Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದು ತೊಟ್ಟು ಬೆಳಕು
Share:
Poems February 7, 2021 ಜ್ಯೋತಿಲಿಂಗಪ್ಪ

ಒಂದು ತೊಟ್ಟು ಬೆಳಕು

ಈ
ಕತ್ತಲು
ಒಂದು ತೊಟ್ಟು ಬೆಳಕು
ಕುಡಿಯಿತು ಅಮಲೇರಿದೆ
ಗಾಳಿ ಪಾಲು

ಮುಂದಣ ಗೆರೆ ಹಿಂದಕೂ ತಾಗಿದೆ
ಪರಿಧಿಯ ಬಿಂದು ತನ್ನ
ಇಚ್ಛೆಯನರಿಯದು ಸುತ್ತುವುದು

ಬಯಲು ಎಂಬುದೇನು
ಬಯಲು
ಏನೂ ಇಲ್ಲ ಎಲ್ಲವೂ ಇದೆ
ಕತ್ತಲೂ ಬೆಳಕು

ಈ
ಸಂಜೆಯ ನಸು
ಬೆಳಕು ಕತ್ತಲಿಗೆ ಸರಿಯುವುದ
ಕಾಣಬೇಕು ನಾನು
ದೀಪ ಹಚ್ಚದಿರು ಬೆಳಕಿನ ಹೊದಿಕೆ
ಮರೆಯಲಿ ‘ಅದು’ ಇರುವುದು

ದೀಪದ ಬೆಳಕಲಿ ಕತ್ತಲು ಸಾವು

Previous post ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
Next post ಮುಖ- ಮುಖವಾಡ
ಮುಖ- ಮುಖವಾಡ

Related Posts

ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...
ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...

Comments 3

  1. Jayadev Jawali
    Feb 9, 2021 Reply

    ಒಂದು ತೊಟ್ಟು ಬೆಳಕು, ಒಂದು ತೊಟ್ಟು ಕತ್ತಲೆಗೆ ಸಮ ಎಂದು ಎಲ್ಲೋ ಓದಿದ ನೆನಪು. ಬೆಳಕು ಕತ್ತಲೆಯನ್ನು ನುಂಗಬಲ್ಲುದಾದರೆ, ಕತ್ತಲು ಬೆಳಕನ್ನೂ ನುಂಗಬಲ್ಲದು. ಕವನ ಹಲವಾರು ಭಾವಗಳನ್ನು ಮೀಂಟುತ್ತದೆ.

  2. Shivananda G
    Feb 10, 2021 Reply

    ಬೆಳಕಿನ ಹೊದಿಕೆಯ ಮರೆಯಲಿ ಇರುವ ‘ಅದು’ ಬಯಲೇ?!

  3. Padmalaya
    Feb 23, 2021 Reply

    ಅಲ್ಲಮನ ಬಯಲಾಟ…ಬಯಲು ಬಯಲನೆ ಬಿತ್ತಿ ಬಯಲನೆ ಬೆಳೆದ ಬೆಡಗು ಕತ್ತಲ ಬೆಳಕೆರಡನೂ ನುಂಗಬೇಕಿತ್ತಲ್ಲ…..? ಕತ್ತಲ ನುಂಗಿ ಬೆಳಕು ಜಾರಿ ಆಟದಲ್ಲೆ ಅಡಗಿತ್ತಲ್ಲಾ?

Leave a Reply to Padmalaya Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
Copyright © 2025 Bayalu