Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪಾದಕೂ ನೆಲಕೂ…
Share:
Poems June 14, 2024 ಜ್ಯೋತಿಲಿಂಗಪ್ಪ

ಪಾದಕೂ ನೆಲಕೂ…

ಕಣ್ಣೇ ಸೋತಿರಲು
ಈ ಮಾಯಾಂಗನೆ ಬೆತ್ತಲೆ ಆಗುವಳು

ನದಿ
ಒಣಗಿದೆ ಒರತೆಯಲೂ ನೀರು ಜಿನುಗದು

ಕಣ್ಣ
ಒಳಗಣ ದೀಪ ಮಂಕು

ಯಾರಿಗೆ ಗೊತ್ತು
ಯಾವ ದಾರಿ ಎಲ್ಲಿಗೋ
ಪಾದಕೂ ನೆಲಕೂ ಎನಿತು ಅಂತರ

ಈ
ಕಣ್ಣ ಪಾಪೆ ಹೀರಿದ್ದಷ್ಟೇ ಬೆಳಕು
ಪಾಪೆ ಸುಕ್ಕು

ಮೊದಲು ಉಂಡಿಟ್ಟ ತಟ್ಟೆಗಳನೆಲ್ಲಾ ತಿಕ್ಕಿ ತೊಳೆಯಬೇಕು

ಈ ನನ್ನ ಗೆಳತಿಗೆ ಹೇಳುವುದೇನಿದೆ
ಎಲ್ಲಾ ಅರಿತೂ ಅರಿಯದಂತೆ
ಅರಿಯದಿರಲೂ ಅರಿದಂತೆಯೇ ಒಡನಾಡುವ ಚತುರೆ

ಈ
ಧ್ಯಾನದೊಳು ಏನಿದೆಯೋ…
ಏನಿಲ್ಲವೋ…

ಅಳಿಸಲಾಗದು
ಅಂಗೈಯ ಗೆರೆ
ಸಾವು ಎಂಬುದು ಅಮೂರ್ತ.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
Next post ಚಿತ್ತ ಸತ್ಯ…
ಚಿತ್ತ ಸತ್ಯ…

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಕಾಲ ಎಲ್ಲಿದೆ?
Share:
Poems

ಕಾಲ ಎಲ್ಲಿದೆ?

January 7, 2022 ಕೆ.ಆರ್ ಮಂಗಳಾ
ಎಲ್ಲವನೂ… ಎಲ್ಲರನೂ… ಮಣಿಸುತಾ, ಬಾಗಿಸುತಾ ಕಾಣಿಸುತಾ, ಕಣ್ಮರೆಯಾಗಿಸುತಾ ತಾನೇ ಅಂತಿಮವೆನುವ ಮಾಯಾವಿ ಕಾಲಕ್ಕೆ ಇದೆಯೇ ಅಸ್ತಿತ್ವ? ಉರುಳುರುಳಿ ಹೊರಳುತಿಹ ಭುವಿಯ ಚಲನೆಯಲಿ ನಮ್ಮ...

Comments 4

  1. Padmalaya
    Jun 14, 2024 Reply

    ಅತ್ಯಂತ….ಅತ್ಯಂತ…ಆಳ..ಕಣ್ಣಿಗೂ ಮೆದುಳಿಗೂ ಸಿಲುಕದಷ್ಟು ದೂರ…ದೂರ

  2. Giri Devaraj
    Jun 16, 2024 Reply

    ಸಾವು ಅಮೂರ್ತ- ಕವನ ಅನುಭಾವಿಕ ನೆಲೆಯಲ್ಲಿ ಮಾತಾಡುತ್ತದೆ🙏🏿

  3. ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
    Jun 17, 2024 Reply

    ಜ್ಯೋತಿಲಿಂಗಪ್ಪ ಅಣ್ಣಾವ್ರು ನಿಗೂಢ, ನಿಲುಕದ, ಪ್ರಜ್ಞೆ ಆಚೆಗಿನ ಕವಿ ಅನಿಸಿ ಮಿಂಚಿನಂತೆ ಅಲ್ಪ ಸ್ವಲ್ಪ ಅರ್ಥ ಗೋಚರಿಸಿ ನನ್ನ ಮಂದ ಮತಿಯ ಮಿತಿಯಿದು ಅನಿಸುತ್ತದೆ… ಚಿಂತನೆಗೆ, mysticism ಗೆ ದಾರಿ ತೋರುವ ಅವರಿಗೆ ಧನ್ಯವಾದಗಳು, ಕೃತಜ್ಞತೆಗಳು.

  4. Vishwa Loki
    Jul 1, 2024 Reply

    ಉಂಡಿಟ್ಟ ತಟ್ಟೆಗಳನ್ನೆಲ್ಲಾ ತಿಕ್ಕಿ ತೊಳೆಯುವುದೇ ಬದುಕಾಗಿದೆ. ಉಣ್ಣದೆ ಇರಲು ಸಾಧ್ಯವೇ? ತಿಕ್ಕಿ ತೊಳೆಯುವುದರಿಂದ ಮುಕ್ತಿ ಇಲ್ಲವೇ?

Leave a Reply to Giri Devaraj Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಮರೆತೆ…
ಮರೆತೆ…
July 4, 2022
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
Copyright © 2025 Bayalu