Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವಿನ ಬಾಗಿಲು…
Share:
Poems October 13, 2022 ಕೆ.ಆರ್ ಮಂಗಳಾ

ಅರಿವಿನ ಬಾಗಿಲು…

ಹುಚ್ಚು ಮನಸಿನ ಕುಣಿತ
ದಿಕ್ಕುದಿಕ್ಕಿಗೂ ಸೆಳೆತ
ಅಡಿಗಡಿಗು ಎಡತಾಕುವ
ವಿಷಯಗಳ ಡೈನಮೈಟು
ಕಾಲು ಎಚ್ಚರ ತಪ್ಪದಂತೆ
ಜಾಣ ನಡಿಗೆಯ ಹೇಳಿಕೊಡುತಾನೆ
ಹುಟ್ಟು-ಸಾವಿನ ಚಕ್ರದ ಮರ್ಮ ತೋರುತಾನೆ

ಭಾವ ಜಾಲಗಳ ಹೆಣಿಗೆ
ಚಿತ್ತ ಭ್ರಾಂತಿಯ ಮೆರವಣಿಗೆ
ಪಂಚೇಂದ್ರಿಯಗಳ ಉರವಣೆ
ಮುಗಿಯಲಾರದ ಬವಣೆ
ಉಸಿರುಸಿಕ್ಕು ಚಡಪಡಿಸುವಾಗ
ಬಲೆ ಕತ್ತರಿಸುವ ಕಲೆಯ ಕಲಿಸುತಾನೆ
ಮತ್ತೆ ಅದ ಕಟ್ಟದಾ ತಂತ್ರ ತಿಳಿಸುತಾನೆ

ಬಾಳ ಕದಳಿಯಲಿ
ಬಸವಳಿದು ಕುಸಿದಾಗ
ದಿಕ್ಕುಗಾಣದೆ ಕಂಗೆಟ್ಟು ಅಲೆವಾಗ
ಮಮ್ಮಲ ಮರುಗುತಾನೆ
ಮಮತೆಯಲಿ ಕೈಹಿಡಿದು
ಪಯಣದ ನಿಜವ ಅರುಹುತಾನೆ
ಮತ್ತೆ ದಾರಿತಪ್ಪದ ಗುಟ್ಟು ಕಲಿಸುತಾನೆ

ನಿನ್ನ ನೀತಿಳಿಯೆಂದು
ಅರಿವಿನ ಕಂದೀಲ ಕೈಗಿಕ್ಕಿ
ಅಂತರಂಗದ ಪಯಣಕೆ
ಮನವ ಸಿದ್ಧಗೊಳಿಸುತಾನೆ
ಭವದ ಬೆಂಗುಡಿಯ ಬಿಡಿಸಿ
ಭಕ್ತಿಯ ಮರ್ಮವನು ಅಂಗೈಗೆ ಇಡುತಾನೆ
ನಿಜಮುಕ್ತಿಯ ಮಾರ್ಗವನು ತೋರುತಾನೆ

ತಿದ್ದಿ ತೀಡಿ ಬೆಳೆಸುತಾನೆ
ಝುಂಕಿಸಿ ಮನವ ಚುಚ್ಚುತಾನೆ
ಕದ್ದು ನಡೆದರೆ ಗುದ್ದುತಾನೆ
ಸುಳ್ಳು ನುಡಿಯಲು ಕೆರಳುತಾನೆ
ಸೋಗು ಮುಖಗಳ ಕೆಡವುತಾನೆ
ಬೀಳದಂತೆ ಎಚ್ಚರಿಸುತಾನೆ
ಬಿದ್ದಾಗಲೆಲ್ಲಾ ಎತ್ತುತಾನೆ

ಬೈದು ಬುದ್ಧಿ ಹೇಳುತಾನೆ
ನನ್ನ ಮೋಸ ನನಗೆ ತೋರುತಾನೆ
ಕಂಗಳ ಕರುಳ ಕತ್ತರಿಸುತಾನೆ
ಮನದ ತಿರುಳ ಹುರಿಯುತಾನೆ
ಮಾತಿನ ಮೂಲಕೆ ಒಯ್ಯುತಾನೆ
ಅರಿವಿನ ನೆಲೆಯತ್ತ ನಡೆಸುತಾನೆ
ನನ್ನ ಒಳಗನು ನನಗೆ ಪರಿಚಯಿಸುತಾನೆ

ನನ್ನ ನನಗೊಪ್ಪಿಸಲು
ಗುರು ತೆರೆಯದ ಕಿಟಕಿಗಳಿಲ್ಲ…
ತೋರದ ದಾರಿಗಳಿಲ್ಲ…
ಹೇಳದ ಗುಟ್ಟುಗಳಿಲ್ಲ…
ಸತ್ಯದ ದಾರಿ ತೋರಿದ
ಎನ್ನ ಭಾಗ್ಯದ ಬಾಗಿಲು ನೀ
ಶರಣು ಗುರುವೇ ನಿನಗೆ ಶರಣು ಶರಣು.

Previous post ಗೆರೆ ಎಳೆಯದೆ…
ಗೆರೆ ಎಳೆಯದೆ…
Next post ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?

Related Posts

ಹಣತೆಯ ಹಂಗು
Share:
Poems

ಹಣತೆಯ ಹಂಗು

October 19, 2025 ಕೆ.ಆರ್ ಮಂಗಳಾ
ನಾನೆಂಬ ಕತ್ತಲೆಗೆ ನೀನೆಂಬ ಜ್ಯೋತಿ ನಾನಿದ್ದಾಗ ನೀ ಇರಲೇ ಬೇಕೆನುವ ತರ್ಕ ನಾನು ಕರಗದೆ ನೀನಾಗಲಾರೆ ನೀನು ಸರಿಯದೇ ಬೆಳಕ ಕಾಣಲಾರೆ… ಕತ್ತಲೆಗಲ್ಲವೆ ಬೆಳಕಿನ ಮೋಹ? ಕೈಯ ಹಣತೆಯಲಿ...
ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...

Comments 3

  1. ಶರಣ್ ಸ್ವಾಮಿ ಮಠಪತಿ
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  2. Sharan swami
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  3. ಪೆರೂರು ಜಾರು, ಉಡುಪಿ
    Oct 20, 2022 Reply

    ಗುರು ಅರಿವಿನ ಬಾಗಿಲಾದರೆ ಓಕೆ; ಗರುವದ ಬಾಗಿಲಾದರೆ ಜೋಕೆ; ಈಗಿನ ಗುರುಗಳನ್ನು ಕಾಣುವಾಗ ಹೊರಗೆ ಒಳಗೆ ಬರಿ ಬಯಕೆ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ಮಾತು ಮಾಯೆ
ಮಾತು ಮಾಯೆ
July 4, 2021
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಶಿವನ ಕುದುರೆ…
ಶಿವನ ಕುದುರೆ…
May 1, 2019
Copyright © 2025 Bayalu