Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems July 21, 2024 ಜ್ಯೋತಿಲಿಂಗಪ್ಪ

ಹುಡುಕಾಟ

ಈ
ಹುಡುಕಾಟ
ಒಂದು ಹುಡುಗಾಟಿಕೆ
ಯಾರು
ಏನನು ಏತಕಾಗಿ ಹುಡುಕುವುದು
ಇರುವುದ
ಹೇಳಲಾರರು ಕಂಡುದ ಕಾಣಲಾರರು

ಇಲ್ಲಿಂದ
ಆಚೆಯದು ಕನಸು
ಅಲ್ಲಿಂದ
ಈಚೆಯದೂ ಕನಸು

ಕನಸಿನ
ಆಚೆ ಈಚೆಯೂ ಕನಸು

ಅಂಗ ಸುಖ
ಹಿಂಗುವವರೆ ಅಂಗನೆಯ ಸಂಗ

ಬೇರು ಸಾಯುವ ಮರ
ದೇವರು ಸತ್ತ ಸುದ್ದಿ ನಿಜವೇ…

ಈ
ಕತ್ತಲು ಕಂಡವರು
ನಾನೋ…ಕಣ್ಣೋ…

ಕಣ್ಣ
ಮುಚ್ಚ ಬಹುದು
ಮರೆ ಮಾಡಲಾದೀತೇ…

ದೀಪದ ಅಹಂ ಈ ಬೆಳಕು
ಉರಿದು ಹಾರಿಹೋಯಿತು

ಈ ಬದುಕೊಂದು ರಹಸ್ಯ
ಬಗೆದಷ್ಟೂ ಹೊಸಹೊಸತು

ಹುಟ್ಟೇ ಇಲ್ಲದ ಬದುಕಿಗೆ
ಸಾವಂತೂ ಇಲ್ಲವೇ ಇಲ್ಲ

ಸಾವಿಗೆ ಸರಸವಿಲ್ಲಾ

ರಾತ್ರಿ ಎಂಬ ಹಗಲು
ಹಗಲು ಎಂಬ ರಾತ್ರಿ
ಬೆಳಕಿನಾಟ

ಎಲ್ಲಾ ಹುಡುಗಾಟಿಕೆ
ಖಾಲೀ
ಆಗುವತನಕ.. ಕಾಯುವುದು

ಈಗಷ್ಟೇ ಕಂಡಿರುವೆ
ಕನಸು ಕಂಗಳ ಸುಖ ಹಿಂಗದು.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Next post ನೀನು ನಾನಲ್ಲ…
ನೀನು ನಾನಲ್ಲ…

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...

Comments 2

  1. ಜಯರಾಮ್ ಭರಣಿ
    Jul 25, 2024 Reply

    ಹುಡುಕೋದು ಯಾವುದಂತ ಗೊತ್ತಿಲ್ಲದೆ, ಏನು ಹುಡುಕೋದು, ಎಲ್ಲಿ ಹುಡಕೋದು… ಮನುಷ್ಯನ ಭ್ರಮೆಯೋ, ಮಾಯೆಯೋ ಕಂಡವರಾರು? ಗೊಂದಲಗಳು ರಹಸ್ಯ ಸೃಷ್ಟಿಸುವ ವಿಧಿಯೋ?

  2. ಪ್ರವೀಣ್ ಜವಳಿ
    Jul 30, 2024 Reply

    ಬೆಳಕು ದೀಪದ ಅಹಂ ಆಗುವುದಾದರೆ, ಜೀವ ದೇಹದ ಅಹಂ ಎಂದಾಗುವುದಿಲ್ಲವೇ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
Copyright © 2026 Bayalu