Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಿನ ಹೃದಯದಲಿ
Share:
Poems September 13, 2025 ಜಬೀವುಲ್ಲಾ ಎಂ.ಅಸದ್

ಮಣ್ಣಿನ ಹೃದಯದಲಿ

ಅಳಿದ ಮೇಲೆ ಉಳಿಯುವುದೇನು?
ಕೇವಲ ಕುರುಹು ಅಷ್ಟೇ!
ಗಾಳಿ ಬೀಸಿದಾಗ
ಎಲೆ ಉದುರಿದ ಹಾಗೇ
ಕಾಲ ಉರುಳುವ ಬಗೆ

ಇರುಳ ಕಣ್ಣಿನಾಗಸದಿ
ಕನಸು ನಾವೆಯಾಗಿ ತೇಲುವುದು
ಚುಚ್ಚುವ ಮುಳ್ಳುಗಳ ನಡುವೆ
ಹೂವೊಂದು ಬಿರಿದು ನಗುವುದು
ಮಣ್ಣಿನ ಹೃದಯದಲಿ ಹೀಗೆ

ಬಯಕೆಗಳ ಬೆನ್ನಹತ್ತಿ
ಕುರುಡು ಕುದುರೆಯ ಏರಿ
ದಶದಿಕ್ಕುಗಳಿಗೆ ದಿಕ್ಕೆಟ್ಟು ಓಡಿ
ತಾಕಿ, ತಟ್ಟಲಾದಿತೇನು?
ಸಾರ್ಥಕ ಬದುಕಿನ
ಗಮ್ಯದ ಬಯಲ ಬಾಗಿಲನು
ತಲುಪಲಾದಿತು ಹೇಗೆ?

Previous post ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
Next post ನಾನು  ಬಿಂಬ
ನಾನು ಬಿಂಬ

Related Posts

ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

April 11, 2025 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...
ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...

Comments 2

  1. ಸರಳಾ ಚಂದ್ರಶೇಖರ ಸಾಲೀಮಠ
    Sep 27, 2025 Reply

    ಸರ್, ನಿಮ್ಮ ಕಲ್ಪನೆಯ- ‘ಎಲೆ ಉದುರಿದ ಹಾಗೆ, ಕಾಲ ಉರುಳುವ ಬಗೆ’ ಸಾಲು👌👌

  2. ಜಿ. ಶಿವಬಸವ
    Oct 2, 2025 Reply

    ಗಮ್ಯದ ಬಯಲ ಬಾಗಿಲನು
    ತಲುಪಲಾದಿತು ಹೇಗೆ?- ಗಮ್ಯ ಸೇರುವ, ಸೇರಲಾಗದ ತಳಮಳ.

Leave a Reply to ಜಿ. ಶಿವಬಸವ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
Copyright © 2025 Bayalu