Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀನು ನಾನಲ್ಲ…
Share:
Poems July 21, 2024 ಕೆ.ಆರ್ ಮಂಗಳಾ

ನೀನು ನಾನಲ್ಲ…

ಹಿಂದಿನ ಹೆಜ್ಜೆಗಳಲಿ
ತನ್ನನ್ನೇ ಅರಸುವ
ಮುಂದಿನ ದಿನಗಳಲಿ
ತನ್ನನ್ನೇ ಮೆರೆಯಿಸುವ
ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ

ಎಂದೋ ಆದುದನು
ಜತನದಲಿ ಕೂಡಿಟ್ಟು
ಎಲ್ಲವನೂ ಎಲ್ಲರನೂ
ಆ ಅಳತೆಯಲೇ ತೂಗುವ
ತಿಕಲು ಬುದ್ಧಿಯೇ ನೀನು ನಾನಲ್ಲ

ಕಂಗಳಲಿ ಕರುಳಾಗಿ
ರಸದ ದಾಸನಾಗಿ
ವಾಸನೆಯ ಜಾಡಿಗಿಳಿದು
ಸ್ಪರ್ಶಸುಖಕೆ ಬೆನ್ನುಹತ್ತಿ
ಹಿತವಾದುದನೇ ಕೇಳಲೆಳೆಸುವ ನೀನು ನಾನಲ್ಲ

ನೆನಹಿನಲಿ ಅಲೆಯಾಗಿ
ನಡೆಯಲ್ಲಿ ಸೋಗಾಗಿ
ನುಡಿಯಲ್ಲಿ ಕಪಟವಾಗಿ
ಕನಸಿನಲಿ ಬತ್ತಲೆಯಾಗಿ
ಚಿತ್ತದಲಿ ಹೆಪ್ಪುಗಟ್ಟಿದ ನೀನು ನಾನಲ್ಲ

ಆಸೆಗಣ್ಣಾಗಿ ಸುಖಕೆ ಬಾಯಾರಿ
ಸಾಧಿಸುವ ಹುಚ್ಚಾಗಿ
ಕೀರ್ತಿಕಾಮನೆಗೆ ಕಳವಳಿಸಿ
ಗುಪ್ತ ಬಯಕೆಗಳ ದಂಡಾಗಿ
ಒಳಗೊಳಗೆ ಅಂಡಲೆವ ನೀನು ನಾನಲ್ಲ

ಬಿರುಮಾತಿನ ಬಾಣವಾಗಿ
ದೂರುಗಳ ಧಾರೆಯಾಗಿ
ದ್ವೇಷದ ಕೊಂಬಾಗಿ
ಕುದಿವ ಮನವಾಗಿ, ಮೊನಚು ಅಂಬಾಗಿ
ಇದಿರ ಇರಿಯಲು ಕಾಯುವ ನೀನು ನಾನಲ್ಲ

ಮಾತಿಗೆ ಮಾತಾಗಿ
ದ್ವೇಷಕ್ಕೆ ದ್ವೇಷವಾಗಿ
ಕಷ್ಟಗಳಿಗೆ ಕೊಚ್ಚಿಹೋಗಿ
ಬೇಕು ಬೇಡಗಳ ಆಟದಲಿ ಸಿಲುಕಿ
ಕೊರಗಿ ಕಣ್ಣೀರಾಗುವ ನೀನು ನಾನಲ್ಲ

ಮೆಚ್ಚುಗೆಗೆ ಮರುಳಾಗುವ
ಹೊಗಳಿಕೆಗೆ ಹಿರಿಹಿಗ್ಗುವ
ತೆಗಳಿಕೆಗೆ ಮುನಿಸೇಳುವ
ಬೇಕಾದವರ ಅಟ್ಟಕ್ಕೇರಿಸುತಾ
ಬೇಡಾದವರ ನೀಕರಿಸುವ ನೀನು ನಾನಲ್ಲ

ಅಸೂಯೆಯಲಿ ಬೇಯುವ
ಎಡಬಿಡಂಗಿಯಲಿ ತುಯ್ಯುವ
ಆಲಸಕೆ ಮೈಚಾಚುವ
ಜ್ಞಾನಕ್ಕೆ ಮರುಳಾಗುವ
ಚಟಗಳಿಗೆ ಬೆನ್ನು ಬೀಳುವ ನೀನು ನಾನಲ್ಲ.

ಈ ಬಗೆಬಗೆಯ ಹೊಂಡದಲಿ
ಮುಳಿಗೇಳುವ ಮಜದಲಿ
ನಿಜದ ನಾನು ನನಗೆ ಸಿಗಲೇ ಇಲ್ಲ
ಇದೆ-ಇಲ್ಲಗಳ ನಡುವೆ
ಅಲ್ಲದ್ದು ತೂರಿಕೊಂಡು
ಬದುಕು ಲಪಟಾಯಿಸಿದ್ದು ಅರಿವಾಗಲಿಲ್ಲ.

Previous post ಹುಡುಕಾಟ
ಹುಡುಕಾಟ
Next post ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್

Related Posts

ನಡೆಯ ಎಡೆ…
Share:
Poems

ನಡೆಯ ಎಡೆ…

April 5, 2026 ಕೆ.ಆರ್ ಮಂಗಳಾ
ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...
ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಶಾಂತಿ
ಶಾಂತಿ
April 11, 2025
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
Copyright © 2026 Bayalu