Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ಸಿಕ್ಕೀತೆ?
Share:
Poems March 9, 2023 ಜ್ಯೋತಿಲಿಂಗಪ್ಪ

ಬೆಳಕು ಸಿಕ್ಕೀತೆ?

ಈಗ
ನೀನು ಮರೆವು
ನಾನು
ಇರುವೆ ನಾ..

ಹೇಳ
ಬಾರದು ಕೇಳ
ಬಾರದು

ಬಾಳೆ
ಹಣ್ಣಾಗಿ ಈಗಷ್ಟೇ
ಬಾಗಿದೆ

ಏನೇ ಹೇಳಿ
ಕಾಣುವುದೆಲ್ಲಾ ಸತ್ಯವೇ
ಅಲ್ಲಾ
ಏನೂ ಆಗಬಹುದು

ಆಕಾಶ ಮೈದೆರೆದರೆ ಬಯಲು ಕಾಣುವುದು.

*** ***

ಕಣ್ಣಳತೆಗೆ ಸಿಕ್ಕ ಬೆಳಕು
ಕಂಡೆ
ಕಣ್ಣಳತೆಗೆ ಸಿಗದು ಬೆಳಕು
ಕಂಡೆ
ಕಂಡೆ ಕಂಡೆ ಕಣ್ಣಳತೆಯ
ಕಂಡೆ
ಕಣ್ಣ ಒಳಗಣ ಸಿಕ್ಕು
ತಂತಿ ಹರಿದ ತಂಬೂರಿ

ದೃಷ್ಟಿಯ ಮರೆವೆ ಕಣ್ಣಿಗೆ ಕತ್ತಲು
ಕಣ್ಣೇ ಬೆಳಗಿದರೆ ದೃಷ್ಟಿ ಮರೆ.

Previous post ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
Next post ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…

Related Posts

ಬಯಲಾಟ
Share:
Poems

ಬಯಲಾಟ

March 17, 2021 ಜ್ಯೋತಿಲಿಂಗಪ್ಪ
ಆ ಮನೆ ಬಿಟ್ಟು ಬಂದಿರುವೆ ಎಂಬುದು ಈಗಲೂ ಇದೆ ಆ ಮನೆ ಇದೆಯೇ ಎಂಬುದು ಈಗಲೂ ಇದೆ ನಿಜ ಸುಳ್ಳು ಎಂಬುದು ನನ್ನ ಹಿತ ಆ ಮನೆ ಸಮುದ್ರ ದಾಟಲು ಹಾರುವ ಚಿಟ್ಟೆ ಹುಡುಕುತಿರುವೆ ಇನ್ನೂ...
ದಾರಿಯಲ್ಲದ ದಾರಿ…
Share:
Poems

ದಾರಿಯಲ್ಲದ ದಾರಿ…

October 10, 2023 ಕೆ.ಆರ್ ಮಂಗಳಾ
ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...

Comments 3

  1. Savitha Bannur
    Mar 12, 2023 Reply

    ಆಕಾಶ ಮೈದೆರೆದರೆ ಬಯಲು ಕಾಣಬಹುದು!- ಬೆಡಗಿನ ವಚನದಂತಿರುವ ಕವನದ ಸಾಲು ಗಮನ ಸೆಳೆದು ವಿಚಾರಕ್ಕೆ ಹಚ್ಚುತ್ತದೆ.

  2. ಶಿವಕುಮಾರ್ ಎಲ್
    Mar 12, 2023 Reply

    ಕಾಣುವುದೆಲ್ಲಾ ಸತ್ಯವಲ್ಲಾ ಎನ್ನುತ್ತಾರೆ, ಕಂಡದ್ದೆಲ್ಲಾ ಸುಳ್ಳೆಂದರೆ ಬಾಳುವುದು ಹೇಗೆ? ನಿಜ ಯಾವುದು, ಮಾಯೆ ಯಾವುದು?

  3. ಪೆರೂರು ಜಾರು, ಉಡುಪಿ
    Mar 12, 2023 Reply

    ಆಗಸ ಭೂಮಿ ತುದಿಯಲ್ಲಿ ಒಂದಾದಂತೆ ಕಂಡುದು ಭ್ರಮೆ
    ತುದಿಗಳಿಲ್ಲಾ ಎಂಬ ಅರಿವು ನಿಚ್ಚಳವಾದಾಗ
    ತುದಿ ಎಳೆವವರು ಹೆಚ್ಚಾಗಿ ಹುಚ್ಚು ಬಯಲಾಯ್ತು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
August 2, 2019
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಎರವಲು ಮನೆ…
ಎರವಲು ಮನೆ…
August 10, 2023
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
Copyright © 2026 Bayalu