Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರವಲು ಮನೆ…
Share:
Poems August 10, 2023 ಕೆ.ಆರ್ ಮಂಗಳಾ

ಎರವಲು ಮನೆ…

ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ
ಉರಿದುರಿದು ಬೂದಿಯಾಗಿತ್ತು
ಪೇರಿಸಿ ಇಟ್ಟ ಸಿರಿ-ಸಂಪತ್ತು
ಆರಿಸ ಹೋದರೆ ಕೈ ಸುಟ್ಟಿತ್ತು
ಹಲುಬಿಹೆನೆಂದರೆ ದನಿ ಅಡಗಿತ್ತು
ಕೂಗಲು ಹೋದರೆ ಕಂಠ ಒಡೆದಿತ್ತು

ಹೊತ್ತಿ ಉರಿದಿತ್ತು ತಲೆ ಮೇಲಿನ ಸೂರು
ಕರಕಲಾದವು ಐದು ತೊಲೆಗಳು
ವಿಷಯಗಳಾಸರೆ ಕುಸಿಯತೊಡಗಿತ್ತು
ನಿಂತ ನೆಲವೇ ಜಾರುತಲಿತ್ತು
ಓಡಿಹೆನೆಂದರೆ ಬೀದಿಗಳಿಲ್ಲ
ಅವಿತುಕೊಳ್ಳಲು ಒಂದೂ ಗಲ್ಲಿಗಳಿಲ್ಲ

ಎತ್ತಲೋ ಓಡಿತು ಕಿಚ್ಚಿಗೆ ಅಂಜಿ
ದೂಳೆಬ್ಬಿಸಿ ಕಾಲ್ಕೆದರುತಲಿದ್ದ
ನನ್ನೊಳಗಿನ ಮದವೇರಿದ ಗೂಳಿ
ದೂಳುಕಟ್ಟಿದ ನೋಟಗಳಿಲ್ಲ
ಚಿತ್ತ ಭ್ರಾಂತಿಯ ರೂಪಗಳಿಲ್ಲ
ದಿಟ್ಟಿಸಲಿಕ್ಕೆ ಎದುರೆಂಬುದೇ ಇಲ್ಲ

ಭಸ್ಮವಾಗಲು ಮನೆ ಕಣ್ಣೆದುರಲ್ಲೇ
ಮೂಕವಾಯಿತು ಮನ ಒಳಗಲ್ಲೇ
ಕೂಡಿಹೆನೆಂದರೆ ಆತ್ಮ ಬೇರಿಲ್ಲ
ಹಿಡಿದಿಡಲು ದೇಹ ಉಳಿಯುವುದಿಲ್ಲ
ವೇದಿಕೆ ಏರಲು ವೇಷಗಳಿಲ್ಲ
ಬಣ್ಣ ಹಚ್ಚಲು ಮುಖವೇ ಇಲ್ಲ!

ಗುಪ್ತ ನಿಧಿಯ ಸಂಚಯ ಕೆಡಿಸಿ,
ತೋರುವ ಜಗದ ಸಂಚನು ತಿಳಿಸಿ
ನಂಬಿದ ಗುರುವೇ ಕಿಚ್ಚನ್ನಿಟ್ಟ
ಬಯಲ ಬಾಳಿಗೆ ಮುನ್ನುಡಿ ಬರೆದ
ಭಾವಗಳಿಲ್ಲ, ಜಾಲಗಳಿಲ್ಲ
ನೋಟಗಳಿಲ್ಲ, ಕೂಟಗಳಿಲ್ಲ…

ಎರವಲು ಮನೆಯ ಋಣ ಹರಿದಿತ್ತು
ಜಗದ ಜಗುಲಿಯಲಿ ಬೆಳಕೊಂದಿತ್ತು.

Previous post ಯಾಕೀ ಗೊಡವೆ?
ಯಾಕೀ ಗೊಡವೆ?
Next post ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ

Related Posts

ನಾನು  ಬಿಂಬ
Share:
Poems

ನಾನು ಬಿಂಬ

September 13, 2025 ಜ್ಯೋತಿಲಿಂಗಪ್ಪ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು. -ಅಲ್ಲಮ ಈ ಕನ್ನಡಿಯಲಿ ಕಾಣುವ ನನ ಬಿಂಬವ ಓಡಿಸುವುದು ಹೇಗೆ…??!! ಕಣ್ಣ ಮುಚ್ಚಿದರೆ ಕನ್ನಡಿ ದೂರ ಕಣ್ಣ ತೆರೆದರೆ ನಾನು ಅದೂರ...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 1

  1. ಪೆರೂರು ಜಾರು, ಉಡುಪಿ
    Aug 16, 2023 Reply

    ಬಯಲು ಎರವಲೊಳಗೊ
    ಎರವಲು ಗುರುವೊಳಗೊ
    ಬಯಲು ಗುರುವೆರಡು ಎರವಲ
    ಬೂದಿ ಮುಚ್ಚಿದ ಕಿಚ್ಚಿನೊಳಗೊ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಮಾತು ಮಾಯೆ
ಮಾತು ಮಾಯೆ
July 4, 2021
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಈ  ದಾರಿ…
ಈ ದಾರಿ…
May 10, 2023
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
July 10, 2023
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
Copyright © 2025 Bayalu