Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾಯದ ಗಾಯ
Share:
Poems October 19, 2025 ಜ್ಯೋತಿಲಿಂಗಪ್ಪ

ಮಾಯದ ಗಾಯ

ಯಾವಾಗ ಮಳೆ ಬರುವುದೋ
ಕಾಯುವ ಆ ದಿನ
ಯಾವಾಗ ಮಳೆ ನಿಲ್ಲುವುದೋ
ಕಾಯುವ ಈ ದಿನ

ದಿನಾ ಕಾಯುವ ಈ ದಿನಕರ
ತೋಯಗಳಲಿ ತುಯ್ಯಲಾಟ
ಘನವ ನಾನೇನು ಬಲ್ಲೆ

ಗೂಡು ಕಟ್ಟಿದ ಹಕ್ಕಿ
ಅಂಗಣದಲಿ ಹಾರಾಟ

ಗೂಡು ಘನವೇ ಕಿರಿದಾಗದು ತತ್ತಿ
ತತ್ತಿ ಘನವೇ ಕಿರಿದಾಗದು ಪ್ರಾಣ
ಪ್ರಾಣ ಘನವೇ ಕಿರಿದಾಗದು ಹಾರುವ ಹಕ್ಕಿ

ತತ್ತಿಯೊಳಗಣ ಆ ಹಕ್ಕಿ ಪ್ರಾಣ
ಗೂಡಲ್ಲಿ ಅಡಗಿತ್ತು

ಕಾಮದ ತುಂಟಾಟ
ಮೋಹದ ಮಿಂಡಾಟ
ಕ್ರೋಧದ ಛಲದಾಟ

ಮದದ ಹಮ್ಮಿನಾಟ
ಲೋಭದ ಜೂಜಾಟ
ಮತ್ಸರದ ಹೊಗೆಯಾಟ

ಆಡಿ ಕೆಡದಿರೆ ನಿಬ್ಬೆರಗು

ಮಾಯದ ಗಾಯವ
ನೆನಹು ನೆಕ್ಕಿತ್ತು

ಕಣ್ಣೊಳಗಣ ಬಿಂಬದ ಗೊಂಬೆ
ನೀರಾಯಿತು.

Previous post ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
Next post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ವರದಿ ಕೊಡಬೇಕಿದೆ
Share:
Poems

ವರದಿ ಕೊಡಬೇಕಿದೆ

March 17, 2021 ಕೆ.ಆರ್ ಮಂಗಳಾ
ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...

Comments 3

  1. ಕುಸುಮಾ ತಂಗಡಗಿ
    Oct 27, 2025 Reply

    ನೆನಪುಗಳು ಯಾವತ್ತೂ ಗಾಯವನ್ನು ಮಾಯಲು ಬಿಡುವುದಿಲ್ಲಾ😟

  2. ಸುಂದರ್ ಪೌಳಿ
    Nov 7, 2025 Reply

    ಕಣ್ಣ ಬಿಂಬ ಮನದ ಬಿಂಬ, ಬಿಂಬ ಅಳಿದರೆ ಎಲ್ಲವೂ ಶೂನ್ಯ… ಯಾವುದು ಹಿರಿದು, ಯಾವುದು ಕಿರಿದು?… ಚೆನ್ನಾಗಿದೆ ಕವನ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Nov 25, 2025 Reply

      ಓದಿಗೆ… ಸಂತಸ.

Leave a Reply to ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಶಿವನ ಕುದುರೆ…
ಶಿವನ ಕುದುರೆ…
May 1, 2019
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ಗುರುವಂದನೆ
ಗುರುವಂದನೆ
October 13, 2022
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
Copyright © 2025 Bayalu