Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಿನ ಹೃದಯದಲಿ
Share:
Poems September 13, 2025 ಜಬೀವುಲ್ಲಾ ಎಂ.ಅಸದ್

ಮಣ್ಣಿನ ಹೃದಯದಲಿ

ಅಳಿದ ಮೇಲೆ ಉಳಿಯುವುದೇನು?
ಕೇವಲ ಕುರುಹು ಅಷ್ಟೇ!
ಗಾಳಿ ಬೀಸಿದಾಗ
ಎಲೆ ಉದುರಿದ ಹಾಗೇ
ಕಾಲ ಉರುಳುವ ಬಗೆ

ಇರುಳ ಕಣ್ಣಿನಾಗಸದಿ
ಕನಸು ನಾವೆಯಾಗಿ ತೇಲುವುದು
ಚುಚ್ಚುವ ಮುಳ್ಳುಗಳ ನಡುವೆ
ಹೂವೊಂದು ಬಿರಿದು ನಗುವುದು
ಮಣ್ಣಿನ ಹೃದಯದಲಿ ಹೀಗೆ

ಬಯಕೆಗಳ ಬೆನ್ನಹತ್ತಿ
ಕುರುಡು ಕುದುರೆಯ ಏರಿ
ದಶದಿಕ್ಕುಗಳಿಗೆ ದಿಕ್ಕೆಟ್ಟು ಓಡಿ
ತಾಕಿ, ತಟ್ಟಲಾದಿತೇನು?
ಸಾರ್ಥಕ ಬದುಕಿನ
ಗಮ್ಯದ ಬಯಲ ಬಾಗಿಲನು
ತಲುಪಲಾದಿತು ಹೇಗೆ?

Previous post ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
Next post ನಾನು  ಬಿಂಬ
ನಾನು ಬಿಂಬ

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಮೊಟ್ಟೆ- ಗೂಡು
Share:
Poems

ಮೊಟ್ಟೆ- ಗೂಡು

April 11, 2025 ಜ್ಯೋತಿಲಿಂಗಪ್ಪ
ಮರೆವೆಯ ಗೂಡಲಿ ಒಂದು ಮರಿ ಆಸೆಯ ಮೊಟ್ಟೆ ಗೂಡು ಸಣ್ಣದು ಮೊಟ್ಟೆ ದೊಡ್ಡದು ಮೊಟ್ಟೆ ಬಿರಿದರೆ ಗೂಡು ಸಾಯುವುದು ಗೂಡು ಸಾಯದಿರೆ ಮೊಟ್ಟೆ ಸಾಯುವುದು ಏನು ಮರೆವೆಯೋ ಸೀಸೆಯು ಒಡೆಯದೆ...

Comments 2

  1. ಸರಳಾ ಚಂದ್ರಶೇಖರ ಸಾಲೀಮಠ
    Sep 27, 2025 Reply

    ಸರ್, ನಿಮ್ಮ ಕಲ್ಪನೆಯ- ‘ಎಲೆ ಉದುರಿದ ಹಾಗೆ, ಕಾಲ ಉರುಳುವ ಬಗೆ’ ಸಾಲು👌👌

  2. ಜಿ. ಶಿವಬಸವ
    Oct 2, 2025 Reply

    ಗಮ್ಯದ ಬಯಲ ಬಾಗಿಲನು
    ತಲುಪಲಾದಿತು ಹೇಗೆ?- ಗಮ್ಯ ಸೇರುವ, ಸೇರಲಾಗದ ತಳಮಳ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಕಣ್ಣ ದೀಪ
ಕಣ್ಣ ದೀಪ
September 7, 2021
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಹಾಯ್ಕುಗಳು
ಹಾಯ್ಕುಗಳು
November 10, 2022
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
February 16, 2026
Copyright © 2026 Bayalu