Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪಾದಕೂ ನೆಲಕೂ…
Share:
Poems June 14, 2024 ಜ್ಯೋತಿಲಿಂಗಪ್ಪ

ಪಾದಕೂ ನೆಲಕೂ…

ಕಣ್ಣೇ ಸೋತಿರಲು
ಈ ಮಾಯಾಂಗನೆ ಬೆತ್ತಲೆ ಆಗುವಳು

ನದಿ
ಒಣಗಿದೆ ಒರತೆಯಲೂ ನೀರು ಜಿನುಗದು

ಕಣ್ಣ
ಒಳಗಣ ದೀಪ ಮಂಕು

ಯಾರಿಗೆ ಗೊತ್ತು
ಯಾವ ದಾರಿ ಎಲ್ಲಿಗೋ
ಪಾದಕೂ ನೆಲಕೂ ಎನಿತು ಅಂತರ

ಈ
ಕಣ್ಣ ಪಾಪೆ ಹೀರಿದ್ದಷ್ಟೇ ಬೆಳಕು
ಪಾಪೆ ಸುಕ್ಕು

ಮೊದಲು ಉಂಡಿಟ್ಟ ತಟ್ಟೆಗಳನೆಲ್ಲಾ ತಿಕ್ಕಿ ತೊಳೆಯಬೇಕು

ಈ ನನ್ನ ಗೆಳತಿಗೆ ಹೇಳುವುದೇನಿದೆ
ಎಲ್ಲಾ ಅರಿತೂ ಅರಿಯದಂತೆ
ಅರಿಯದಿರಲೂ ಅರಿದಂತೆಯೇ ಒಡನಾಡುವ ಚತುರೆ

ಈ
ಧ್ಯಾನದೊಳು ಏನಿದೆಯೋ…
ಏನಿಲ್ಲವೋ…

ಅಳಿಸಲಾಗದು
ಅಂಗೈಯ ಗೆರೆ
ಸಾವು ಎಂಬುದು ಅಮೂರ್ತ.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
Next post ಚಿತ್ತ ಸತ್ಯ…
ಚಿತ್ತ ಸತ್ಯ…

Related Posts

ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...
ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...

Comments 4

  1. Padmalaya
    Jun 14, 2024 Reply

    ಅತ್ಯಂತ….ಅತ್ಯಂತ…ಆಳ..ಕಣ್ಣಿಗೂ ಮೆದುಳಿಗೂ ಸಿಲುಕದಷ್ಟು ದೂರ…ದೂರ

  2. Giri Devaraj
    Jun 16, 2024 Reply

    ಸಾವು ಅಮೂರ್ತ- ಕವನ ಅನುಭಾವಿಕ ನೆಲೆಯಲ್ಲಿ ಮಾತಾಡುತ್ತದೆ🙏🏿

  3. ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
    Jun 17, 2024 Reply

    ಜ್ಯೋತಿಲಿಂಗಪ್ಪ ಅಣ್ಣಾವ್ರು ನಿಗೂಢ, ನಿಲುಕದ, ಪ್ರಜ್ಞೆ ಆಚೆಗಿನ ಕವಿ ಅನಿಸಿ ಮಿಂಚಿನಂತೆ ಅಲ್ಪ ಸ್ವಲ್ಪ ಅರ್ಥ ಗೋಚರಿಸಿ ನನ್ನ ಮಂದ ಮತಿಯ ಮಿತಿಯಿದು ಅನಿಸುತ್ತದೆ… ಚಿಂತನೆಗೆ, mysticism ಗೆ ದಾರಿ ತೋರುವ ಅವರಿಗೆ ಧನ್ಯವಾದಗಳು, ಕೃತಜ್ಞತೆಗಳು.

  4. Vishwa Loki
    Jul 1, 2024 Reply

    ಉಂಡಿಟ್ಟ ತಟ್ಟೆಗಳನ್ನೆಲ್ಲಾ ತಿಕ್ಕಿ ತೊಳೆಯುವುದೇ ಬದುಕಾಗಿದೆ. ಉಣ್ಣದೆ ಇರಲು ಸಾಧ್ಯವೇ? ತಿಕ್ಕಿ ತೊಳೆಯುವುದರಿಂದ ಮುಕ್ತಿ ಇಲ್ಲವೇ?

Leave a Reply to Vishwa Loki Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
December 9, 2025
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ನೆಲದ ನಿಧಾನ
ನೆಲದ ನಿಧಾನ
April 29, 2018
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
Copyright © 2026 Bayalu