Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನಸ್ಸು
Share:
Poems September 7, 2020 ಕೆ.ಆರ್ ಮಂಗಳಾ

ಮನಸ್ಸು

ಏನ ಹೇಳಲಿ ಗುರುವೇ ಮನಸಿನ ಬಗೆಗೆ?
ಹಿಂದಕ್ಕೆ ಜಾರುತ್ತಾ
ಮುಂದಕ್ಕೆ ತುಯ್ಯುತ್ತಾ
ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ
ಇದಾವ ಮರದ ಕೊಂಬೆಗೆ
ನೇತು ಹಾಕಿಕೊಂಡಿದೆ…

ಎಂದು ಕಟ್ಟಿದೆನೋ
ಅದ್ಹೇಗೆ ಏರಿ ಕೊಂಡೆನೋ
ಹಿಗ್ಗುತ್ತಾ ಹತ್ತಿ ಕೂತವಳನು
ತೂಗಿದ ಮೊದಲ ಕೈ ಅದಾವುದೋ?
ಪರಂಪರೆಯ ಉದ್ದಕ್ಕೂ
ಮೂಲ ಹುಡುಕುವುದೆಲ್ಲಿ…

ಜೀಕುವ ಆಟಕ್ಕೆ ಜೋತು ಬಿದ್ದಾಗಿದೆ
ಇಷ್ಟಾನಿಷ್ಟಗಳ ಖಯಾಲಿ
ಗಾಳಿಯಲಿ ತೇಲುವ ಸುಖ
ನೆಲಕೆ ಕಾಲಿಡಲೊಲ್ಲದ ಮರೆವು
ತೂಗಿಸಿದ ಹಗ್ಗ ಬಂಧನದ ಪಾಶವಾದದ್ದು
ತಿಳಿಯಲೇ ಇಲ್ಲ ಈ ಜೀಕಾಟದಲ್ಲಿ!

ಅತ್ತಿಂದಿತ್ತ ಇತ್ತಿಂದತ್ತ
ಕಾಲ ಸವೆಸುವ ಆಟ
ಹುಟ್ಟುತ್ತಾ- ಹೊಂದುತ್ತಾ,
ಜೀವವನೊತ್ತೆ ಇಟ್ಟು
ಜೀಕಿಕೊಳ್ಳುತ್ತಲೇ ಇದ್ದೇನೆ
ಹಿಂದಕ್ಕೆ ಮುಂದಕ್ಕೆ ಮತ್ತೆ ಮತ್ತೆ…

Previous post ಸಂತೆಯ ಸಂತ
ಸಂತೆಯ ಸಂತ
Next post ನದಿಯನರಸುತ್ತಾ…
ನದಿಯನರಸುತ್ತಾ…

Related Posts

ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 1

  1. Ganesh A.P
    Sep 13, 2020 Reply

    ಕವನದ ಜೋಲಿಯಲ್ಲಿ ನಾನೂ ತೂಗುತ್ತಿದ್ದೇನೆ. ಅರ್ಥಗರ್ಭಿತ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಕಣ್ಣ ದೀಪ
ಕಣ್ಣ ದೀಪ
September 7, 2021
Copyright © 2026 Bayalu