Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾಯದ ಗಾಯ
Share:
Poems October 19, 2025 ಜ್ಯೋತಿಲಿಂಗಪ್ಪ

ಮಾಯದ ಗಾಯ

ಯಾವಾಗ ಮಳೆ ಬರುವುದೋ
ಕಾಯುವ ಆ ದಿನ
ಯಾವಾಗ ಮಳೆ ನಿಲ್ಲುವುದೋ
ಕಾಯುವ ಈ ದಿನ

ದಿನಾ ಕಾಯುವ ಈ ದಿನಕರ
ತೋಯಗಳಲಿ ತುಯ್ಯಲಾಟ
ಘನವ ನಾನೇನು ಬಲ್ಲೆ

ಗೂಡು ಕಟ್ಟಿದ ಹಕ್ಕಿ
ಅಂಗಣದಲಿ ಹಾರಾಟ

ಗೂಡು ಘನವೇ ಕಿರಿದಾಗದು ತತ್ತಿ
ತತ್ತಿ ಘನವೇ ಕಿರಿದಾಗದು ಪ್ರಾಣ
ಪ್ರಾಣ ಘನವೇ ಕಿರಿದಾಗದು ಹಾರುವ ಹಕ್ಕಿ

ತತ್ತಿಯೊಳಗಣ ಆ ಹಕ್ಕಿ ಪ್ರಾಣ
ಗೂಡಲ್ಲಿ ಅಡಗಿತ್ತು

ಕಾಮದ ತುಂಟಾಟ
ಮೋಹದ ಮಿಂಡಾಟ
ಕ್ರೋಧದ ಛಲದಾಟ

ಮದದ ಹಮ್ಮಿನಾಟ
ಲೋಭದ ಜೂಜಾಟ
ಮತ್ಸರದ ಹೊಗೆಯಾಟ

ಆಡಿ ಕೆಡದಿರೆ ನಿಬ್ಬೆರಗು

ಮಾಯದ ಗಾಯವ
ನೆನಹು ನೆಕ್ಕಿತ್ತು

ಕಣ್ಣೊಳಗಣ ಬಿಂಬದ ಗೊಂಬೆ
ನೀರಾಯಿತು.

Previous post ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
Next post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…

Related Posts

ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...
ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...

Comments 3

  1. ಕುಸುಮಾ ತಂಗಡಗಿ
    Oct 27, 2025 Reply

    ನೆನಪುಗಳು ಯಾವತ್ತೂ ಗಾಯವನ್ನು ಮಾಯಲು ಬಿಡುವುದಿಲ್ಲಾ😟

  2. ಸುಂದರ್ ಪೌಳಿ
    Nov 7, 2025 Reply

    ಕಣ್ಣ ಬಿಂಬ ಮನದ ಬಿಂಬ, ಬಿಂಬ ಅಳಿದರೆ ಎಲ್ಲವೂ ಶೂನ್ಯ… ಯಾವುದು ಹಿರಿದು, ಯಾವುದು ಕಿರಿದು?… ಚೆನ್ನಾಗಿದೆ ಕವನ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Nov 25, 2025 Reply

      ಓದಿಗೆ… ಸಂತಸ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
WHO AM I?
WHO AM I?
June 17, 2020
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
Copyright © 2026 Bayalu