Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಗು ಕನ್ನಡಿಯಂತೆ…
Share:
Poems September 13, 2025 ಕೆ.ಆರ್ ಮಂಗಳಾ

ಆಗು ಕನ್ನಡಿಯಂತೆ…

ಗ್ರಹಿಸು
ಸಂಗ್ರಹಿಸಬೇಡ
ಏನನ್ನೂ…
ಕಂಡದ್ದು ಕೇಳಿದ್ದು
ಮೂಸಿದ್ದು ಮುಟ್ಟಿದ್ದು
ಅನುಭವಿಸಿದ್ದು
ಓದಿದ್ದು ಕೂಡ…

ತೂರಿಹೋಗಲಿ
ಅವಿತ
ವಾಸನೆಗಳೆಲ್ಲಾ
ಮುಗಿಬಿದ್ದು
ಬರುವ
ಯೋಚನೆಗಳೆಲ್ಲಾ
ಹೊಂಚು
ಹಾಕುವ
ಸಂಚಯಗಳೆಲ್ಲಾ…
ಸಂಕಲ್ಪ
ವಿಕಲ್ಪಗಳ
ತೊಳಲಾಟಗಳೆಲ್ಲಾ…

ಮಾತು
ಬಲಿಯದ ಮುನ್ನ
ಮೌನ ತಾಳು
ಮೌನ
ಕರಗುವ ಮುನ್ನ
ಖಾಲಿಯಾಗು…

ಸಹನಳಾಗು
ಭೂಮಿಯಂತೆ
ಸ್ವತಂತ್ರವಾಗಿರು
ಗಾಳಿಯಂತೆ
ಹರಿಯುತಿರು
ನೀರಿನಂತೆ
ಶುದ್ಧವಾಗಿರು
ಬೆಂಕಿಯಂತೆ
ಮುಕ್ತವಾಗಿರು
ಆಗಸದಂತೆ…

ಗುರು-
ಎಲ್ಲ ಹೇಳಿಯೂ
ಹೇಳದ ಗುಟ್ಟು…
ತೋರುವ ಕನ್ನಡಿ
ಕೂಡಿಡದು ಏನನೂ…
ಕನ್ನಡಿಯಾದರಲ್ಲವೆ
ಮನವೆಂಬುದು
ಬೇರಲ್ಲಾ
ಮಹಾದೇವನ ಅರುಹು.

Previous post ನಾನು  ಬಿಂಬ
ನಾನು ಬಿಂಬ

Related Posts

ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 1

  1. ಸುರೇಶ್ ಪಾಟೀಲ್
    Oct 2, 2025 Reply

    ಅಕ್ಕಾ, ಪದೇಪದೇ ಓದಿಸಿಕೊಳ್ಳುವ ಮಾತುಗಳಿವೆ ನಿಮ್ಮ ಕವನದಲ್ಲಿ, ಬಹಳ ಹಿಡಿಸಿತು. ಅಂತಹ ಗುರು ಸಿಗುವ ಪುಣ್ಯ ಎಲ್ಲರಿಗೂ ಇರುವುದಿಲ್ಲ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
WHO AM I?
WHO AM I?
June 17, 2020
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
Copyright © 2025 Bayalu