Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದಾಗಿ ನಿಂತೆ…
Share:
Poems April 6, 2024 ಕೆ.ಆರ್ ಮಂಗಳಾ

ಒಂದಾಗಿ ನಿಂತೆ…

ಆಗೀಗ ನೀರು ಕಾಣುವ
ಮಧುಮಾಲತಿ ಬಳ್ಳಿಯಲಿ
ತೊನೆವ ಕೆಂಪು-ಬಿಳಿ ಹೂಗಳು
ಪಕ್ಕದಲ್ಲೇ ನಸುಗಂಪಿನ
ದುಂಡು ಮಲ್ಲಿಗೆಯ ದಂಡು
ದೇಟಿನ ತುಂಬ ಬಣ್ಣಬಣ್ಣದ ದಾಸವಾಳ,
ಅರೆಬೆತ್ತಲಾದ ಸಂಪಿಗೆ ಮರದಲೂ
ಉಳಿದೆಲೆಗಳ ನಡುವೆ
ನಗುವ ಹಳದಿ ಘಮಲು,
ಎಲೆಯೊಂದಿಗೆ ಹೂಗಳನ್ನೂ
ಉದುರಿಸಿಕೊಳ್ಳುತಿರುವ ಚೆರ್ರಿ ಬ್ಲಾಸಂ
ಹಸಿರುಗಿಣಿಗಳು, ಚಿಟಗುಬ್ಬಿ, ಚಿಟ್ಟೆಗಳು
ನೀರ ಬಾನಿಯಲಿ
ರೆಕ್ಕೆ ಬಿಚ್ಚಿ ಮುಳಿಗೇಳುವ
ಕಾಗೆ, ಗುಬ್ಬಿ, ಪಾರಿವಾಳಗಳು…

ಎಲ್ಲಿಂದಲೋ ಹಾರಿ ಬಂದ
ಜೋಡಿ ಬುಲ್ಬುಲ್ ಹಕ್ಕಿಗಳು
ಇಳಿಬಿದ್ದ ಪೊದೆಯ ಮರೆಯಲಿದ್ದ
ಹಳೇ ಗೂಡ ಪತ್ತೆಹಚ್ಚಿ
ಕಡ್ಡಿ ಸೇರಿಸಿ, ಎಲೆ ಹೆಣೆದು,
ಭದ್ರಗೊಳಿಸಿ, ಒಪ್ಪವಾಗಿಸಿ
ಮೊಟ್ಟೆ ಇಟ್ಟು ಕಾವು ಕೊಡುತಿದ್ದರೆ
ಎಟುಕದ ಗೂಡಿಗೆ ಗೋಣೆತ್ತಿ
ಮಣ್ಣಿಗೆ ಮೈಯಾನಿಸಿ ಮಲಗಿದ
ತುಂಟ ಬೆಕ್ಕು…
ದೂರದಿಂದ ತೇಲಿ ಬರುತಿರುವ
ಕೋಗಿಲೆಯ ಕುಹೂ…ಕುಹೂ…

ಹೊರಗೆ ಸುರಿವ ಬಿಸಿಲು
ಒಳಗೆ ಕುದಿವ ಧಗೆ
ವಸಂತಕೆ ನುಗ್ಗಿದ
ಗ್ರೀಷ್ಮದುರಿಗೆ ಕಾದು
ಹಂಚಾಗಿರುವ ನೆಲಕೊರಗಿದ
ಹಣ್ಣೆಲೆಗಳ-ಹೂಗಳ ಹಾಸುಗೆ
ಭಾಷೆಯೇ ಬೇಕಿಲ್ಲದ
ಮಾತು ಮುಟ್ಟದ
ಅಕ್ಷರಗಳ ಹಂಗಿಲ್ಲದ
ಋತುಗಳ ಗತಿಗೆ
ಜೀವದ ಚಲನೆಗೆ
ನಡೆ ಇದೆ, ಶಬ್ದವೆಲ್ಲಿದೆ?

ನಿಸರ್ಗದ ನಡೆಯ ದನಿಗೆ
ಕಿವಿಯಾಗಿ, ಕಣ್ಣಾಗಿ…
ಒಂದಾಗಿ ನಿಂತೆ ಈ ಗಳಿಗೆ!

Previous post ಕೇಳಿಸಿತೇ?
ಕೇಳಿಸಿತೇ?
Next post ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ದಾರಿಯಲ್ಲದ ದಾರಿ…
Share:
Poems

ದಾರಿಯಲ್ಲದ ದಾರಿ…

October 10, 2023 ಕೆ.ಆರ್ ಮಂಗಳಾ
ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...

Comments 2

  1. Chinmayi
    Apr 7, 2024 Reply

    ಸರಳ, ಸುಂದರ

  2. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Apr 16, 2024 Reply

    ಯುಗಾದಿ ಸಮಯದಲ್ಲಿ ಎಲ್ಲ ಗಿಡ ಮರಗಳು ಚಿಗುರಿದಾಗ ವಿವಿಧ ಬಣ್ಣಗಳ ಬೇರೆ ಬೇರೆ ಹಲವು ಪರಿಮಳಗಳಿಂದ ತುಂಬಿದ ನಿಸರ್ಗದ ಹೊಸತನವು ‘ಒಂದಾಗಿ ನಿಂತೆ’ ಕವನದಲ್ಲಿ ತುಂಬಾ ಸೊಗಸಾಗಿ ಬಂದಿದೆ👌👌👍👍🙂

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಂಟಿನ ನಂಟು
ಗಂಟಿನ ನಂಟು
November 7, 2020
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಸನಾತನ ಧರ್ಮ
ಸನಾತನ ಧರ್ಮ
October 10, 2023
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
Copyright © 2025 Bayalu