Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವಿನ ಬಾಗಿಲು…
Share:
Poems October 13, 2022 ಕೆ.ಆರ್ ಮಂಗಳಾ

ಅರಿವಿನ ಬಾಗಿಲು…

ಹುಚ್ಚು ಮನಸಿನ ಕುಣಿತ
ದಿಕ್ಕುದಿಕ್ಕಿಗೂ ಸೆಳೆತ
ಅಡಿಗಡಿಗು ಎಡತಾಕುವ
ವಿಷಯಗಳ ಡೈನಮೈಟು
ಕಾಲು ಎಚ್ಚರ ತಪ್ಪದಂತೆ
ಜಾಣ ನಡಿಗೆಯ ಹೇಳಿಕೊಡುತಾನೆ
ಹುಟ್ಟು-ಸಾವಿನ ಚಕ್ರದ ಮರ್ಮ ತೋರುತಾನೆ

ಭಾವ ಜಾಲಗಳ ಹೆಣಿಗೆ
ಚಿತ್ತ ಭ್ರಾಂತಿಯ ಮೆರವಣಿಗೆ
ಪಂಚೇಂದ್ರಿಯಗಳ ಉರವಣೆ
ಮುಗಿಯಲಾರದ ಬವಣೆ
ಉಸಿರುಸಿಕ್ಕು ಚಡಪಡಿಸುವಾಗ
ಬಲೆ ಕತ್ತರಿಸುವ ಕಲೆಯ ಕಲಿಸುತಾನೆ
ಮತ್ತೆ ಅದ ಕಟ್ಟದಾ ತಂತ್ರ ತಿಳಿಸುತಾನೆ

ಬಾಳ ಕದಳಿಯಲಿ
ಬಸವಳಿದು ಕುಸಿದಾಗ
ದಿಕ್ಕುಗಾಣದೆ ಕಂಗೆಟ್ಟು ಅಲೆವಾಗ
ಮಮ್ಮಲ ಮರುಗುತಾನೆ
ಮಮತೆಯಲಿ ಕೈಹಿಡಿದು
ಪಯಣದ ನಿಜವ ಅರುಹುತಾನೆ
ಮತ್ತೆ ದಾರಿತಪ್ಪದ ಗುಟ್ಟು ಕಲಿಸುತಾನೆ

ನಿನ್ನ ನೀತಿಳಿಯೆಂದು
ಅರಿವಿನ ಕಂದೀಲ ಕೈಗಿಕ್ಕಿ
ಅಂತರಂಗದ ಪಯಣಕೆ
ಮನವ ಸಿದ್ಧಗೊಳಿಸುತಾನೆ
ಭವದ ಬೆಂಗುಡಿಯ ಬಿಡಿಸಿ
ಭಕ್ತಿಯ ಮರ್ಮವನು ಅಂಗೈಗೆ ಇಡುತಾನೆ
ನಿಜಮುಕ್ತಿಯ ಮಾರ್ಗವನು ತೋರುತಾನೆ

ತಿದ್ದಿ ತೀಡಿ ಬೆಳೆಸುತಾನೆ
ಝುಂಕಿಸಿ ಮನವ ಚುಚ್ಚುತಾನೆ
ಕದ್ದು ನಡೆದರೆ ಗುದ್ದುತಾನೆ
ಸುಳ್ಳು ನುಡಿಯಲು ಕೆರಳುತಾನೆ
ಸೋಗು ಮುಖಗಳ ಕೆಡವುತಾನೆ
ಬೀಳದಂತೆ ಎಚ್ಚರಿಸುತಾನೆ
ಬಿದ್ದಾಗಲೆಲ್ಲಾ ಎತ್ತುತಾನೆ

ಬೈದು ಬುದ್ಧಿ ಹೇಳುತಾನೆ
ನನ್ನ ಮೋಸ ನನಗೆ ತೋರುತಾನೆ
ಕಂಗಳ ಕರುಳ ಕತ್ತರಿಸುತಾನೆ
ಮನದ ತಿರುಳ ಹುರಿಯುತಾನೆ
ಮಾತಿನ ಮೂಲಕೆ ಒಯ್ಯುತಾನೆ
ಅರಿವಿನ ನೆಲೆಯತ್ತ ನಡೆಸುತಾನೆ
ನನ್ನ ಒಳಗನು ನನಗೆ ಪರಿಚಯಿಸುತಾನೆ

ನನ್ನ ನನಗೊಪ್ಪಿಸಲು
ಗುರು ತೆರೆಯದ ಕಿಟಕಿಗಳಿಲ್ಲ…
ತೋರದ ದಾರಿಗಳಿಲ್ಲ…
ಹೇಳದ ಗುಟ್ಟುಗಳಿಲ್ಲ…
ಸತ್ಯದ ದಾರಿ ತೋರಿದ
ಎನ್ನ ಭಾಗ್ಯದ ಬಾಗಿಲು ನೀ
ಶರಣು ಗುರುವೇ ನಿನಗೆ ಶರಣು ಶರಣು.

Previous post ಗೆರೆ ಎಳೆಯದೆ…
ಗೆರೆ ಎಳೆಯದೆ…
Next post ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?

Related Posts

ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...
ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...

Comments 3

  1. ಶರಣ್ ಸ್ವಾಮಿ ಮಠಪತಿ
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  2. Sharan swami
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  3. ಪೆರೂರು ಜಾರು, ಉಡುಪಿ
    Oct 20, 2022 Reply

    ಗುರು ಅರಿವಿನ ಬಾಗಿಲಾದರೆ ಓಕೆ; ಗರುವದ ಬಾಗಿಲಾದರೆ ಜೋಕೆ; ಈಗಿನ ಗುರುಗಳನ್ನು ಕಾಣುವಾಗ ಹೊರಗೆ ಒಳಗೆ ಬರಿ ಬಯಕೆ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ಹಣತೆ ಸಾಕು
ಹಣತೆ ಸಾಕು
September 14, 2024
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಶಿವಯೋಗ
ಶಿವಯೋಗ
July 4, 2021
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
Copyright © 2026 Bayalu