Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರವಲು ಮನೆ…
Share:
Poems August 10, 2023 ಕೆ.ಆರ್ ಮಂಗಳಾ

ಎರವಲು ಮನೆ…

ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ
ಉರಿದುರಿದು ಬೂದಿಯಾಗಿತ್ತು
ಪೇರಿಸಿ ಇಟ್ಟ ಸಿರಿ-ಸಂಪತ್ತು
ಆರಿಸ ಹೋದರೆ ಕೈ ಸುಟ್ಟಿತ್ತು
ಹಲುಬಿಹೆನೆಂದರೆ ದನಿ ಅಡಗಿತ್ತು
ಕೂಗಲು ಹೋದರೆ ಕಂಠ ಒಡೆದಿತ್ತು

ಹೊತ್ತಿ ಉರಿದಿತ್ತು ತಲೆ ಮೇಲಿನ ಸೂರು
ಕರಕಲಾದವು ಐದು ತೊಲೆಗಳು
ವಿಷಯಗಳಾಸರೆ ಕುಸಿಯತೊಡಗಿತ್ತು
ನಿಂತ ನೆಲವೇ ಜಾರುತಲಿತ್ತು
ಓಡಿಹೆನೆಂದರೆ ಬೀದಿಗಳಿಲ್ಲ
ಅವಿತುಕೊಳ್ಳಲು ಒಂದೂ ಗಲ್ಲಿಗಳಿಲ್ಲ

ಎತ್ತಲೋ ಓಡಿತು ಕಿಚ್ಚಿಗೆ ಅಂಜಿ
ದೂಳೆಬ್ಬಿಸಿ ಕಾಲ್ಕೆದರುತಲಿದ್ದ
ನನ್ನೊಳಗಿನ ಮದವೇರಿದ ಗೂಳಿ
ದೂಳುಕಟ್ಟಿದ ನೋಟಗಳಿಲ್ಲ
ಚಿತ್ತ ಭ್ರಾಂತಿಯ ರೂಪಗಳಿಲ್ಲ
ದಿಟ್ಟಿಸಲಿಕ್ಕೆ ಎದುರೆಂಬುದೇ ಇಲ್ಲ

ಭಸ್ಮವಾಗಲು ಮನೆ ಕಣ್ಣೆದುರಲ್ಲೇ
ಮೂಕವಾಯಿತು ಮನ ಒಳಗಲ್ಲೇ
ಕೂಡಿಹೆನೆಂದರೆ ಆತ್ಮ ಬೇರಿಲ್ಲ
ಹಿಡಿದಿಡಲು ದೇಹ ಉಳಿಯುವುದಿಲ್ಲ
ವೇದಿಕೆ ಏರಲು ವೇಷಗಳಿಲ್ಲ
ಬಣ್ಣ ಹಚ್ಚಲು ಮುಖವೇ ಇಲ್ಲ!

ಗುಪ್ತ ನಿಧಿಯ ಸಂಚಯ ಕೆಡಿಸಿ,
ತೋರುವ ಜಗದ ಸಂಚನು ತಿಳಿಸಿ
ನಂಬಿದ ಗುರುವೇ ಕಿಚ್ಚನ್ನಿಟ್ಟ
ಬಯಲ ಬಾಳಿಗೆ ಮುನ್ನುಡಿ ಬರೆದ
ಭಾವಗಳಿಲ್ಲ, ಜಾಲಗಳಿಲ್ಲ
ನೋಟಗಳಿಲ್ಲ, ಕೂಟಗಳಿಲ್ಲ…

ಎರವಲು ಮನೆಯ ಋಣ ಹರಿದಿತ್ತು
ಜಗದ ಜಗುಲಿಯಲಿ ಬೆಳಕೊಂದಿತ್ತು.

Previous post ಯಾಕೀ ಗೊಡವೆ?
ಯಾಕೀ ಗೊಡವೆ?
Next post ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 1

  1. ಪೆರೂರು ಜಾರು, ಉಡುಪಿ
    Aug 16, 2023 Reply

    ಬಯಲು ಎರವಲೊಳಗೊ
    ಎರವಲು ಗುರುವೊಳಗೊ
    ಬಯಲು ಗುರುವೆರಡು ಎರವಲ
    ಬೂದಿ ಮುಚ್ಚಿದ ಕಿಚ್ಚಿನೊಳಗೊ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೆಮ್ಮದಿ
ನೆಮ್ಮದಿ
April 6, 2020
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ನಾನು  ಬಿಂಬ
ನಾನು ಬಿಂಬ
September 13, 2025
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಮರೆತೆ…
ಮರೆತೆ…
July 4, 2022
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಅಂದು-ಇಂದು
ಅಂದು-ಇಂದು
December 8, 2021
ಈ ಕನ್ನಡಿ
ಈ ಕನ್ನಡಿ
March 6, 2024
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
Copyright © 2025 Bayalu