Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾಯದ ಗಾಯ
Share:
Poems October 19, 2025 ಜ್ಯೋತಿಲಿಂಗಪ್ಪ

ಮಾಯದ ಗಾಯ

ಯಾವಾಗ ಮಳೆ ಬರುವುದೋ
ಕಾಯುವ ಆ ದಿನ
ಯಾವಾಗ ಮಳೆ ನಿಲ್ಲುವುದೋ
ಕಾಯುವ ಈ ದಿನ

ದಿನಾ ಕಾಯುವ ಈ ದಿನಕರ
ತೋಯಗಳಲಿ ತುಯ್ಯಲಾಟ
ಘನವ ನಾನೇನು ಬಲ್ಲೆ

ಗೂಡು ಕಟ್ಟಿದ ಹಕ್ಕಿ
ಅಂಗಣದಲಿ ಹಾರಾಟ

ಗೂಡು ಘನವೇ ಕಿರಿದಾಗದು ತತ್ತಿ
ತತ್ತಿ ಘನವೇ ಕಿರಿದಾಗದು ಪ್ರಾಣ
ಪ್ರಾಣ ಘನವೇ ಕಿರಿದಾಗದು ಹಾರುವ ಹಕ್ಕಿ

ತತ್ತಿಯೊಳಗಣ ಆ ಹಕ್ಕಿ ಪ್ರಾಣ
ಗೂಡಲ್ಲಿ ಅಡಗಿತ್ತು

ಕಾಮದ ತುಂಟಾಟ
ಮೋಹದ ಮಿಂಡಾಟ
ಕ್ರೋಧದ ಛಲದಾಟ

ಮದದ ಹಮ್ಮಿನಾಟ
ಲೋಭದ ಜೂಜಾಟ
ಮತ್ಸರದ ಹೊಗೆಯಾಟ

ಆಡಿ ಕೆಡದಿರೆ ನಿಬ್ಬೆರಗು

ಮಾಯದ ಗಾಯವ
ನೆನಹು ನೆಕ್ಕಿತ್ತು

ಕಣ್ಣೊಳಗಣ ಬಿಂಬದ ಗೊಂಬೆ
ನೀರಾಯಿತು.

Previous post ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
Next post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…

Related Posts

ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Comments 3

  1. ಕುಸುಮಾ ತಂಗಡಗಿ
    Oct 27, 2025 Reply

    ನೆನಪುಗಳು ಯಾವತ್ತೂ ಗಾಯವನ್ನು ಮಾಯಲು ಬಿಡುವುದಿಲ್ಲಾ😟

  2. ಸುಂದರ್ ಪೌಳಿ
    Nov 7, 2025 Reply

    ಕಣ್ಣ ಬಿಂಬ ಮನದ ಬಿಂಬ, ಬಿಂಬ ಅಳಿದರೆ ಎಲ್ಲವೂ ಶೂನ್ಯ… ಯಾವುದು ಹಿರಿದು, ಯಾವುದು ಕಿರಿದು?… ಚೆನ್ನಾಗಿದೆ ಕವನ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Nov 25, 2025 Reply

      ಓದಿಗೆ… ಸಂತಸ.

Leave a Reply to ಸುಂದರ್ ಪೌಳಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
Copyright © 2026 Bayalu