Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಗು ಕನ್ನಡಿಯಂತೆ…
Share:
Poems September 13, 2025 ಕೆ.ಆರ್ ಮಂಗಳಾ

ಆಗು ಕನ್ನಡಿಯಂತೆ…

ಗ್ರಹಿಸು
ಸಂಗ್ರಹಿಸಬೇಡ
ಏನನ್ನೂ…
ಕಂಡದ್ದು ಕೇಳಿದ್ದು
ಮೂಸಿದ್ದು ಮುಟ್ಟಿದ್ದು
ಅನುಭವಿಸಿದ್ದು
ಓದಿದ್ದು ಕೂಡ…

ತೂರಿಹೋಗಲಿ
ಅವಿತ
ವಾಸನೆಗಳೆಲ್ಲಾ
ಮುಗಿಬಿದ್ದು
ಬರುವ
ಯೋಚನೆಗಳೆಲ್ಲಾ
ಹೊಂಚು
ಹಾಕುವ
ಸಂಚಯಗಳೆಲ್ಲಾ…
ಸಂಕಲ್ಪ
ವಿಕಲ್ಪಗಳ
ತೊಳಲಾಟಗಳೆಲ್ಲಾ…

ಮಾತು
ಬಲಿಯದ ಮುನ್ನ
ಮೌನ ತಾಳು
ಮೌನ
ಕರಗುವ ಮುನ್ನ
ಖಾಲಿಯಾಗು…

ಸಹನಳಾಗು
ಭೂಮಿಯಂತೆ
ಸ್ವತಂತ್ರವಾಗಿರು
ಗಾಳಿಯಂತೆ
ಹರಿಯುತಿರು
ನೀರಿನಂತೆ
ಶುದ್ಧವಾಗಿರು
ಬೆಂಕಿಯಂತೆ
ಮುಕ್ತವಾಗಿರು
ಆಗಸದಂತೆ…

ಗುರು-
ಎಲ್ಲ ಹೇಳಿಯೂ
ಹೇಳದ ಗುಟ್ಟು…
ತೋರುವ ಕನ್ನಡಿ
ಕೂಡಿಡದು ಏನನೂ…
ಕನ್ನಡಿಯಾದರಲ್ಲವೆ
ಮನವೆಂಬುದು
ಬೇರಲ್ಲಾ
ಮಹಾದೇವನ ಅರುಹು.

Previous post ನಾನು  ಬಿಂಬ
ನಾನು ಬಿಂಬ

Related Posts

ಚಿತ್ತ ಸತ್ಯ…
Share:
Poems

ಚಿತ್ತ ಸತ್ಯ…

June 14, 2024 ಕೆ.ಆರ್ ಮಂಗಳಾ
ಚಿತ್ತದೊಳಿವೆ ಎರಡು ಕವಲು ಒಂದು ರಂಗುರಂಗಿನ ದಾರಿ ಅದು ಮಹಾ ಹೆದ್ದಾರಿ ಪ್ರಪಂಚದರಿವು ಬಂದಾಗಿನಿಂದ ಅತ್ತಲೇ ನಡೆದು ರೂಢಿ ಅನಾದಿ ಕಾಲದ ದಾಸ್ತಾನುಗಳೆಲ್ಲ ಅಲ್ಲಿ...
ಹುಡುಕಾಟ…
Share:
Poems

ಹುಡುಕಾಟ…

August 8, 2021 ಜ್ಯೋತಿಲಿಂಗಪ್ಪ
ಈ ಮರವೆ ಯಾವಾಗ ಬರುತ್ತೋ ಕಾಯುತಾ ಕುಳಿತಿರುವೆ ಅಲೆದಾಡಿ ಕಾಲು ಸೋತಿವೆ ಹುಡುಕಾಡಿ ಕಣ್ಣು ಸೋತಿವೆ ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಪೊರೆವ ದನಿ…
ಪೊರೆವ ದನಿ…
August 11, 2025
WHO AM I?
WHO AM I?
June 17, 2020
ಲಿಂಗಾಚಾರ
ಲಿಂಗಾಚಾರ
May 6, 2021
ಶರಣನಾಗುವುದು…
ಶರಣನಾಗುವುದು…
February 10, 2023
ಗಣಾಚಾರ
ಗಣಾಚಾರ
August 8, 2021
Copyright © 2025 Bayalu