳಾ

ಮನಸ್ಸು

ಏನ ಹೇಳಲಿ ಗುರುವೇ ಮನಸಿನ ಬಗೆಗೆ?
ಹಿಂದಕ್ಕೆ ಜಾರುತ್ತಾ
ಮುಂದಕ್ಕೆ ತುಯ್ಯುತ್ತಾ
ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ
ಇದಾವ ಮರದ ಕೊಂಬೆಗೆ
ನೇತು ಹಾಕಿಕೊಂಡಿದೆ…

ಎಂದು ಕಟ್ಟಿದೆನೋ
ಅದ್ಹೇಗೆ ಏರಿ ಕೊಂಡೆನೋ
ಹಿಗ್ಗುತ್ತಾ ಹತ್ತಿ ಕೂತವಳನು
ತೂಗಿದ ಮೊದಲ ಕೈ ಅದಾವುದೋ?
ಪರಂಪರೆಯ ಉದ್ದಕ್ಕೂ
ಮೂಲ ಹುಡುಕುವುದೆಲ್ಲಿ…

ಜೀಕುವ ಆಟಕ್ಕೆ ಜೋತು ಬಿದ್ದಾಗಿದೆ
ಇಷ್ಟಾನಿಷ್ಟಗಳ ಖಯಾಲಿ
ಗಾಳಿಯಲಿ ತೇಲುವ ಸುಖ
ನೆಲಕೆ ಕಾಲಿಡಲೊಲ್ಲದ ಮರೆವು
ತೂಗಿಸಿದ ಹಗ್ಗ ಬಂಧನದ ಪಾಶವಾದದ್ದು
ತಿಳಿಯಲೇ ಇಲ್ಲ ಈ ಜೀಕಾಟದಲ್ಲಿ!

ಅತ್ತಿಂದಿತ್ತ ಇತ್ತಿಂದತ್ತ
ಕಾಲ ಸವೆಸುವ ಆಟ
ಹುಟ್ಟುತ್ತಾ- ಹೊಂದುತ್ತಾ,
ಜೀವವನೊತ್ತೆ ಇಟ್ಟು
ಜೀಕಿಕೊಳ್ಳುತ್ತಲೇ ಇದ್ದೇನೆ
ಹಿಂದಕ್ಕೆ ಮುಂದಕ್ಕೆ ಮತ್ತೆ ಮತ್ತೆ…

Previous post ಸಂತೆಯ ಸಂತ
ಸಂತೆಯ ಸಂತ
Next post ನದಿಯನರಸುತ್ತಾ…
ನದಿಯನರಸುತ್ತಾ…

Related Posts

ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Comments 1

  1. Ganesh A.P
    Sep 13, 2020 Reply

    ಕವನದ ಜೋಲಿಯಲ್ಲಿ ನಾನೂ ತೂಗುತ್ತಿದ್ದೇನೆ. ಅರ್ಥಗರ್ಭಿತ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹುಡುಕಾಟ
ಹುಡುಕಾಟ
July 21, 2024
ಬಯಲಾಟ
ಬಯಲಾಟ
March 17, 2021
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ಕಣ್ಣ ದೀಪ
ಕಣ್ಣ ದೀಪ
September 7, 2021
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
Copyright © 2025 Bayalu