Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ-ನಿನ್ನ ನಡುವೆ
Share:
Poems June 5, 2021 ಕೆ.ಆರ್ ಮಂಗಳಾ

ನನ್ನ-ನಿನ್ನ ನಡುವೆ

ನನ್ನ-ನಿನ್ನ ನಡುವೆ
ಗೋಡೆ ಎಬ್ಬಿಸಿದವರಾರು
ಪರದೆ ಬಿಟ್ಟವರಾರು?
ಕತ್ತಲು ತುಂಬಿದವರಾರು?
ಮಂಜು ಕವಿಸಿದವರಾರು?
ನಿನ್ನಿಂದ ನನ್ನ ದೂರ ಮಾಡಿದವರಾರು?

ನನ್ನ-ನಿನ್ನ ನಡುವೆ
ಕಂದ ತೋಡಿದವರಾರು
ಕೋಟೆ ಕಟ್ಟಿದವರಾರು
ಗಡಿಯ ಕೊರೆದವರಾರು
ನಿನ್ನಿರುವ ಮರೆವಂತೆ
ಮಂಪರು ಕವಿಸಿದವರಾರು?

ಅರಿವು-ಮರೆವಿನಾಟದಲಿ
ಕಳೆದು ಹೋಯಿತೆ ಕೊಂಡಿ
ಮರೆವು ಮತಿಯನು ನುಂಗಿ
ಅರಿವು ತಿಳಿವನು ನುಂಗಿ
ಅರಸುತ್ತಾ ಅಲೆಯುತ್ತಾ
ಗುರು ಬಾಗಿಲಾ ತಟ್ಟಿ
ಮೊರೆಯಿಟ್ಟಿತು ಜೀವ
ತನ್ನ ತಾ ಕಾಣಲಿಕೆ
ದಾರಿ ತೋರೆಂದು.

Previous post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
Next post ನಾನು… ನನ್ನದು
ನಾನು… ನನ್ನದು

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ಮನಸ್ಸು
Share:
Poems

ಮನಸ್ಸು

September 7, 2020 ಕೆ.ಆರ್ ಮಂಗಳಾ
ಏನ ಹೇಳಲಿ ಗುರುವೇ ಮನಸಿನ ಬಗೆಗೆ? ಹಿಂದಕ್ಕೆ ಜಾರುತ್ತಾ ಮುಂದಕ್ಕೆ ತುಯ್ಯುತ್ತಾ ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ ಇದಾವ ಮರದ ಕೊಂಬೆಗೆ ನೇತು ಹಾಕಿಕೊಂಡಿದೆ… ಎಂದು ಕಟ್ಟಿದೆನೋ...

Comments 1

  1. Kallappa Banave
    Jun 12, 2021 Reply

    ಕವನ ಬಹಳ ಚನ್ನಾಗಿದೆ ಅಕ್ಕಾ, ಯಾವ ಗುರುವಿನ ಕದ ತಟ್ಟಿದಿರಿ ಎಂದು ತಿಳಿಯಬಹುದೇ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಮಾತು ಮಾಯೆ
ಮಾತು ಮಾಯೆ
July 4, 2021
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಭಾರ
ಭಾರ
October 6, 2020
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
January 4, 2020
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
Copyright © 2025 Bayalu