Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ-ನಿನ್ನ ನಡುವೆ
Share:
Poems June 5, 2021 ಕೆ.ಆರ್ ಮಂಗಳಾ

ನನ್ನ-ನಿನ್ನ ನಡುವೆ

ನನ್ನ-ನಿನ್ನ ನಡುವೆ
ಗೋಡೆ ಎಬ್ಬಿಸಿದವರಾರು
ಪರದೆ ಬಿಟ್ಟವರಾರು?
ಕತ್ತಲು ತುಂಬಿದವರಾರು?
ಮಂಜು ಕವಿಸಿದವರಾರು?
ನಿನ್ನಿಂದ ನನ್ನ ದೂರ ಮಾಡಿದವರಾರು?

ನನ್ನ-ನಿನ್ನ ನಡುವೆ
ಕಂದ ತೋಡಿದವರಾರು
ಕೋಟೆ ಕಟ್ಟಿದವರಾರು
ಗಡಿಯ ಕೊರೆದವರಾರು
ನಿನ್ನಿರುವ ಮರೆವಂತೆ
ಮಂಪರು ಕವಿಸಿದವರಾರು?

ಅರಿವು-ಮರೆವಿನಾಟದಲಿ
ಕಳೆದು ಹೋಯಿತೆ ಕೊಂಡಿ
ಮರೆವು ಮತಿಯನು ನುಂಗಿ
ಅರಿವು ತಿಳಿವನು ನುಂಗಿ
ಅರಸುತ್ತಾ ಅಲೆಯುತ್ತಾ
ಗುರು ಬಾಗಿಲಾ ತಟ್ಟಿ
ಮೊರೆಯಿಟ್ಟಿತು ಜೀವ
ತನ್ನ ತಾ ಕಾಣಲಿಕೆ
ದಾರಿ ತೋರೆಂದು.

Previous post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
Next post ನಾನು… ನನ್ನದು
ನಾನು… ನನ್ನದು

Related Posts

ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...
ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...

Comments 1

  1. Kallappa Banave
    Jun 12, 2021 Reply

    ಕವನ ಬಹಳ ಚನ್ನಾಗಿದೆ ಅಕ್ಕಾ, ಯಾವ ಗುರುವಿನ ಕದ ತಟ್ಟಿದಿರಿ ಎಂದು ತಿಳಿಯಬಹುದೇ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಭಾರ
ಭಾರ
October 6, 2020
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
Copyright © 2026 Bayalu