Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಿನ ಹೃದಯದಲಿ
Share:
Poems September 13, 2025 ಜಬೀವುಲ್ಲಾ ಎಂ.ಅಸದ್

ಮಣ್ಣಿನ ಹೃದಯದಲಿ

ಅಳಿದ ಮೇಲೆ ಉಳಿಯುವುದೇನು?
ಕೇವಲ ಕುರುಹು ಅಷ್ಟೇ!
ಗಾಳಿ ಬೀಸಿದಾಗ
ಎಲೆ ಉದುರಿದ ಹಾಗೇ
ಕಾಲ ಉರುಳುವ ಬಗೆ

ಇರುಳ ಕಣ್ಣಿನಾಗಸದಿ
ಕನಸು ನಾವೆಯಾಗಿ ತೇಲುವುದು
ಚುಚ್ಚುವ ಮುಳ್ಳುಗಳ ನಡುವೆ
ಹೂವೊಂದು ಬಿರಿದು ನಗುವುದು
ಮಣ್ಣಿನ ಹೃದಯದಲಿ ಹೀಗೆ

ಬಯಕೆಗಳ ಬೆನ್ನಹತ್ತಿ
ಕುರುಡು ಕುದುರೆಯ ಏರಿ
ದಶದಿಕ್ಕುಗಳಿಗೆ ದಿಕ್ಕೆಟ್ಟು ಓಡಿ
ತಾಕಿ, ತಟ್ಟಲಾದಿತೇನು?
ಸಾರ್ಥಕ ಬದುಕಿನ
ಗಮ್ಯದ ಬಯಲ ಬಾಗಿಲನು
ತಲುಪಲಾದಿತು ಹೇಗೆ?

Previous post ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
Next post ನಾನು  ಬಿಂಬ
ನಾನು ಬಿಂಬ

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 2

  1. ಸರಳಾ ಚಂದ್ರಶೇಖರ ಸಾಲೀಮಠ
    Sep 27, 2025 Reply

    ಸರ್, ನಿಮ್ಮ ಕಲ್ಪನೆಯ- ‘ಎಲೆ ಉದುರಿದ ಹಾಗೆ, ಕಾಲ ಉರುಳುವ ಬಗೆ’ ಸಾಲು👌👌

  2. ಜಿ. ಶಿವಬಸವ
    Oct 2, 2025 Reply

    ಗಮ್ಯದ ಬಯಲ ಬಾಗಿಲನು
    ತಲುಪಲಾದಿತು ಹೇಗೆ?- ಗಮ್ಯ ಸೇರುವ, ಸೇರಲಾಗದ ತಳಮಳ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಕಣ್ಣ ದೀಪ
ಕಣ್ಣ ದೀಪ
September 7, 2021
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
Copyright © 2025 Bayalu