Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾದಿಯ ಹಣತೆ…
Share:
Poems June 12, 2025 ಕೆ.ಆರ್ ಮಂಗಳಾ

ಹಾದಿಯ ಹಣತೆ…

ಕೈಯಲಿ ಹಿಡಿದು
ಅಲೆಯುತಲಿದ್ದೆ
ಕಣ್ಣಿಗೊತ್ತಿಕೊಂಡು
ಕರಗುತಲಿದ್ದೆ
ಎದೆಗವುಚಿಕೊಂಡು
ಮುದ್ದಾಡುತಲಿದ್ದೆ
ತಲೆಯ ಮೇಲೆ ಹೊತ್ತು
ಬೀಗುತಲಿದ್ದೆ…

ವಚನ ರಾಶಿಯಲಿ
ಅರಸುತಲಿದ್ದೆ
ಹಿರಿಯರ ಮಾತಲಿ
ಹುಡುಕುತಲಿದ್ದೆ
ಯೋಗಸಿದ್ದಿಗಳಿಗೆ
ತವಕಿಸುತಿದ್ದೆ
ಪೂಜೆ-ಪ್ರಾರ್ಥನೆಯಲಿ
ಪರಿತಪಿಸುತಿದ್ದೆ…

ಅಲ್ಲೆಲ್ಲೋ ಮಿಂಚಿದಂತೆ
ಇಲ್ಲೇನೋ ಹೊಳೆದಂತೆ
ಮತ್ತೆಲ್ಲೋ ಸುಳಿದಂತೆ
ಸಿಕ್ಕು ಸಿಗದ
ಬಿಸಿಲ್ಗುದುರೆಯಂತೆ…

ನೀರು ಹಿಡಿದು
ಬಾಯಾರಿ ಬಳಲುವ
ಬುತ್ತಿ ಹಿಡಿದು
ಹಸಿವಿಗೆ ಹಲಬುವ
ಬೆಪ್ಪುತನಕೆ ಮರುಗಿ
ಬಂದ ನೋಡವ್ವಾ… ನನ್ನ ಗುರು

ಕಣ್ಣೊಳಿತ್ತು
ಕಾರುಣ್ಯದ ಕಡಲು
ಹೃದಯವೋ
ವಾತ್ಸಲ್ಯದ ಒಡಲು
ಮಾತುಗಳೋ
ಚಾಟಿಯ ಏಟು

ಜ್ಞಾನದ ಬಣವೆಗೆ
ಕಿಚ್ಚನು ಹಚ್ಚಿದ
ಭಾವುಕ ಭ್ರಮೆಗೆ
ಬೆಂಕಿಯ ಹಾಕಿದ
ಕಳೆ-ಕೊಳೆ ತುಂಬಿದ
ಮನವ ತೊಳೆಸಿದ
ಕಣ್ಣಿಗೆ ಮೆತ್ತಿದ
ಪೊರೆಗಳ ಹರಿಸಿದ

ಅವಿತಿಹ ಅಹಮಿನ
ಆಟವ ತೋರಿಸಿ
ನಿಜನೆಲೆ ಅರಿಯಲು
ದಾರಿಯ ಮಾಡಿದ
ಹಿಂದಣ ಹಂಗಿನ
ಸಂಗವ ಬಿಡಿಸಿದ
ಮುಂದಣ ಮಾಯೆಯ
ತೆರೆಯನು ಸರಿಸಿದ

ಮಂತ್ರವ ಮರೆಸಿದ
ಮಾತನು ಬಿಡಿಸಿದ
ಮೌನದ ಬಯಲಿಗೆ
ಮಾರ್ಗವ ತೋರಿದ

Previous post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
Next post ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ

Related Posts

ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...
ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...

Comments 3

  1. Dr. K.S.Mallesh, Mysuru
    Jun 12, 2025 Reply

    ನಿಮ್ಮ ಕವನ “ಹಾದಿಯ ಹಣತೆ” ( ಅರಿವಿನ ಹಣತೆ ಅಲ್ಲ) ಸರಳ ಭಾಷೆ ಚಿಕ್ಕ ಸಾಲುಗಳಲ್ಲಿ ನಿಮ್ಮ ನಿರಂತರ ಹುಡುಕಾಟದ ದಾರಿಯಲ್ಲಿ ಸಿಕ್ಕ ಗುರುವಿನ ಬಗ್ಗೆ ಹೃದ್ಯವಾಗಿ ಮೂಡಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಗುರುವು ನಿಜವಾದ ಆಧ್ಯಾತ್ಮದ ದಾರಿ ತೋರಿದ ಹಾದಿಯ ಹಣತೆ. ಕವನ ತುಂಬಾ ಚೆನ್ನಾಗಿದೆ.

  3. Mate Kasturidevi
    Jun 19, 2025 Reply

    ಹಾದಿಯ ಹಣತೆಯ ಬೆಳಕಲ್ಲಿ ನಿಮ್ಮ ಮನದ ಅಳಲು ಜತೆಗೆ ಅರಸುವ ಧಾವಂತ ನಿಚ್ಚಳವಾಗಿ ಕಾಣಬರುತ್ತಿದೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
Copyright © 2025 Bayalu