Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೇಳಿಸಿತೇ?
Share:
Poems April 6, 2024 ಜ್ಯೋತಿಲಿಂಗಪ್ಪ

ಕೇಳಿಸಿತೇ?

ಈ
ಮೂರರ ತಿರುಳ ತೆಗೆದವರಾರು
ಐದರ ಒಗಟ ಬಿಡಿಸಿದವರಾರು
ಆರರ ಬೆಡಗು ಸವಿದವರಾರು

ಎರಡರಲಿ ಒಂದಾಗುವುದು
ಒಂದರಲಿ ಹಲವಾಗುವುದು
ಒಂದೆರಡಾಗಿ ಎರಡು ನಾಲ್ಕಾಗಿ…
ಅನಂತವ ಕಂಡರೆ ಹೇಳಿ

ನಿಂದರೆ ನೀ ಕೆಡುವೆ
ಬಂದರೆ ನಾ ಕೆಡುವೆ

ಸಂತೆಗೆ ಬಂದವರ ಕೂಡೆ
ಸಮಯಾಚಾರವೇ…

ಅರಿವ ಮುನ್ನವೇ ಅರಿದೆನೆಂಬುದಿಲ್ಲ
ಅರಿದ ಮೇಲೆ ಅರಿವೆಂಬುದೇ ಇರದು

ನೆಲಕ್ಕೆ ಬಿತ್ತಿದ ಬೀಜ
ಮೊಳಕೆಯ ಸದ್ದು…
ಕೇಳಿಸಿತೇ…?

Previous post ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
Next post ಒಂದಾಗಿ ನಿಂತೆ…
ಒಂದಾಗಿ ನಿಂತೆ…

Related Posts

ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...
ಸುತ್ತಿ ಸುಳಿವ ಆಟ
Share:
Poems

ಸುತ್ತಿ ಸುಳಿವ ಆಟ

May 6, 2021 ಕೆ.ಆರ್ ಮಂಗಳಾ
ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ ಜೇನಿನಂಥ ಮಾತುಗಳ ನಂಬಿಬಿಟ್ಟೆ ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ ಗಿರಿಗಿಟ್ಲೆ ಆಟದಲ್ಲಿ...

Comments 1

  1. ಜಯರಾಜ ಸಿದ್ದಾಪುರ
    Apr 12, 2024 Reply

    ಮೂರು, ಐದು, ಆರು, ಎರಡು, ಒಂದು… ಇವುಗಳ ಮರ್ಮ ತಿಳಿಯದೇ ಮೊಳಕೆಯ ಸದ್ದು ಹೇಗೆ ತಾನೆ ಕೇಳಿಸುತ್ತದೆ?

Leave a Reply to ಜಯರಾಜ ಸಿದ್ದಾಪುರ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
Copyright © 2025 Bayalu