Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಂದು-ಇಂದು
Share:
Poems December 8, 2021 ಕೆ.ಆರ್ ಮಂಗಳಾ

ಅಂದು-ಇಂದು

ಅಂದು-
ಹೇಗೋ ಎಂತೋ
ಸುರುಸುರುಳಿಯಾಗಿ
ಬಗೆಬಗೆಯಲಿ ಪರಿಪರಿಯಲಿ
ಸುತ್ತಿಕೊಂಡಿದ್ದು-
ಮೆತ್ತಿಕೊಂಡಿದ್ದು
ಬೆಳೆಯುತ್ತಾ-ಬಲಿಯುತ್ತಾ
ನಂಟಾಗಿ- ಗಂಟಾಗಿ
ಯಮಯಾತನೆಯ ಹೊರೆಯಾಗಿ
ಮುಡಿಯೇರಿ ಭವಭಾರ
ಉಸಿರ ಹಿಸುಕಿತ್ತು.

ಇಂದು-
ಹೊರೆಗಳನು ಇಳುಹುತ್ತಾ
ಗಂಟುಗಳ ಬಿಡಿಸುತ್ತಾ
ಪೊರೆಗಳನು ಕಳಚುತ್ತಾ
ಹಗುರಾಗಿ ನವಿರಾಗಿ
ಸಾಗುತಿದೆ ನಡಿಗೆ
ಕಾಲದೊಂದಿಗೆ ಚಲನೆ…

ಗುರು ಸಿಕ್ಕು ಬೆಳಕಾಗಿ
ಗಮ್ಯತೆಯ ಅರಿವಾಗಿ
ಕೇಳುವ- ಕೆದಕುವ
ಸಂಚಿ ಬರಿದಾಗಿತ್ತು…
ನಿನ್ನೆ ಕಳೆದ ಮೇಲೆ
ನಾಳೆ ಎಂಬುದೂ ಇಲ್ಲ…
ಮಾತು ಮರೆತಾ ‘ನಾನು’
ಮಾತಿಲ್ಲದಾ ನೀನು
ಸಂಧಿಸುವ ಆ ಗಳಿಗೆ
ಬರಬಾರದೇ ಇಂದೇ?

Previous post ಬೆಳಕಲಿ ದೀಪ
ಬೆಳಕಲಿ ದೀಪ
Next post ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಮನವೇ ಮನವೇ…
ಮನವೇ ಮನವೇ…
May 6, 2020
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಶಿವಾಚಾರ
ಶಿವಾಚಾರ
April 9, 2021
Copyright © 2026 Bayalu