Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems July 21, 2024 ಜ್ಯೋತಿಲಿಂಗಪ್ಪ

ಹುಡುಕಾಟ

ಈ
ಹುಡುಕಾಟ
ಒಂದು ಹುಡುಗಾಟಿಕೆ
ಯಾರು
ಏನನು ಏತಕಾಗಿ ಹುಡುಕುವುದು
ಇರುವುದ
ಹೇಳಲಾರರು ಕಂಡುದ ಕಾಣಲಾರರು

ಇಲ್ಲಿಂದ
ಆಚೆಯದು ಕನಸು
ಅಲ್ಲಿಂದ
ಈಚೆಯದೂ ಕನಸು

ಕನಸಿನ
ಆಚೆ ಈಚೆಯೂ ಕನಸು

ಅಂಗ ಸುಖ
ಹಿಂಗುವವರೆ ಅಂಗನೆಯ ಸಂಗ

ಬೇರು ಸಾಯುವ ಮರ
ದೇವರು ಸತ್ತ ಸುದ್ದಿ ನಿಜವೇ…

ಈ
ಕತ್ತಲು ಕಂಡವರು
ನಾನೋ…ಕಣ್ಣೋ…

ಕಣ್ಣ
ಮುಚ್ಚ ಬಹುದು
ಮರೆ ಮಾಡಲಾದೀತೇ…

ದೀಪದ ಅಹಂ ಈ ಬೆಳಕು
ಉರಿದು ಹಾರಿಹೋಯಿತು

ಈ ಬದುಕೊಂದು ರಹಸ್ಯ
ಬಗೆದಷ್ಟೂ ಹೊಸಹೊಸತು

ಹುಟ್ಟೇ ಇಲ್ಲದ ಬದುಕಿಗೆ
ಸಾವಂತೂ ಇಲ್ಲವೇ ಇಲ್ಲ

ಸಾವಿಗೆ ಸರಸವಿಲ್ಲಾ

ರಾತ್ರಿ ಎಂಬ ಹಗಲು
ಹಗಲು ಎಂಬ ರಾತ್ರಿ
ಬೆಳಕಿನಾಟ

ಎಲ್ಲಾ ಹುಡುಗಾಟಿಕೆ
ಖಾಲೀ
ಆಗುವತನಕ.. ಕಾಯುವುದು

ಈಗಷ್ಟೇ ಕಂಡಿರುವೆ
ಕನಸು ಕಂಗಳ ಸುಖ ಹಿಂಗದು.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Next post ನೀನು ನಾನಲ್ಲ…
ನೀನು ನಾನಲ್ಲ…

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ಮಣ್ಣು ಮೆಟ್ಟಿದ ದಾರಿ
Share:
Poems

ಮಣ್ಣು ಮೆಟ್ಟಿದ ದಾರಿ

October 5, 2021 ಜ್ಯೋತಿಲಿಂಗಪ್ಪ
ಈ ಸಿಟ್ಟು ದ್ವೇಷ ಪ್ರೇಮ ಕಾಮ ಮದ… ಎಲ್ಲಾ ನಾನು ಹೊತ್ತು ಹೋಗುವನೇ… ಈ ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ ಇದೆಲ್ಲಾ ಮಣ್ಣಾಗುವುದು ಇದ್ದೇ ಇದೆ ನಾನು ಮಣ್ಣಾಗುವ...

Comments 2

  1. ಜಯರಾಮ್ ಭರಣಿ
    Jul 25, 2024 Reply

    ಹುಡುಕೋದು ಯಾವುದಂತ ಗೊತ್ತಿಲ್ಲದೆ, ಏನು ಹುಡುಕೋದು, ಎಲ್ಲಿ ಹುಡಕೋದು… ಮನುಷ್ಯನ ಭ್ರಮೆಯೋ, ಮಾಯೆಯೋ ಕಂಡವರಾರು? ಗೊಂದಲಗಳು ರಹಸ್ಯ ಸೃಷ್ಟಿಸುವ ವಿಧಿಯೋ?

  2. ಪ್ರವೀಣ್ ಜವಳಿ
    Jul 30, 2024 Reply

    ಬೆಳಕು ದೀಪದ ಅಹಂ ಆಗುವುದಾದರೆ, ಜೀವ ದೇಹದ ಅಹಂ ಎಂದಾಗುವುದಿಲ್ಲವೇ?

Leave a Reply to ಜಯರಾಮ್ ಭರಣಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ನೆಲದ ನಿಧಾನ
ನೆಲದ ನಿಧಾನ
April 29, 2018
Copyright © 2026 Bayalu