Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಾದಿ ಕಾಲದ ಗಂಟು…
Share:
Poems November 10, 2022 ಕೆ.ಆರ್ ಮಂಗಳಾ

ಅನಾದಿ ಕಾಲದ ಗಂಟು…

ಹಗುರಾಗುತಿದೆ ಹೃದಯ
ಹೆಗಲ ಹೊರೆ ಇಳಿದು
ಭೂಮಿಗಿಂತಲೂ ವಜನ
ಹತ್ತಿಗಿಂತಲೂ ಹಗುರ
ಹೊರಲಾಗದ ಭಾರ ಹೊತ್ತಿದ್ದ
ಎದೆಗೆ, ಈಗ ಎಂಥದೋ ನಿರಾಳ…

ಕಣ್ಣುಬಿಟ್ಟಾಗಿನಿಂದ ಕಂಡದ್ದು
ಎಲ್ಲೆಲ್ಲೋ ಕೇಳಿದ್ದು
ಅವರಿವರು ಕಲಿಸಿದ್ದು
ಮೂಸಿದ್ದು ಹೊಸೆದದ್ದು
ಖಾಲಿಯಾಗದ ಗಂಟು
ಹೆಗಲೇರಿ ಕುಳಿತಿತ್ತು…

ಮುಟ್ಟಿದ್ದು ಮೂರಾಗಿ
ಇಟ್ಟಿದ್ದು ಆರಾಗಿ
ಬಗಲಚೀಲದಲಿದ್ದವು
ಚಿತ್ರವಿಭ್ರಮದ ಸರಕು
ಭವದ ಸಂತೆಯಲಿತ್ತು
ಅನಾದಿ ಕಾಲದ ಗಂಟು…

ಮಾಯೆಯೋ ಮರೆವೋ
ರೂಢಿಗೆ ಬಿದ್ದ ಚಾಳಿಯೋ
ಕಾರ್ಯ-ಕಾರಣದ ಚಕ್ರವೋ?
ಸ್ವಲಿಖಿತ ಹಣೆಬರಹವೋ
ಛಿದ್ರಚಿತ್ತದ ವ್ಯಾಧಿಯಲಿ
ನರಳುತಿದೆ ಲೋಕ…

ಬೆಳೆದಂತೆ ಭುಜವೇರುತ್ತಾ
ನರನಾಡಿಗಳ ಹಬ್ಬಿ
ನನ್ನ ನುಂಗಿ ಬಿಟ್ಟಿದ್ದು
ಈವರೆಗೂ ಅರಿವಾಗಲೇ ಇಲ್ಲ!!
ಗುರು ತೋರುವ ತನಕ
ಭಾರ ಹೊತ್ತುದೇ ತಿಳಿಯಲಿಲ್ಲ!!!

Previous post ಹಾಯ್ಕುಗಳು
ಹಾಯ್ಕುಗಳು
Next post ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?

Related Posts

ಗಜಲ್…
Share:
Poems

ಗಜಲ್…

February 16, 2026 ಜಬೀವುಲ್ಲಾ ಎಂ.ಅಸದ್
ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...
ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಾರ
ಭಾರ
October 6, 2020
ಸಂತೆಯ ಸಂತ
ಸಂತೆಯ ಸಂತ
September 7, 2020
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಇದ್ದಷ್ಟೇ…
ಇದ್ದಷ್ಟೇ…
January 10, 2021
Copyright © 2026 Bayalu