Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems July 21, 2024 ಜ್ಯೋತಿಲಿಂಗಪ್ಪ

ಹುಡುಕಾಟ

ಈ
ಹುಡುಕಾಟ
ಒಂದು ಹುಡುಗಾಟಿಕೆ
ಯಾರು
ಏನನು ಏತಕಾಗಿ ಹುಡುಕುವುದು
ಇರುವುದ
ಹೇಳಲಾರರು ಕಂಡುದ ಕಾಣಲಾರರು

ಇಲ್ಲಿಂದ
ಆಚೆಯದು ಕನಸು
ಅಲ್ಲಿಂದ
ಈಚೆಯದೂ ಕನಸು

ಕನಸಿನ
ಆಚೆ ಈಚೆಯೂ ಕನಸು

ಅಂಗ ಸುಖ
ಹಿಂಗುವವರೆ ಅಂಗನೆಯ ಸಂಗ

ಬೇರು ಸಾಯುವ ಮರ
ದೇವರು ಸತ್ತ ಸುದ್ದಿ ನಿಜವೇ…

ಈ
ಕತ್ತಲು ಕಂಡವರು
ನಾನೋ…ಕಣ್ಣೋ…

ಕಣ್ಣ
ಮುಚ್ಚ ಬಹುದು
ಮರೆ ಮಾಡಲಾದೀತೇ…

ದೀಪದ ಅಹಂ ಈ ಬೆಳಕು
ಉರಿದು ಹಾರಿಹೋಯಿತು

ಈ ಬದುಕೊಂದು ರಹಸ್ಯ
ಬಗೆದಷ್ಟೂ ಹೊಸಹೊಸತು

ಹುಟ್ಟೇ ಇಲ್ಲದ ಬದುಕಿಗೆ
ಸಾವಂತೂ ಇಲ್ಲವೇ ಇಲ್ಲ

ಸಾವಿಗೆ ಸರಸವಿಲ್ಲಾ

ರಾತ್ರಿ ಎಂಬ ಹಗಲು
ಹಗಲು ಎಂಬ ರಾತ್ರಿ
ಬೆಳಕಿನಾಟ

ಎಲ್ಲಾ ಹುಡುಗಾಟಿಕೆ
ಖಾಲೀ
ಆಗುವತನಕ.. ಕಾಯುವುದು

ಈಗಷ್ಟೇ ಕಂಡಿರುವೆ
ಕನಸು ಕಂಗಳ ಸುಖ ಹಿಂಗದು.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Next post ನೀನು ನಾನಲ್ಲ…
ನೀನು ನಾನಲ್ಲ…

Related Posts

ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...
ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...

Comments 2

  1. ಜಯರಾಮ್ ಭರಣಿ
    Jul 25, 2024 Reply

    ಹುಡುಕೋದು ಯಾವುದಂತ ಗೊತ್ತಿಲ್ಲದೆ, ಏನು ಹುಡುಕೋದು, ಎಲ್ಲಿ ಹುಡಕೋದು… ಮನುಷ್ಯನ ಭ್ರಮೆಯೋ, ಮಾಯೆಯೋ ಕಂಡವರಾರು? ಗೊಂದಲಗಳು ರಹಸ್ಯ ಸೃಷ್ಟಿಸುವ ವಿಧಿಯೋ?

  2. ಪ್ರವೀಣ್ ಜವಳಿ
    Jul 30, 2024 Reply

    ಬೆಳಕು ದೀಪದ ಅಹಂ ಆಗುವುದಾದರೆ, ಜೀವ ದೇಹದ ಅಹಂ ಎಂದಾಗುವುದಿಲ್ಲವೇ?

Leave a Reply to ಪ್ರವೀಣ್ ಜವಳಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ದಾಸೋಹ ತತ್ವ
ದಾಸೋಹ ತತ್ವ
January 10, 2021
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
April 6, 2023
Copyright © 2026 Bayalu