Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದು ತೊಟ್ಟು ಬೆಳಕು
Share:
Poems February 7, 2021 ಜ್ಯೋತಿಲಿಂಗಪ್ಪ

ಒಂದು ತೊಟ್ಟು ಬೆಳಕು

ಈ
ಕತ್ತಲು
ಒಂದು ತೊಟ್ಟು ಬೆಳಕು
ಕುಡಿಯಿತು ಅಮಲೇರಿದೆ
ಗಾಳಿ ಪಾಲು

ಮುಂದಣ ಗೆರೆ ಹಿಂದಕೂ ತಾಗಿದೆ
ಪರಿಧಿಯ ಬಿಂದು ತನ್ನ
ಇಚ್ಛೆಯನರಿಯದು ಸುತ್ತುವುದು

ಬಯಲು ಎಂಬುದೇನು
ಬಯಲು
ಏನೂ ಇಲ್ಲ ಎಲ್ಲವೂ ಇದೆ
ಕತ್ತಲೂ ಬೆಳಕು

ಈ
ಸಂಜೆಯ ನಸು
ಬೆಳಕು ಕತ್ತಲಿಗೆ ಸರಿಯುವುದ
ಕಾಣಬೇಕು ನಾನು
ದೀಪ ಹಚ್ಚದಿರು ಬೆಳಕಿನ ಹೊದಿಕೆ
ಮರೆಯಲಿ ‘ಅದು’ ಇರುವುದು

ದೀಪದ ಬೆಳಕಲಿ ಕತ್ತಲು ಸಾವು

Previous post ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
Next post ಮುಖ- ಮುಖವಾಡ
ಮುಖ- ಮುಖವಾಡ

Related Posts

ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...
ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...

Comments 3

  1. Jayadev Jawali
    Feb 9, 2021 Reply

    ಒಂದು ತೊಟ್ಟು ಬೆಳಕು, ಒಂದು ತೊಟ್ಟು ಕತ್ತಲೆಗೆ ಸಮ ಎಂದು ಎಲ್ಲೋ ಓದಿದ ನೆನಪು. ಬೆಳಕು ಕತ್ತಲೆಯನ್ನು ನುಂಗಬಲ್ಲುದಾದರೆ, ಕತ್ತಲು ಬೆಳಕನ್ನೂ ನುಂಗಬಲ್ಲದು. ಕವನ ಹಲವಾರು ಭಾವಗಳನ್ನು ಮೀಂಟುತ್ತದೆ.

  2. Shivananda G
    Feb 10, 2021 Reply

    ಬೆಳಕಿನ ಹೊದಿಕೆಯ ಮರೆಯಲಿ ಇರುವ ‘ಅದು’ ಬಯಲೇ?!

  3. Padmalaya
    Feb 23, 2021 Reply

    ಅಲ್ಲಮನ ಬಯಲಾಟ…ಬಯಲು ಬಯಲನೆ ಬಿತ್ತಿ ಬಯಲನೆ ಬೆಳೆದ ಬೆಡಗು ಕತ್ತಲ ಬೆಳಕೆರಡನೂ ನುಂಗಬೇಕಿತ್ತಲ್ಲ…..? ಕತ್ತಲ ನುಂಗಿ ಬೆಳಕು ಜಾರಿ ಆಟದಲ್ಲೆ ಅಡಗಿತ್ತಲ್ಲಾ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
WHO AM I?
WHO AM I?
June 17, 2020
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
Copyright © 2025 Bayalu