Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೆರೆ ಎಳೆಯದೆ…
Share:
Poems October 13, 2022 ಜ್ಯೋತಿಲಿಂಗಪ್ಪ

ಗೆರೆ ಎಳೆಯದೆ…

ನೀನು
ಕೂಗುವ ತನಕ
ನನ್ನ
ಕಿವಿಯಲಿ ಸದ್ದಿರಲಿಲ್ಲ

ನನ್ನ
ಸದ್ದಲಿ ನಿನ್ನ ಕಿವಿಯು
ತೆರೆಯಲಿಲ್ಲ

ನನ್ನ ನಿನ್ನ ಪ್ರತಿಷ್ಠೆ
ಕಣ್ಣಲಿ ಬೆಳಕಾಗಲಿಲ್ಲ

ಈ
ಗಾಯಕೆ ಮುಲಾಮು
ನಿನ್ನಿಂದ ದೂರವಾಗುವುದು

ಬಿಸಿಲಿಗೆ ಮೋಡವೂ ಬೆವರುವುದು

ಕಣ್ಣಲಿ ನೋಡಿದು ಕಣ್ಣಲಿ ಕಾಣಲಿಲ್ಲ
ಕಣ್ಣಲಿ ಕಂಡುದು ಕಣ್ಣು ನೋಡಲಿಲ್ಲ

ಪರಿಚಿತ ಬೆಳಕಿಗೆ ಅಪರಿಚಿತ ನೆರಳು
ನೆರಳೂ ಅದೇ ಬೆಳಕೂ ಅದೇ

ಕೇಳಿದಷ್ಟು ಶಬ್ದದ ಉಲಿ
ನೋಡಿದಷ್ಟೂ ಕಣ್ಣ ಸುಳಿ

ಕಣ್ಣು ತುಂಬಿದೆ ನೋಡೆ
ಕಿವಿ ತುಂಬಿದೆ ಕೇಳೆ

ನಾನು ಓಡಿದಷ್ಟೂ ನೀನೂ ಓಡುವೆಯಾ…

ಗೆರೆ ಎಳೆಯದೆ ಆಚೆ ಈಚೆ ಎಂಬುದಿಲ್ಲ.

Previous post ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
Next post ಅರಿವಿನ ಬಾಗಿಲು…
ಅರಿವಿನ ಬಾಗಿಲು…

Related Posts

ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...
ಗಡಿಯಲ್ಲಿ ನಿಂತು…
Share:
Poems

ಗಡಿಯಲ್ಲಿ ನಿಂತು…

May 6, 2021 ಜ್ಯೋತಿಲಿಂಗಪ್ಪ
ಈ ಬಯಲಲಿ ಕುಳಿತು ಹಿಂದಣ ಹೆಜ್ಜೆಗಳ ಎಣಿಸುತಿರುವೆ ಖಾಲಿ ಮುಖವಿಲ್ಲದ ನಾಳೆಗಳು ಮುಖವಾಡದ ನಿನ್ನೆಗಳು ಮುಖಾಮುಖಿ ಯ ಇಂದು ಈ ಅರಳಿದ ಅರಳೆ ರಾಟೆಯಲಿ ಸಿಲುಕಿ ನೂಲು ಹಾಸು ಹೊಕ್ಕು...

Comments 2

  1. L.S. Patil
    Oct 18, 2022 Reply

    ಪರಿಚಿತ ಬೆಳಕಿಗೆ ಅಪರಿಚಿತ ನೆರಳು
    ನೆರಳೂ ಅದೇ ಬೆಳಕೂ ಅದೇ…
    ಜೋಡು ಸಾಲುಗಳ ಕವನದ ಆಂತರ್ಯ ಗೆರೆ ಎಳೆಯುತ್ತಿರುವ ಮನುಷ್ಯನ ಪ್ರವೃತ್ತಿಯನ್ನು ಅಣಕಿಸುವಂತಿದೆ.

  2. Chaitanya Indudhar
    Oct 18, 2022 Reply

    ಗೆರೆ ಎಳೆದು ವೈವಿಧ್ಯತೆಗೆ ತೆರೆದುಕೊಳ್ಳಬೇಕೋ, ಗೆರೆ ಅಳಿಸಿ ಸಾಮರಸ್ಯ ಸಾಧಿಸಬೇಕೋ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
Copyright © 2025 Bayalu